ಬುದ್ಧಂ “ಚಾರಣಂ’ ಗಚ್ಛಾಮಿ

ಸಂದಾಕ್ಫುವಿನ ವಿಷದ ಬೆಟ್ಟದಲ್ಲಿ ಒಂದು ರಾತ್ರಿ

Team Udayavani, Nov 30, 2019, 6:13 AM IST

BUDDHA

“ವಿಷಗಳ ರಾಣಿ’ ಅಂತಲೇ ಕರೆಯಲ್ಪಡುವ ಅಕೊನಿಟಂ ಸಸ್ಯಗಳೇ ತುಂಬಿಕೊಂಡ ಬೆಟ್ಟ ಸಂದಾಕ್ಫು. ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ…

ನಾವು ಗೆಳೆಯರೆಲ್ಲ ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿರುವ “ಸಂದಾಕ್ಫು’ ಬೆಟ್ಟ ಏರಲು ಹೋಗಿದ್ದೆವು. ಸಮುದ್ರ ಮಟ್ಟದಿಂದ 11930 ಅಡಿ ಎತ್ತರದಲ್ಲಿರುವ ಪುಟ್ಟ ಗ್ರಾಮ. “ಸಂದಾಕ್ಫು’ ಎಂದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ “ವಿಷಕಾರಿ ಸಸ್ಯಗಳ ನಾಡು’ ಎಂದರ್ಥ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುವ “ಅಕೊನಿಟಂ’ (Aconitum) ಎಂಬ ಸಸ್ಯ ಅತ್ಯಂತ ವಿಷಕಾರಿ. ಅದರಿಂದಲೇ ಊರಿಗೆ ಹೆಸರು ಬಂತು. ಇಲ್ಲಿ ಪ್ರತಿ ಹೆಜ್ಜೆ ಇಡುವಾಗಲೂ, ಇದೇ ಕೊನೆಯ ಹೆಜ್ಜೆಯೇನೋ ಎನ್ನುವ ಆತಂಕ ಆಗಾಗ್ಗೆ ಕಂಪಿಸುವಂತೆ ಮಾಡುತ್ತದೆ.

ಅಕೊನಿಟಂ! ನೋಡಲು ಸುಂದರ ನೇರಳೆ ಬಣ್ಣದ ಹೂ ಬಿಡುವ ಸಸ್ಯ. ಇದರ ಹಸನ್ಮುಖದ ಹಿಂದೆ ಅಡಗಿಸಿಕೊಂಡಿರುವ ಹಾಲಾಹಲವೇ ಭಯಂಕರ. ಆದ್ದರಿಂದಲೇ ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ. ಸುಮಾರು 250 ಪ್ರಭೇದಗಳನ್ನು ಹೊಂದಿರುವ ಅಕೊನಿಟಂ, ಅಲ್ಲಲ್ಲಿ ಗಾಳಿಗೆ ತೊನೆದಾಡುತ್ತಲೇ ಇತ್ತು. ಒಂದು ಮೀಟರ್‌ ಎತ್ತರದ “ವಿಷಗಳ ರಾಣಿ’ ಇದು. ಹಿಂದೆಯೆಲ್ಲ, ಗಿಡದ ರಸವನ್ನು ಭರ್ಜಿಯ ತುದಿಗೆ ಲೇಪಿಸಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರಂತೆ.

