ಕಲಹ ರಹಿತ ಬದುಕಿಗೊಂದು ಸುಂದರ ದಾರಿ!


Team Udayavani, Apr 6, 2019, 6:00 AM IST

e-3

ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು.

ನಾನು ಇಂದಿನಿಂದ ಯಾರ ಜೊತೆಗೂ ಕಲಹ ಮಾಡುವುದಿಲ್ಲ ಅಂತ ಪ್ರತಿಜ್ಞೆ ಮಾಡಿಬಿಡುವುದು ತುಂಬಾ ಸುಲಭ. ಆದರೆ ಅದನ್ನು ಪಾಲಿಸುವುದು ಎಂದಿಗೂ ಸುಲಭವಲ್ಲ. ಮೌನದಿಂದಿರುತ್ತೇನೆ, ಆಗ ಕಲಹಕ್ಕೆ ಅವಕಾಶವೇ ಇರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೂ ಜನರ ಮಧ್ಯೆ ಮೌನವೂ ಕಲಹಕ್ಕೆ ಕಾರಣವಾಗುತ್ತದೆ. ಸಹಬಾಳ್ವೆ ಎಂಬುದು ದೇವರಿಂದಲೇ ನಿರ್ಮಿತವಾದುದು. ಪ್ರಕೃತಿಯ ನಿಯಮವೇ ಕ್ರಿಯೆ-ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತಿರುವಾಗ ನಾವು ಮಾತನಾಡದೇ ಇದ್ದರೂ ಕೇಳಿದ್ದಕ್ಕಾದರೂ ಉತ್ತರ ಕೊಡಲೇ ಬೇಕಾಗುತ್ತದೆ. ನಾವು ಬಯಸುವುದು ಶಾಂತಿಯುತವಾದ ಬದುಕು. ಕಲಹ, ದ್ವೇಷಗಳು ಬೇಕಿಲ್ಲ. ಇವುಗಳಿಂದ ಸಾಧಿಸುವಂಥದ್ದೂ ಏನಿಲ್ಲ. ಆದರೂ ಕೂಡ ಜಗತ್ತಿನ ಅಶಾಂತಿಗೆ ಮೂಲವೇ ಈ ಕಲಹ. ಕಲಹಕ್ಕೆ ಮೂಲ ಕಾರಣ ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬ ಮಾತಿದೆ. ಇದು ಹೊರಗಿನಿಂದಷ್ಟೇ ಸತ್ಯ. ಯಾಕೆಂದರೆ, ಕಲಹದಿಂದಲೇ ಹೆಣ್ಣನ್ನೊ ಮಣ್ಣನ್ನೋ, ಹೊನ್ನನ್ನೋ ಪಡೆದವನಿಗೂ ಕೊನೆಯಲ್ಲಿ ಇಷ್ಟಕ್ಕಾಗಿಯೇ ನಾನು ಕಲಹದಲ್ಲಿ ಕಾಲಹರಣ ಮಾಡಿದೆನಾ? ಅನ್ನಿಸುತ್ತದೆ. ಕೊನೆಗೂ ಅವನಿಗೆ ತೃಪ್ತಿಯಿಲ್ಲ. ನಿಜಕ್ಕೂ ತೃಪ್ತಿ ಯಾವುದು? ಅದೂ ಗೊತ್ತಿಲ್ಲ! ಎಲ್ಲವೂ ಕ್ಷಣಿಕವಾಗಿರುವಾಗ ಕಲಹ ಮಾತ್ರ ಶಾಶ್ವತವಾದ ಶಾಂತಿಯನ್ನು ಕೆಡಿಸಿಬಿಡುತ್ತದೆ. ಇದರಿಂದ ಹೊರಬರುವುದು ಹೇಗೆ?

