ನಿಮಗಿದು ತಿಳಿದಿರಲಿ
Team Udayavani, Oct 26, 2017, 11:16 AM IST
1. ಪ್ರಾಣಿಗಳ ನಡವಳಿಕೆಯ ಅಧ್ಯಯನಕ್ಕೆ ಎಥಾಲಜಿ ಎಂದು ಕರೆಯುತ್ತಾರೆ
2. ಮೇ 29ನ್ನು ಮೌಂಟ್ ಎವರೆಸ್ಟ್ ದಿನವನ್ನಾಗಿ ಆಚರಿಸುತ್ತಾರೆ
3. ಪಂಪ ಮಹಾಕವಿ ತನ್ನನ್ನು ತಾನು “ಕದಳಿಗರ್ಭಶಾಮಂ’ ಎಂದು ಕರೆದುಕೊಂಡಿದ್ದಾನೆ
4. ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್. ಅವರು ಮೂಲತಃ ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯವರು.
5. ಹತ್ತಿ ಬೆಳೆ ಬೆಳೆಯಲು ಕಪ್ಪು ಮಣ್ಣು ಬಹಳ ಸೂಕ್ತ
6. “ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963’ರ ಪ್ರಕಾರ ಕರ್ನಾಟಕದ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂದಿನ ನಾಮಫಲಕ ಕನ್ನಡದಲ್ಲಿಯೇ ಇರಬೇಕು.
7. ನಮ್ಮ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂನಷ್ಟು ತೂಕ ಹೊಂದಿವೆ. ಮಾನವನ ಕಣ್ಣು ಸುಮಾರು 10 ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲ ಸಾಮರ್ಥ್ಯ ಹೊಂದಿವೆ.
8. ಮನುಷ್ಯನನ್ನು ಹೊರತುಪಡಿಸಿದರೆ ಆಹಾರಕ್ಕಾಗಿ ವ್ಯವಸಾಯದಲ್ಲಿ ತೊಡಗುವ ಏಕೈಕ ಜೀವಿಯೆಂದರೆ ಅದು ಇರುವೆ. ಭೂಮಿಯ ಮೇಲೆ 12,000ಕ್ಕೂ ಅಧಿಕ ತಳಿಯ ಇರುವೆಗಳಿವೆ.
9. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು (ಅಕ್ಟೋಬರ್ 31) “ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸಲಾಗುತ್ತದೆ.
10. “ಕಾಗಿನೆಲೆ ಆದಿಕೇಶವ’ ಅಂಕಿತನಾಮದ ಕನಕದಾಸರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬಾಡಾದಲ್ಲಿ.