ಬೆಟ್ಟಗಳ ನಡುವಿನ ಶಿವನ ಬೀಡು

ಕಣ್ಮನ ಸೆಳೆವ ಕಲ್ಲೂರ ಜಗದೀಶ

Team Udayavani, Aug 24, 2019, 5:00 AM IST

19

ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರಿನ ಈ ದೇಗುಲವು ಶ್ರೀಶೈಲದ ಶಿವನನ್ನು ನೆನಪಿಸುವಂತಿದೆ.

ಕಲ್ಲೂರಿನಿಂದ 3 ಕಿ.ಮೀ. ದೂರದಲ್ಲಿರುವ ಸಿದ್ಧೇಶ್ವರನು 35 ಮೀ. ಎತ್ತರದಲ್ಲಿರುವ ಬೃಹತ್‌ ಬಂಡೆಗಳ ಮೇಲೆ ಪ್ರತಿಷ್ಠಾಪಿತನಾಗಿದ್ದಾನೆ. ಚಾಲುಕ್ಯರ ಶೈಲಿಯಲ್ಲಿರುವ ಈ ದೇಗುಲಕ್ಕೆ 1893ರಲ್ಲಿ ಪುನರ್‌ಸ್ಪರ್ಶ ಸಿಕ್ಕಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು, ತೆರೆದ ನವರಂಗ ಕಣ್ಸೆಳೆಯುವಂತಿದೆ.

ಗರ್ಭಗುಡಿಯಲ್ಲಿ ಉದ್ಭವ ಲಿಂಗವಿದ್ದು, ಬಲಭಾಗದಲ್ಲಿ ಹಸಿರು ಮಚ್ಚೆ ಗೋಚರವಾಗುತ್ತದೆ. ಇದನ್ನು “ಭಕ್ತರು ಸಿದ್ಧೇಶ್ವರನ ಬಲಗಣ್ಣು’ ಅಂತಲೇ ನಂಬಿದ್ದಾರೆ. ಅಲ್ಲಿ ಝರಿಯೂ ಹರಿಯುತ್ತದೆ. “ಅಮರ ಶಿಲ್ಪಿ’ ಜಕಣಾಚಾರಿಯ ಕಲಾಕುಸುರಿ ಈ ದೇಗುಲದ ಪ್ರಧಾನ ಆಕರ್ಷಣೆ. ಗರ್ಭಗುಡಿಯು ಕದಂಬರ ಶೈಲಿಯ ಗೋಪುರವನ್ನು ಹೊಂದಿದೆ. ಕಲ್ಲಿನ ಕಂಬಗಳ ಕೆತ್ತನೆ ಮನ ಸೆಳೆಯುತ್ತದೆ.

ಬಲಭಾಗದ ಬೆಟ್ಟದ ಅಂಚಿನಲ್ಲಿ ಕಲ್ಯಾಣ ಬಸವೇಶ್ವರರ ಚಿಕ್ಕ ದೇಗುಲವಿದೆ. ಬಸವಣ್ಣನವರು ಕೂಡಲಸಂಗಮಕ್ಕೆ ತೆರಳುವಾಗ ಇಲ್ಲಿ ಕೆಲಕಾಲ ತಂಗಿದ್ದರಂತೆ. ಅಲ್ಲದೆ, ಚಿತ್ರದುರ್ಗದ ಮುರುಘರಾಜೇಂದ್ರ ಶ್ರೀಗಳು, ಎಡೆಯೂರು ಕ್ಷೇತ್ರದ ಮೂಲ ಪೀಠಾಧೀಶರು ಮತ್ತು ಮುನಿಗಳು ತಪಗೈದ ಪುಣ್ಯ ತಾಣವಿದು. ದೇಗುಲದ ಹಿಂಭಾಗ ಗವಿಯಿದ್ದು, ಶಬರಿಕೊಳ್ಳದವರೆಗೆ ಚಾಚಿದೆ ಎಂದು ಹೇಳುತ್ತಾರೆ. ಅದರ ಮೇಲ್ಭಾಗದಿಂದ ಆಲದ ಜಡೆಯಲ್ಲಿ ನೀರು ಉಕ್ಕುತ್ತದೆ. ಭಕ್ತರಿಗೆ ಇದು ತೀರ್ಥಪ್ರಸಾದ.

ಯುಗಾದಿಯ ಪಾಡ್ಯದ ದಿನದಂದು ಸಾಯಂಕಾಲ, ಸಿದ್ಧೇಶ್ವರ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ದೇಗುಲದ ಪೂಜೆಯ ಕಾರ್ಯವನ್ನು ಕಲ್ಲೂರ ಗ್ರಾಮದ ಹೂಗಾರ ಮನೆತನದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವರ ಜಾತ್ರೆ ಡಿಸೆಂಬರ್‌ನಲ್ಲಿ ಜರುಗುತ್ತದೆ. ದೇಗುಲದ ಟ್ರಸ್ಟ್‌ ಅಧ್ಯಕ್ಷ ಚಂದ್ರಶೇಖರ ಮಟ್ಟಿಯವರ ಪರಿಶ್ರಮದ ಫ‌ಲವಾಗಿ ಎರಡು ಕಲ್ಯಾಣ ಮಂಟಪಗಳು ನಿರ್ಮಾಣಗೊಂಡಿವೆ. ದಾಸೋಹ ಭವನವು ಅಷ್ಟೇ ಅಚ್ಚುಕಟ್ಟಾಗಿ ತಲೆಯೆತ್ತಿದೆ. ಪ್ರತಿ ಅಮಾವಾಸ್ಯೆ ಹಾಗೂ ಸೋಮವಾರಗಳಂದು ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ.

ಸಂಜೀವಿನಿ ತೀರ್ಥ..!
ಬೆಟ್ಟದ ಮೇಲ್ಭಾಗದಲ್ಲಿ ನೂರಾರು ವರ್ಷಗಳಿಂದ ಆಲದ ಬೇರುಗಳು ಜಟೆಯಂತೆ ಒಂದಕ್ಕೊಂದು ಹೆಣೆದುಕೊಂಡು, ಬೆಟ್ಟದಡಿಯಲ್ಲಿ ಇಳಿದು, ಗಂಗೆಯ ಪಡಿಯಲ್ಲಿ ನೀರಿನ ಸಿಂಚನ ಮಾಡುತ್ತಿವೆ. “ಈ ನೀರು ಮೂಲಿಕೆ ಸಸ್ಯಗಳ ಬೇರುಗಳ ಮೂಲಕ ಬರುವ ಕಾರಣ, ಇದು ಔಷಧೀಯ ಗುಣ ಹೊಂದಿದೆ’ ಎನ್ನುತ್ತಾರೆ ಸ್ಥಳೀಯರು.

ದರುಶನಕೆ ದಾರಿ…
ಕಲ್ಲೂರ ಕ್ಷೇತ್ರವು ಬೆಳಗಾವಿಯಿಂದ 115 ಕಿ.ಮೀ., ಸವದತ್ತಿಯಿಂದ 30 ಕಿ.ಮೀ. ಹಾಗೂ ರಾಮದುರ್ಗದಿಂದ 13 ಕಿ.ಮೀ. ಅಂತರದಲ್ಲಿದೆ.

– ಸುರೇಶ ಗುದಗನವರ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.