ಅಣ್ಣಾವ್ರೇ ನನ್ನೊಳಗಿದ್ದಾರೆ, ಏನು ಮಾಡಲಿ?


Team Udayavani, May 19, 2018, 12:58 PM IST

2563.jpg

ನಾನು ಮಾಡುವ ಪಾತ್ರಕ್ಕೂ, ಬದುಕಿಗೂ ಯಾವ ಅಂತರವೂ ಇಲ್ಲ..ಹಾಗಾಗಿ ಅಶೋಕ್‌ ಬಸ್ತಿ ಕಾಣೆ ಆಗಿದ್ದಾನೆ…

“ನೋಡಪ್ಪಾ, ನೀನು ಮಾಮೂಲಿ ಪಾತ್ರಗಳನ್ನು ಮಾಡ ಬೇಡ. ಅದನ್ನು ಮಾಡೋಕೆ ತುಂಬಾ ಜನ ಇದ್ದಾರೆ. ನೀನು ರಾಜ್‌ಕುಮಾರ್‌ ಅವರನ್ನು ಹೋಲುತ್ತೀಯ. ಹಾಗಾಗಿ, ಅವರ ಪಾತ್ರಗಳನ್ನೇ ಅನುಸರಿಸು. ಇದು ಹೆತ್ತವರು ಕೊಟ್ಟಪುಣ್ಯ ಅಂತ ತಿಳ್ಕೊ. ಎಷ್ಟೋ ಜನ ರಾಜಕುಮಾರರ ರೀತಿ ಇರಬೇಕು ಅಂದುಕೊಳ್ಳುತ್ತಾರೆ. ಅವರಿಗೆ ಈ ಭಾಗ್ಯ ಇಲ್ಲ. ನಿನಗೆ ಮಾತ್ರ ಒಲಿದಿದೆ – ಹೀಗೆ ಹೇಳಿ ನಮ್ಮ ಗುರುಗಳು ಬಣ್ಣ ಹಚ್ಚಿಸಿದರು. ಆವತ್ತಿಂದ ಇವತ್ತಿನ ತನಕ ರಾಜುRಮಾರರನ್ನು ಅನುಕರಿ ಸುತ್ತಾ, ಅವರು ಮಾಡಿದ ಪಾತ್ರಗಳನ್ನು ಆವಾಹಿಸಿಕೊಳ್ಳುತ್ತಾ,  ಹಾವ ಭಾವ, ನಡೆ, ನುಡಿ ಎಲ್ಲದರಲ್ಲೂ ರಾಜಕುಮಾರರೇ ಆಗಿ ದ್ದೀನಿ.  ಜನ, “ಓ ರಾಜ್‌ಕುಮಾರ್‌ ನೋಡ್ರಪ್ಪಾ’ ಅಂಥ ಚಪ್ಪಾಳೆ ತಟ್ಟುತ್ತಾರೆ. ಅಂಥ ಸಂದರ್ಭದಲ್ಲಿ ತುಂಬಾ ಖುಷಿಯಾಗುತ್ತೆ. ಮನೆಯಲ್ಲಿ ದೇವರಿಗಿಂತ ಹೆಚ್ಚು ಪೂಜಿಸುವುದು ಅಣ್ಣಾವ್ರನ್ನ.  ಹೀಗಾಗಿ ನಾನು ರಾಜಕುಮಾರರ ನೆರಳಾಗಿದ್ದೇನೆ.

ಹೆಸರು, ಹಣ ಎಲ್ಲವೂ ಸಂದಿದ್ದು ಅಣ್ಣ ನಿಂದಲೇ.  ಹೀಗೆ ನನ್ನ ಸಾರ್ವಜನಿಕ, ಖಾಸಗಿ ಬದುಕಿನ ಪೂರ್ತಿ ಹಾಸು ಹೊಕ್ಕಾಗಿರುವು ದರಿಂದ ಎಷ್ಟೋ ಸಲ ಅನಿಸಿದ್ದು ಇದೆ. ನನ್ನೊಳಗಿರುವ ನಿಜವಾದ ನಟ ಅಶೋಕ್‌ ಬಸ್ತಿ ಎಲ್ಲಿ ಹೋದ ಅಂತ. ಅವನಿಗಾಗಿ ತಡಕಾಡಿದ್ದೇನೆ. ಸಿಗದೇ ಇದ್ದಾಗ. ರಾಜಕುಮಾರರನ್ನು ಇಷ್ಟೊಂದು ಅನುಕರಣೆ ಮಾಡಬೇಕಾ ಅಂತ ಅನಿಸಿದ್ದೂ ಉಂಟು. ಆದರೆ ಬದುಕಲ್ಲಿ ಅವರ ಕೈ ಹಿಡಿದುಕೊಂಡು ಬಹಳ ದೂರ ಬಂದು ಬಿಟ್ಟಿದ್ದೇನೆ. ಏನು ಮಾಡುವುದು? 

