ಯಾರಿಗೆ ಬೇಕು ಈ ಜಿಂಕೆ?
Team Udayavani, Apr 5, 2018, 12:30 PM IST
ಅದೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಸಿಂಹ ಮತ್ತು ಚಿರತೆ ಎರಡೂ ಜಿಂಕೆಗಾಗಿ ಹೊಂಚು ಹಾಕುತ್ತಿದ್ದವು. ತಾವಿಬ್ಬರೂ ಒಂದೇ ಜಿಂಕೆಗೆ ಹೊಂಚು ಹಾಕುತ್ತಿರುವ ವಿಷಯ ಅವೆರಡಕ್ಕೂ ಗೊತ್ತಿರಲಿಲ್ಲ. ಅದೇ ಸಮಯಕ್ಕೆ ಸಪ್ಪಳವಾದಂತಾಗಿ ಜಿಂಕೆ ತಲೆಯೆತ್ತಿ ಸುತ್ತಲೂ ನೋಡಿತು. ಮೊದಲಿಗೆ ಏನೂ ಕಾಣಲಿಲ್ಲ. ಅದಕ್ಕೇ ಹುಲ್ಲು ಮೇಯುವುದನ್ನು ಮುಂದುವರಿಸಿತು. ಅಷ್ಟರಲ್ಲಿ ಸಿಂಹ ಮತ್ತು ಚಿರತೆ ಒಂದನ್ನೊಂದು ನೋಡಿದವು. ಇಬ್ಬರೂ ಆ ಜಿಂಕೆಗೆ ಹೊಂಚು ಹಾಕಿರುವುದು ಗೊತ್ತಾಗಿ ಹೋಯಿತು. ಮೊದಲು ಜಿಂಕೆಯನ್ನು ತಾವೇ ಬೇಟೆಯಾಡಬೇಕೆಂದು ಮುಂದೆ ಬರತೊಡಗಿದವು. ಜಿಂಕೆ ಅವೆರಡನ್ನೂ ನೋಡಿ ಪ್ರಾಣ ಭಯದಿಂದ ಓಟ ಕಿತ್ತಿತು. ಓಡಿ ಓಡಿ ಸುಸ್ತಾದ ಜಿಂಕೆ ಆಯಾಸಗೊಂಡು ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ಪ್ರಜ್ಞೆ ತಪ್ಪಿ ಬಿದ್ದ ಜಿಂಕೆಯನ್ನು ಕಂಡು ಸಿಂಹ ಮತ್ತು ಚಿರತೆಗೆ ಖುಷಿಯಾಯಿತು.
ಸಿಂಹವು “ಇದು ನನ್ನ ಆಹಾರ’ ಎಂದು ಹೇಳಿತು. ಚಿರತೆ ಪ್ರತಿಕ್ರಿಯಿಸುತ್ತ “ಮೊದಲು ಜಿಂಕೆಯನ್ನು ನಾನು ನೋಡಿದ್ದು, ಹಾಗಾಗಿ ಇದು ನನಗೆ ಸೇರಬೇಕು’ ಎಂದು ಹೇಳಿತು. ಜಿಂಕೆಗಾಗಿ ಎರಡೂ ಪ್ರಾಣಿಗಳು ಜಗಳಕ್ಕಿಳಿದವು. ಕಾಡಿನಲ್ಲಿ ಇವುಗಳ ಘರ್ಜನೆ ಪ್ರತಿಧ್ವನಿಸಿತು. ಇತರೆ ಪ್ರಾಣಿಗಲೆಲ್ಲಾ ಸುತ್ತ ನೆರೆದರು. ಸಿಂಹ ಮತ್ತು ಚಿರತೆ ಎರಡಕ್ಕೂ ಜಿಂಕೆಯನ್ನು ಪಡೆಯುವುದು ಪ್ರತಿಷ್ಠೆಯ ವಿಷಯವಾಯಿತು. ಜಗಳ ಆಡುವುದರಲ್ಲಿ ಅವೆರಡೂ ಮಗ್ನರಾಗಿದ್ದ ಸಮಯದಲ್ಲಿ ಜಿಂಕೆಗೆ ಎಚ್ಚರವಾಗತೊಡಗಿತು. ಸರಿಯಾದ ಸಮಯ ನೋಡಿ ಅದು ಅಲ್ಲಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾಯಿತು.
ಸುತ್ತಲೂ ನೆರೆದಿದ್ದ ಪ್ರಾಣಿಗಳು ಈ ತಮಾಷೆಯನ್ನು ನೋಡಿ ಕೇಕೆ ಹಾಕಿದವು. ಚಿರತೆ ಮತ್ತು ಸಿಂಹಕ್ಕೆ ಅವಮಾನವಾದಂತಾಯಿತು. ಅವೆರಡೂ ಅಲ್ಲಿಂದ ಸಪ್ಪೆ ಮುಖದೊಂದಿಗೆ ಹೊರಟವು.
– ಸಣ್ಣಮಾರಪ್ಪ, ಚಂಗಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್