ಗ್ರೀಕ್‌ನ ಕಾಲ್ಪನಿಕ ಜಗತ್ತಿನಲ್ಲಿ, ನಮ್ಮ ಬೆಂಗಾಳಿ ಕತೆಗಳಲ್ಲಿ, ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ, ಜಪಾನ್‌ ಮತ್ತು ಚೀನಾದ ಪುರಾಣ ಕಥನಗಳಲ್ಲಿ ಈ ಸಸ್ಯ ತನ್ನದೇ ಕಿತಾಪತಿ ಮಾಡುವ ದೃಶ್ಯಗಳೇಕೋ ಹೆಜ್ಜೆ ಹೆಜ್ಜೆಗೂ ಕಾಡಿದ್ದವು. ಇದು ಮನುಷ್ಯನ ನರಮಂಡಲಕ್ಕೆ ನೇರವಾದ ಪರಿಣಾಮ ಬೀರಿ, ಕೆಲವೇ ಗಂಟೆಗಳಲ್ಲಿ ಸಾವು ತಂದೊಡ್ಡುತ್ತದೆ. ಸ್ಪರ್ಶದಿಂದ ಸಾವು ಸಂಭವಿಸದಿದ್ದರೂ ತಲೆನೋವು, ವಾಕರಿಕೆ, ಎದೆಬಡಿತ ಜೋರಾಗುವ ಇತ್ಯಾದಿ ಪರಿಣಾಮಗಳಂತೂ ಕೆಲವು ಗಂಟೆಗಳ ಕಾಲ ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಮೆರಿಕದ ಅಲಾಸ್ಕಾದ ಮೂಲನಿವಾಸಿಗಳು ಬೃಹದಾಕಾರದ ತಿಮಿಂಗಲಗಳನ್ನು ಬೇಟೆಯಾಡಲು ಬಾಣಗಳ ತುದಿಗೆ ಅಕೊನಿಟಂನ ರಸವನ್ನು ಲೇಪಿಸಿ, ಪ್ರಯೋಗಿಸುತ್ತಿದ್ದರು. ಆ ತುಣುಕು ವಿಷದ ಆರ್ಭಟಕ್ಕೆ, ಬೃಹತ್‌ ತಿಮಿಂಗಿಲಗಳು ಪಾರ್ಶ್ವವಾಯುವಿಗೆ ತುತ್ತಾಗಿ, ಈಜಲಾಗದೆ, ಮುಳುಗಿ ಸಾಯುತ್ತಿದ್ದವು. ಲಡಾಖ್‌ನಲ್ಲಿ ಪರ್ವತಾರೋಹಿ ಮೇಕೆಗಳನ್ನೂ, ಜಪಾನ್‌ನಲ್ಲಿ ಕರಡಿಗಳನ್ನೂ ಬೇಟೆಯಾಡಲು ಬಳಕೆ ಆಗುವುದು, ಇದೇ “ಅಕೊನಿಟಂ’ ವಿಷವೇ. ಅಕೋನಿಟಂ ಸಾಮ್ರಾಜ್ಯದಂತಿದ್ದ “ಸಂದಾಕ್ಫು’ ಶಿಖರದ ತುದಿಯಲ್ಲಿ ನಿಂತಾಗ, ಕಂಡ ಸ್ವರ್ಗವೇ ಬೇರೆಯಾಗಿತ್ತು.

ಆ ತುದಿಯಿಂದ, ಅರುಣೋದಯವನ್ನು ನೋಡಲು, ಇಡೀ ರಾತ್ರಿ ಅಲ್ಲಿಯೇ ಕಳೆದೆವು. ಬೆಳಗ್ಗೆ 4.30ಕ್ಕೇ ಸೂರ್ಯ, ಹೊಂಬಣ್ಣದ ಆಗಸದ ಬಟ್ಟಲನ್ನು ಹೊತ್ತುಕೊಂಡು ಬಂದ. ಮಂಜಿನ ಮಹಾಸಾಗರದಿಂದ, ಸೂರ್ಯ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೊದ ಮೊದಲು ತೋರಿದ್ದ. ಅದನ್ನು ನೋಡಿದ್ದೇ, ನಾಲ್ಕು ದಿನಗಳ ನಮ್ಮ ಚಾರಣದ ನೋವೆಲ್ಲ ಕರಗಿತು. ಅಪರೂಪದ ಅರುಣೋದಯದ ಜತೆಜತೆಗೇ ಆ ಬೆಳಕು, ಬುದ್ಧನನ್ನೂ ಎದುರು ತೋರಿಸಿತ್ತು. “ಸಂದಾಕ್ಫು’ವಿನ ತುದಿಯಲ್ಲಿ ನಿಂತಾಗ, ಮೌಂಟ್‌ ಎವರೆಸ್ಟ್‌ ಸೇರಿದಂತೆ ಜಗತ್ತಿನ 5 ಅತಿ ಎತ್ತರದ ಪರ್ವತಶ್ರೇಣಿಗಳಲ್ಲಿ ನಾಲ್ಕು ಪರ್ವತಗಳು ಒಟ್ಟಿಗೆ ಕಾಣಿಸುತ್ತವೆ.

ಮೌಂಟ್‌ ಎವರೆಸ್ಟ್‌, ಕಾಂಚನಜುಂಗಾ, ಲ್ಹೋತ್ಸೆ ಮತ್ತು ಮಕಾಲು ಪರ್ವತಶ್ರೇಣಿಗಳು ಮಲಗಿದ ಬುದ್ಧನಂತೆ ಗೋಚರವಾಗುತ್ತವೆ. ಸ್ಥಳೀಯರು ಈ ದೃಶ್ಯಕ್ಕೆ “ಸ್ಲಿಪಿಂಗ್‌ ಬುದ್ಧ’ ಎಂದೇ ಕರೆಯುತ್ತಾರೆ. ನೀವು ಚಿತ್ರವನ್ನು ಗಮನಿಸಿದರೆ, ಎಡತುದಿಗೆ ತಲೆ, ಮಧ್ಯದಲ್ಲಿ ಹೊಟ್ಟೆ ಮತ್ತು ಬಲತುದಿಯಲ್ಲಿ ಕಾಲಿನ ಆಕಾರ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬುದ್ಧನ ನಿದಿರೆಯ ಸೊಬಗನ್ನು ತೃಪ್ತಿಯಾಗುವಷ್ಟು ನೋಡಿ, ಅಲ್ಲಿಂದ ಹೊರಟೆವು.

* ಸುಚಿತ್‌ ರಾಜು, ದಾವಣಗೆರೆ

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.