ವಿವೇಕ- ಅವಿವೇಕದ ನಡುವೆ


Team Udayavani, Feb 22, 2020, 6:05 AM IST

veeveka

ಶ್ರೀಮದ್ರಾಮಾಯಣದ ಒಂದು ಘಟನೆ. ಶ್ರೀರಾಮನಿಗೆ ಜೀವರೂಪವಾದ ಪತ್ನಿಯ ವಿಯೋಗ ಉಂಟಾಗಿದೆ. ರಾವಣಾಸುರನು ಸೀತೆಯನ್ನು ಅಪಹರಿಸಿದ್ದಾನೆ. ಸುಗ್ರೀವನ ಸಖ್ಯದಿಂದ ಸೀತಾನ್ವೇಷಣೆಯ ಮಹತ್ಕಾರ್ಯ ಸಾಧ್ಯವಾಗುತ್ತದೆ ಎಂಬುದಾಗಿ ಕಬಂಧನು ತಿಳಿಸಿರುತ್ತಾನೆ. ಇದಕ್ಕಾಗಿ ರಾಮನು ಸುಗ್ರೀವನ ಸಖ್ಯವನ್ನು ಮಾಡಲು ನಿರ್ಧರಿಸಿ ಸುಗ್ರೀವನಿದ್ದಲ್ಲಿಗೆ, ಋಷ್ಯಮೂಕಪರ್ವತಕ್ಕೆ ಬರುತ್ತಾನೆ.

ಅಲ್ಲಿನ ಸುಗ್ರೀವ ಮೊದಲಾಗಿ ವಾನರರು- ವಾಲಿಯೇ ಈ ವೇಷದಿಂದ ಬಂದಿದ್ದಾನೋ!’ ಎಂದು ಭೀತರಾಗುತ್ತಾರೆ. ಆಗ ವಿವೇಕಿಯಾದ ಹನುಮಂತನು ಸುಗ್ರೀವನಿಗೆ ಹೀಗೆ ಧೈರ್ಯದ ಮಾತನ್ನು ಆಡುತ್ತಾನೆ- “ನ ಹಿ ಅಬುದ್ಧಿಂ ಗತೋ ರಾಜಾ ಸರ್ವಭೂತಾನಿ ಶಾಸ್ತಿ ಹಿ’. ಅಂದರೆ, “ಬುದ್ಧಿ ಇಲ್ಲದ ರಾಜನು ಪ್ರಜೆಗಳನ್ನು ಪಾಲಿಸಲಾರ’.

ಯಾವುದು ನಮಗೆ “ಇದು ಹೀಗೆಯೇ’ ಎಂಬ ಅರಿವನ್ನು ಮೂಡಿಸುವುದೋ ಅದಕ್ಕೆ “ಬುದ್ಧಿ’ ಎಂದು ಕರೆಯಲಾಗುತ್ತದೆ. ಒಂದು ವಿಷಯದಲ್ಲಿ ಇಂಥ ನಿಶ್ಚಯವಾದ ಅರಿವು ಬರಬೇಕಾದರೆ ವಿವೇಕ ಇರಬೇಕಾಗುತ್ತದೆ. ಯಾವುದು ಸರಿ, ಯಾವುದು ತಪ್ಪು, ಯಾವುದು ಜೀವನಕ್ಕೆ ಹೊಂದಿಕೊಳ್ಳುವಂಥದ್ದು, ಯಾವುದು ಹೊಂದದಿರುವಂಥದ್ದು, ಕೆಟ್ಟದ್ದರಲ್ಲಿ ಅಪೇಕ್ಷೆ ಇಲ್ಲದಿರುವಿಕೆ, ಒಳ್ಳೆಯದರಲ್ಲಿ ಉಪೇಕ್ಷೆ ಇಲ್ಲದಿರುವಿಕೆ. ಇದನ್ನು “ವಿವೇಕ’ ಎನ್ನುತ್ತಾರೆ.

ಈ ವಿವೇಕದಿಂದಲೇ ಬುದ್ಧಿಗೆ ನಿಶ್ಚಯಿಸುವ ಸಾಮರ್ಥ್ಯ ಬರುತ್ತದೆ. ವಿವೇಕವು ಬುದ್ಧಿಯ ವಿಶೇಷಗುಣವಾಗಿದೆ. ವಿವೇಕವೇ ಇಲ್ಲದಿದ್ದಾಗ ಬುದ್ಧಿಗೆ ಅವಿವೇಕವೆಂಬ ಕತ್ತಲು ಆವರಿಸುತ್ತದೆ. ಅವಿವೇಕದಿಂದ, ರಾಜನಾದವನು ಪ್ರಜೆಗಳನ್ನು ಪರಿಪಾಲಿಸಲು ಅರ್ಹನಾಗನು. ರಾಜನಾದವನು ವಿವೇಕದಿಂದ ಕೂಡಿದ್ದರೆ, ಪ್ರಜೆಗಳು ನೆಮ್ಮದಿಯಿಂದ ಇರುತ್ತಾರೆ. ಪ್ರಜೆಗಳಿಗೆ ರಾಜನೇ ಆದರ್ಶನಾಗಿರುತ್ತಾನೆ. ಅವನ ಪ್ರತಿಯೊಂದು ನಡೆ- ನುಡಿಗಳೂ ಜನರಿಂದ ಅನುಸರಿಸಲ್ಪಡುತ್ತವೆ.

ಅದರಿಂದಲೇ “ನಾವಿಷ್ಣುಃ ಪೃಥಿವೀಪತಿಃ’ ಎಂಬ ಮಾತು ಬಂದಿದೆ. ವಿಷ್ಣು ಅಥವಾ ವಿಷ್ಣುವಿನ ಅಂಶ ಇಲ್ಲದವನು ರಾಜನಾಗಲಾರ. ಪ್ರಬುದ್ಧನಾದ ರಾಜನು ಮಾತ್ರ ರಾಜ್ಯವನ್ನು ಸಮೃದ್ಧವಾಗಿ­ಸಬಲ್ಲ. “ವಿಷ್ಣು ಎಂಬ ತತ್ತವು ಹೇಗೆ ವಿಶ್ವವನ್ನು ಆಳುತ್ತಿ­ದೆಯೋ, ಅದನ್ನು ಅನುಸರಿಸುವವನೇ ಭಾರತೀಯ
ಮನ­ಸೊ­ಪ್ಪುವಂಥ ಆದರ್ಶನಾದ ರಾಜನಾಗುವನು’ ಎನ್ನುವುದು ಶ್ರೀರಂಗ ಮಹಾಗುರುಗಳ ನಂಬಿಕೆಯಾಗಿತ್ತು.

* ವಿದ್ವಾನ್‌ ನರಸಿಂಹ ಭಟ್‌ ಬಡಗು, ಅಷ್ಟಾಂಗಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.