ದಯೆಯ ಅನುಸಂಧಾನ


Team Udayavani, Nov 2, 2019, 4:06 AM IST

dayeya

ಶಿವನು ನಿರ್ಮಿಸಿದನು ಮಾನವನು
ಮಾನವರು ರಚಿಸಿಹರು ಜಾತಿ- ಮತಗಳನು
ಜಾತಿ- ಮತಗಳೆಷ್ಟಾದರೇನು, ನೀತಿಯೊಂದಲ್ಲವೇ?
ನೀತಿ ನಿಯಮದಿ ನಿಲ್ಲೆ ಮಹಾಮಾನವನೆಂದ ನಮ್ಮ ಮೃಡಗಿರಿ ಅನ್ನದಾನೀಶ

ಮಾನವನು ಶಿವ ನಿರ್ಮಿತನಾದರೆ, ಜಾತಿಯು ಮಾನವ ನಿರ್ಮಿತ. ಜಾತಿ- ಮತಗಳೆಷ್ಟಾದರೂ ನೀತಿ- ನಿಯಮಗಳೇ ಮಾನವಧರ್ಮದ ಮೇರುದಂಡವಾಗಿದೆ. ಕಾರ್ಯತತ್ಪರನಾಗಲು ಜೀವನದಲ್ಲಿ ಮೊದಲು ಧೈರ್ಯ ಬೇಕು. ಧೃತಿಯಿಂದ ಸತ್ಕಾರ್ಯಗಳು ಸಿದ್ಧಿಸುತ್ತವೆ. ಶ್ರೇಯಸ್ಸಾಧನೆಯಲ್ಲಿ ಧೃತಿ ಮುಖ್ಯ. ದುರ್ಮಾರ್ಗದತ್ತ ಧೈರ್ಯ ಪ್ರವೃತ್ತರಾದರೆ, ಮಾನವನು ದಾನವನಾಗುವನು. ಸತ್ಯ, ಅಹಿಂಸೆಗಳನ್ನು, ನ್ಯಾಯ- ನೀತಿಗಳನ್ನು ಸಾಧಿಸುವಲ್ಲಿ ಧೃತಿ ಅವಶ್ಯವಾಗಿದೆ.

ಶಿಕ್ಷೆಯಿಂದ ಮನುಷ್ಯನು ಸೇಡಿನ ಭಾವ ಹೊಂದಬಹುದು. ಕ್ಷಮೆಯಿಂದ ಮನಃಪರಿವರ್ತನೆ ಹೊಂದಲು ಸಾಧ್ಯವಿದೆ. ಧೃತಿ, ಕ್ಷಮೆಗಳು ಮನದಟ್ಟಾಗಲು ದಯೆಯ ಅನುಸಂಧಾನ ಪ್ರಮುಖವಾಗಿದೆ. ಬಹಿರಿಂದ್ರಿಯ ನಿಗ್ರಹದಿಂದ ಧೃತಿ, ಕ್ಷಮೆಗಳು ಭದ್ರವಾಗಿರುತ್ತವೆ. ಆರ್ಥಿಕ ಸಮತೆಯನ್ನು ಸಾಧಿಸಲು ಆಸ್ಥೆಯ ವ್ರತವು ಮಹತ್ವದ್ದಾಗಿದೆ. ಇದರಿಂದ ಸಾಮಾಜಿಕ ಜೀವನದಲ್ಲಿ ಕೊರತೆ ಬಾರದು. ಅಭಾವ ಪರಿಸ್ಥಿತಿ ದೂರಾಗುವುದು.

ಅದೇರೀತಿ ಅಂತರಂಗ, ಬಹಿರಂಗ ಸಾಧನೆಗಾಗಿ ಶೌಚವು ಅವಶ್ಯ. ಒಳಗೂ- ಹೊರಗೂ ಶುಭ್ರವಾದ ಲಾಂದ್ರದ ಹರಳು ಅಧಿಕ. ಬೆಳಕನ್ನು ನೀಡುವಂತೆ ಶೌಚವುಳ್ಳವನು ಸುಜ್ಞಾನ ಬೆಳಕನ್ನು ಬೀರುವನು. ಶೌಚದಿಂದ ದೇವಪ್ರೀತಿಗೆ ಪಾತ್ರನಾಗುವನು. ದೇವನೊಲುಮೆಗೆ ಅಂತಃ ಶೌಚವೇ ಮೂಲವಾಗಿದೆ. ಪರಿಶುದ್ಧ ಹಾಗೂ ನಿಶ್ಚಲವಾದ ಮನವೇ ಪರಮಾತ್ಮನ ಸಾûಾತ್ಕಾರದ ಕಾರಣ ವಸ್ತು. ಮೋಕ್ಷದ ಸಾಧನ. ಮನೋನಿಗ್ರಹಿಯಾದ ಮೇಲೆ ಧರ್ಮಬುದ್ಧಿಯವರಾಗಿ, ಅಧ್ಯಾತ್ಮ ವಿದ್ಯೆಯನ್ನು ಸಂಪಾದಿಸುವನು. ಇದು ಮಾನವನಿಗೆ ಸುಜ್ಞಾನ ನೀಡುವುದು.

ಆತ್ಮಸಾಕ್ಷಾತ್ಕಾರದ ಅರಿವು, ಸತ್ಯಾನ್ವೇಷಣೆಯ ಪ್ರಮುಖಘಟ್ಟ. ಈ ಸತ್ಯಾನ್ವೇಷಣೆಯೇ ಮನುಕುಲದ ಗುರಿ. ಸತ್ಯವನ್ನು ಅರಿತವನು, ಕ್ರೋಧವನ್ನು ಕಳಕೊಳ್ಳುವನು. ಅವನಲ್ಲಿ ಅಕ್ರೋಧ ಅಥವಾ ಮಹಾಶಾಂತಿ ಲಭಿಸುವುದು. ಇದುವೇ ಮಾನವಧರ್ಮದ ಫ‌ಲ. ವಿಶ್ವಮಾನವ ಧರ್ಮವನ್ನು ಸಾಧಿಸ ಬಯಸುವವರು ಧರ್ಮದ ಧೃತಿ- ಕ್ಷಮಾದಿ ಹತ್ತು ಅಂಶಗಳನ್ನು ಮೈಗೂಡಿಸಿಕೊಂಡರೆ, ಮಾನವಧರ್ಮದ ಯಥಾರ್ಥತೆಯ ಅರಿವಾಗುವುದು.

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.