ಶ್ರೀಮದ್ಭಾಗವತದ ಅವಧೂತೋಪಾಖ್ಯಾನದಲ್ಲಿ ಕಲಹವಿಲ್ಲದೆ ಬದುಕುವ ಬಗೆಯನ್ನು ಹೇಳಲಾಗಿದೆ. ಅವಧೂತರು ಇಲ್ಲೊಂದು ಕುಮಾರಿಯ ಕಥೆಯನ್ನು ಹೇಳುತ್ತಾರೆ. ಕುಮಾರಿಯೊಬ್ಬಳೇ ಮನೆಯಲ್ಲಿರುವಾಗ ಅತಿಥಿಗಳು ಬರುತ್ತಾರೆ. ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಆಕೆ ಅವರ ಭೋಜನಕ್ಕಾಗಿ ಏಕಾಂತದಲ್ಲಿ ಭತ್ತವನ್ನು ಕುಟ್ಟುತ್ತಿದ್ದಳು. ಆಗ ಅವಳ ಕೈಬಳೆಗಳು ಸದ್ದು ಮಾಡತೊಡಗಿದವು. ಈ ಶಬ್ದವನ್ನು ನಿಂದಿತವೆಂದು ಭಾವಿಸಿದ ಹುಡುಗಿ, ಎಲ್ಲಾ ಬಳೆಗಳನ್ನು ತೆಗೆದಿಟ್ಟು, ಎರಡು ಬಳೆಗಳನ್ನು ಮಾತ್ರ ಉಳಿಸಿಕೊಂಡು ಭತ್ತ ಕುಟ್ಟಲು ಆರಂಭಿಸಿದಳು. ಆ ಎರಡು ಬಳೆಗಳೂ ಶಬ್ದಮಾಡಲು ತೊಡಗಿದಾಗ ಮತ್ತೆ ಒಂದನ್ನು ತೆಗದಿಟ್ಟು ತನ್ನ ಕೆಲಸ ಮುಂದುವರಿಸುತ್ತಾಳೆ. ಆಗ ಯಾವ ಸದ್ದೂ ಉಂಟಾಗಲಿಲ್ಲ. ಇಲ್ಲೊಂದು ಪಾಠವಿದೆ. ಅನೇಕ ಜನರು ಒಂದೆಡೆ ಇದ್ದರೆ ಕಲಹ ಉಂಟಾಗುತ್ತದೆ. ಇಬ್ಬರು ಜೊತೆಯಲ್ಲಿದ್ದರೂ ವ್ಯರ್ಥವಾದ ಮಾತುಗಳು ನಡೆಯುತ್ತವೆ. ಅದಕ್ಕಾಗಿ ಆ ಹೆಣ್ಣುಮಗಳ ಒಂದೇ ಒಂದು ಬಳೆಯಂತೆ ಒಬ್ಬನೇ ಇದ್ದು ಬಿಡಬೇಕು ಎಂಬ ಪಾಠ ಈ ಕತೆಯಲ್ಲಿದೆ. ಇದನ್ನು ನಾನು ಕಲಿತೆ, ಇದು ಕಲಹ ನಿವಾರಣೆಗೆ ಸುಲಭ ಮಾರ್ಗ ಎನ್ನುತ್ತಾರೆ. ಎಷ್ಟು ಚಂದದ ಪಾಠ ನೋಡಿ. ಇದನ್ನೇ ನಮ್ಮ ಇವತ್ತಿನ ಬದುಕಿಗೆ ಅಳವಡಿಸಿ ನೋಡುವ.

ಸಂಸಾರಿ, ನಾಲ್ಕು ಜನರ ನಡುವೆಯೇ ಬದುಕ ಬೇಕಾದ ಅನಿವಾರ್ಯ ಇರುವುದರಿಂದ ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ಇನ್ನೊಂದು ಒಳಾರ್ಥ ಇಲ್ಲಿದೆ. ಯಾವುದು ಸುಖಾಸುಮ್ಮನೆ ಶಬ್ದ ಅಂದರೆ ಕಲಹಕ್ಕೆ ಕಾರಣವಾಗುವುದೋ ಅವನ್ನು ಗಮನಿಸಬೇಕು. ಈ ಕಥೆಯಲ್ಲಿ ಆ ಕುಮಾರಿ ಮಾಡಿದಂತೆ. ಅಲ್ಲಿ ಭತ್ತ ಕುಟ್ಟುವ ಸದ್ದೂ ಇತ್ತು; ಬಳೆಗಳ ಶಬ್ದವೂ ಇತ್ತು. ಆದರೆ ಬಳೆಗಳು ಸದ್ದು ಅಗತ್ಯವಿಲ್ಲದ್ದು. ಅದನ್ನು ಆ ಕುಮಾರಿ ಹೇಗೆ ನಿವಾರಿಸಬೇಕೆಂಬುದನ್ನು ಅರಿತುಕೊಂಡಳು. ಅಂತೆಯೇ ಕೇವಲ ಮಾತು-ನಡೆಗಳು ಜಗಳಕ್ಕೆ ಕಾರಣವಾಗುವುದಿಲ್ಲ, ಯಾವುದು ಕಲಹಕ್ಕೆ ಕಾರಣವಾಗುವುದೋ ಅದು ಕೇವಲ ಮಾತಾಗಿ ಉಳಿದಿರುವುದಿಲ್ಲ. ಎಷ್ಟು ಅಗತ್ಯವೋ ಅಷ್ಟನ್ನೇ ಪ್ರೀತಿಯಿಂದ ಮನಕ್ಕೊಪ್ಪುವಂತೆ ಹೇಳುವ ಜಾಣ್ಮೆಯನ್ನು ಮತ್ತು ಬದುಕಿಗೆ ಎಷ್ಟು ಅಗತ್ಯವೋ ಅಷ್ಟನ್ನೇ ಹೊಂದಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಲು ಈ ಪಾಠ ಮಾದರಿ. ಹೇಳುವ ಕಲೆಯೊಂದೇ ಅಲ್ಲ, ಕೇಳುವ ಕಲೆಯನ್ನೂ ಅರಿತಿರಬೇಕು; ಬದುಕು ಬಂಗಾರವಾಗಲು.

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.