ವಿಶ್ವ ಟೆನಿಸ್‌ನಲ್ಲಿ ಚಿಗುರುತ್ತಿವೆ ಏಷ್ಯಾ ಪ್ರತಿಭೆಗಳು 


Team Udayavani, Feb 9, 2019, 12:30 AM IST

50.jpg

ವರ್ಷಾರಂಭದ ಗ್ರ್ಯಾನ್‌ಸ್ಲಾಮ್‌ “ಆಸ್ಟ್ರೇಲಿಯನ್‌ ಓಪನ್‌’ ಮಹಿಳಾ ಸಿಂಗಲ್ಸ್‌ನಲ್ಲಿ ನವೋಮಿ ಒಸಾಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಜಪಾನಿ ಕ್ರೀಡಾತಾರೆಯ ಪಾಲಿಗೆ ಇದು ನಿಜಕ್ಕೂ ಅಮೋಘ ಸಾಧನೆ. ಏಷ್ಯಾದ ಆಟಗಾರ್ತಿಯೊಬ್ಬರು ಸತತ 2 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದರೆಂಬುದು ನಂಬಲೇಬೇಕಾದ ವಿದ್ಯಮಾನ. 

ವರ್ಷಾಂತ್ಯದ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದು ಮೊದಲ ಗ್ರ್ಯಾನ್‌ಸ್ಲಾಮ್‌ ಟ್ರೋಫಿಗೆ ಮುತ್ತಿಕ್ಕಿದ ಒಸಾಕಾ, ಈಗ “ಮೆಲ್ಬರ್ನ್ ಪಾರ್ಕ್‌ ಕ್ವೀನ್‌’ ಆಗಿಯೂ ಮೆರೆದಾಡಿದರು. ಕೇವಲ ಯುರೋಪಿಯನ್ನರ ಮೆರೆದಾಟಕ್ಕೆ ಮೀಸಲಾಗಿರುವ ಜಾಗತಿಕ ಟೆನಿಸ್‌ನಲ್ಲಿ ಏಷ್ಯನ್ನರೂ ದಿಟ್ಟ ಹೆಜ್ಜೆಗಳನ್ನಿಡುತ್ತಿರುವುದರ ಸೂಚನೆ ಇದೆಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ. ಹಾಗೆಯೇ ಈ ಸಂದರ್ಭದಲ್ಲಿ ಭಾರತದಿಂದ ಯಾರು ಎಂಬ ಪ್ರಶ್ನೆ ಮೂಡುವುದೂ ಸಹಜ.

– ಚೀನೀ ಮಿಂಚು-ಲೀ ನಾ
ಡಬಲ್ಸ್‌ಗಿಂತ ಮಿಗಿಲಾಗಿ ಸಿಂಗಲ್ಸ್‌ ಪ್ರಶಸ್ತಿ, ಅದರಲ್ಲೂ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಚಾಂಪಿಯನ್‌ ಆಗುವುದರಲ್ಲಿ ಹೆಚ್ಚಿನ ಗರಿಮೆ ಇದೆ. ಕೇವಲ ಮಾರ್ಟಿನಾ ನವ್ರಾಟಿಲೋವಾ, ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್‌ ಮೊದಲಾದ ಯೂರೋಪ್‌, ಅಮೆರಿಕದ ಹೆಸರುಗಳೇ ಇಲ್ಲಿ ರಾರಾಜಿಸುತ್ತಿರುವಾಗ ಜಪಾನಿನ ನವೋಮಿ ಒಸಾಕಾ ಹೆಸರು ಹೊಳೆದದ್ದು ಏಶ್ಯನ್ನರಲ್ಲಿ ಸಹಜವಾಗಿಯೇ ರೋಮಾಂಚನವಾಗುತ್ತದೆ.