ಉತ್ತರ ಹುಡುಕಲೇ ಬೇಕು ಅಂತ ನನ್ನದೇ ಸ್ವಂತಿಕೆಯಲ್ಲಿ ಪಾತ್ರ ಮಾಡಲು ಮುಂದಾದೆ. ಉತ್ತರ ಕರ್ನಾಟಕದ ಭಾಷೆಯನ್ನು ಬಳಸಿದೆ. ಆದರೆ ನೋಡುವ ಜನ ಮತ್ತೆ ನನ್ನಲ್ಲಿ ರಾಜುRಮಾರರನ್ನೇ ಹುಡುಕಿದರು. 

“ಬೇಡ ರೀ. ನೀವು ಏನೇ ಮಾಡಿದರೂ ಅಶೋಕ ಬಸ್ತಿ ಕಾಣಾ¤ ಇಲ್ಲ. ರಾಜುRಮಾರ್‌ ಆಗೇ ಕಾಣಿ¤àರಿ’ ಅಂದರು.  “ಇಲ್ಲ, ನಿಮಗೆ ಅಂಥ ಭಾವನೆ ಬರಬಾರದು ಅಂತಲೇ ನನ್ನ ಪಾತ್ರ ಉತ್ತರ ಕರ್ನಾಟಕದ ಭಾಷೆ ಮಾತನಾಡುತ್ತ ಇರೋದು ಅಂದರ.  “ಇಲ್ಲ ನೀವು ಏನೇ ಮಾಡಿದರೂ ರಾಜಕುಮಾರ್‌ ರೀತಿನೇ ಕಾಣಿ¤àರಿ’ ಅಂದು ಬಿಟ್ಟರು.

ಹಾಗಂತ, ರಾಜ್‌ಕುಮಾರರಿಂದ, ಅವರ ಪಾತ್ರಗಳ ಅನುಕರಣೆಯಿಂದ ನನಗೆ ತೊಂದರೆ ಆಗಿಲ್ಲ. ಬದಲಾಗಿ, ರಾಜಕುಮಾರ್‌ ಪಾತ್ರಗಳಿಂದಲೇ ಇಡೀ ಜಗತ್ತು ನನ್ನನ್ನು ಗುರುತಿಸುವಂತೆ ಮಾಡಿದೆ. ಆದರೆ ನನ್ನೊ ಳಗಿರುವ ಒಬ್ಬ ನಟ ಕಾಣೆಯಾಗಿಬಿಟ್ಟನಲ್ಲ ಅನ್ನೋ ಬೇಸರ ಹಾಗೇ ಇದೆ. 
 ರಾಜ್‌ಕುಮಾರರು ರಂಗದ ಮೇಲೆ, ರಂಗದ ಹೊರಗೆ ಇಂಚಿಂಚೂ ನನ್ನೊಳಗೆ ಸೇರಿಬಿಟ್ಟಿದ್ದಾರೆ.  

ಇವರು ನನ್ನ ಖಾಸಗಿ ಬದುಕಿನ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂದರೆ, ಅಲ್ಲೂ ಕೂಡ ನಾನು ರಾಜುRಮಾರರ ಶಾಂತಿ ಮಂತ್ರ ಪಠಿಸುತ್ತಿರುತ್ತೇನೆ. ಸರಳ ಜೀವನ, ಉಡುಪು, ಯೋಗಾಭ್ಯಾಸ ಎಲ್ಲವೂ ಅವರಿಂದ ಕಲಿತದ್ದೇ.  ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅವರಿಗೆ ಕೋಪ ಬರೋದು. ನನಗೂ ಹಾಗೇ ಆಗಿದೆ. ಎಷ್ಟೋ ಸಲ ಕೋಪ ಬಂದಾಗ “ಒಡಹುಟ್ಟಿದವರು’ ಚಿತ್ರದಲ್ಲಿ ರಾಜುRಮಾರರು ಮನೆ ಬಿಟ್ಟು ಹೋಗ್ತಾರಲ್ಲ. ಒಬ್ಬಂಟಿಯಾಗಿ.  ಹಾಗೇ ನಾನೂ ಏಕಾಂಗಿಯಾಗುತ್ತೇನೆ. ನಂತರ ನನಗೆ ನಾನೇ ಸಮಾಧಾನ ಮಾಡಿಕೊಂಡು ಶಾಂತವಾಗುತ್ತೇನೆ. ದೇವರ ಮುಂದೆ ಕೂತಾಗಲಂತೂ ಅವರಿಗೆ ಒಳ್ಳೇ ಬುದ್ಧಿ ಕೊಡಪ್ಪಾ, ಇವರನ್ನು ಸರಿ ಮಾಡಪ್ಪ ಅಂತ ಕೇಳ್ಳೋಲ್ಲ. ಬದಲಾಗಿ ನನಗೆ ಅವರನ್ನು ಸಹಿಸುವ ಸೈರಣೆ ಕೊಡು ಅಂತ ಕೇಳಿಕೊಳ್ಳುತ್ತೇನೆ. 

 ಹೀಗೆ ರಾಜ್‌ಕುಮಾರ್‌ ಅವರು ನನ್ನ ಪಾಲಿಗೆ ರಂಗದ ಮೇಲೆ ಅಭಿನಯಿಸುವ ಪಾತ್ರವಷ್ಟೇ ಆಗಿಲ್ಲ. ನನ್ನ ಬದುಕೇ ಆಗಿಹೋಗಿದ್ದಾರೆ. 

ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.