ಏಷ್ಯಾದ ಮಟ್ಟಿಗೆ ಟೆನಿಸ್‌ ಪ್ರಾಬಲ್ಯ ಹೊಂದಿರುವ ದೇಶಗಳೆಂದರೆ ಜಪಾನ್‌, ಚೀನ ಮತ್ತು ಭಾರತ. ಇವುಗಳಲ್ಲಿ ಭಾರತ ಹೊರತುಪಡಿಸಿ ಉಳಿದೆರಡು ದೇಶಗಳಲ್ಲಿ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ತಾರೆಗಳು ಮೂಡಿಬಂದಿವೆ. ಒಸಾಕಾಗಿಂತ ಮೊದಲು ಚೀನಾದ ಲೀ ನಾ ಅಮೋಘ ಸಾಧನೆಯೊಂದಿಗೆ ಸುದ್ದಿಯಾಗಿದ್ದರು. 2011ರ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಲೀ ನಾ ಹೊಸ ಇತಿಹಾಸವನ್ನೇ ಬರೆದರು. ಏಷ್ಯಾಕ್ಕೆ ಮೊದಲ ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ ತಂದಿತ್ತ ಹಿರಿಮೆ ಈ ಚೀನೀ ಆಟಗಾರ್ತಿಯದ್ದಾಗಿತ್ತು. ಇದು ಆಕಸ್ಮಿಕವಲ್ಲ ಎಂದು ನಿರೂಪಿಸಲೇನೋ ಎಂಬಂತೆ, 3 ವರ್ಷಗಳ ಬಳಿಕ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಯನ್ನೂ ಗೆದ್ದರು. 2011 ಮತ್ತು 2013ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ರನ್ನರ್ ಅಪ್‌ ಎನಿಸಿದ ಹೆಗ್ಗಳಿಕೆಯೂ ಈಕೆಯ ಪಾಲಿಗಿದೆ. ಈಗ ಒಸಾಕಾ ಸರದಿ. ಹಾಗೆಯೇ ಪುರುಷರ ಸಿಂಗಲ್ಸ್‌ನಲ್ಲಿ ಜಪಾನಿನವರೇ ಆದ ಕೀ ನಿಶಿಕೊರಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಸಮೀಪಿಸುತ್ತ ಇದ್ದಾರೆ.

– ಭಾರತದವರ ಡಬಲ್ಸ್‌ ಆಸಕ್ತಿ
ಭಾರತ ಕೂಡ ಟೆನಿಸ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿರುವ ದೇಶ. ವಿಜಯ್‌ ಅಮೃತ್‌ರಾಜ್‌, ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ, ರಾಮನಾಥನ್‌ ಕೃಷ್ಣನ್‌ ಅವರೆಲ್ಲ ಏಷ್ಯಾದ ಅಗ್ರ-10 ಟೆನಿಸ್‌ ಸಾಧಕರ ಯಾದಿಯಲ್ಲಿ ಕಂಡುಬರುವ ಭಾರತದ ಪ್ರಮುಖರು. ಆದರೆ ಸಿಂಗಲ್ಸ್‌ನಲ್ಲಿ ಅಲ್ಲ. ಜಪಾನ್‌ನಂಥ ಪುಟ್ಟ ದೇಶ ವಿಶ್ವ ಮಟ್ಟದಲ್ಲಿ ಮಿಂಚುತ್ತಿರುವಾಗ ಭಾರತದಿಂದ ಯಾರಾದರೂ ಈ ಎತ್ತರ ತಲುಪಬಾರದಿತ್ತೇ ಎಂಬ ಪ್ರಶ್ನೆ ಕಾಡುವುದು ಸಹಜ. ಭಾರತದ ಆಶಾಕಿರಣಗಳಾಗಿ ಗೋಚರಿಸುತ್ತಿರುವವರಲ್ಲಿ ಅಂಕಿತಾ ರೈನಾ, ಕರ್ಮನ್‌ ಕೌರ್‌ ಥಾಂಡಿ ಮಾತ್ರ. ಆದರೆ ಇಬ್ಬರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ಇನ್ನೂರರಾಚೆಯ ಸ್ಥಾನದಲ್ಲಿದ್ದಾರೆ. ಭಾರತೀಯ ಟೆನಿಸ್‌ ಫೆಡರೇಶನ್‌ ಚಿಗುರು ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರೂ ಎಲ್ಲರೂ ಡಬಲ್ಸ್‌ನಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇವರ ಆಸಕ್ತಿ ಸಿಂಗಲ್ಸ್‌ನತ್ತ ಹರಿಯುವುದು ಮುಖ್ಯ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.