ದೊಡ್ಡ ಕೊಕ್ಕಿನ ಎದೆಚೀಲದ ಕೊಕ್ಕರೆ 


Team Udayavani, Feb 11, 2017, 12:25 PM IST

654.jpg

ದೊಡ್ಡ, ಉದ್ದ ಕಾಲಿನ ದೊಡ್ಡ ಚುಂಚಿನ ಕೊಕ್ಕರೆ. ಬರ್ಜಿಯಂತಹ ದೊಡ್ಡ ಬಲವಾದ ಚೂಪಾದ ಚುಂಚಿರುವ ಕೊಕ್ಕರೆ. ಕೊಕ್ಕರೆಗಳಲ್ಲಿ ಅತಿದೊಡ್ಡದಾದ ಹಕ್ಕಿ ಇದು.  ಬಣ್ಣದಕೊಕ್ಕರೆ. ಏಯನ್‌ಓಪನ್‌ ಬಿಲ್‌ ಸ್ಟೋರ್ಕ್‌ ಅಂದರೆ ಬಾಯ್ಕಳಕ ಕೊಕ್ಕರೆ,  ಯುರೇಯನ್‌ ಬಿಳಿ ಕೊಕ್ಕರೆ, ಬಿಳಿ ಕುತ್ತಿಗೆಕೊಕ್ಕರೆ, ಕಪ್ಪುಕೊಕ್ಕರೆ, ಕಪ್ಪುಕುತ್ತಿಗೆಕೊಕ್ಕರೆ ಸಣ್ಣ ಎಡೊjಟೆಂಟ್‌ ಸ್ಟೊರ್ಕ್‌ ಈ ಗುಂಪಿನ ಸಹವರ್ತಿ ಹಕ್ಕಿಗಳು. ಲೆಪ್ಟೊಪ್ಟಿಲಾಸ್‌ ಡೊಬಿಯಸ್‌ ಇದರ ವೈಜಾnನಿಕ ಹೆಸರು. ಈ ಗುಂಪಿನ ಇತರ ಹಕ್ಕಿಗಳಿಗಿಂತ ಇದು ದೊಡ್ಡದು. ದಪ್ಪಗಾತ್ರ, ಹೆಚ್ಚು ದಪ್ಪ ಬಾರದ ದೇಹದಕೊಕ್ಕರೆ ಎಂದರೆ ತಪ್ಪಾಗಲಾರದು. ದಪ್ಪ ಗಾತ್ರದ ಎಡೊjಟೆಂಟ ಹಕ್ಕಿ ಮಾಸಲು ಬಿಳಿ, ಕಪ್ಪುಕಂದು ಬಣ್ಣ ಮಿಶ್ರವಾಗಿಕಾಣುತ್ತದೆ. ಉದ್ದುದ್ದ ಕಾಲು, ಆಹಾರ ಹುಡುಕುವಾಗ ಹಿಂದೆ ಮುಂದೆ ನಡೆದು ಊರು ಮತ್ತು ಪಟ್ಟಣದ ಹೊರವಲಯದ, ಕಸ, ತಿಪ್ಪೆಗಳಲ್ಲಿ ಇರುತ್ತವೆ. ದೊಡ್ಡ ಪ್ರಮಾಣದಲ್ಲಿ ಪರಿಸರದಲ್ಲಿರುವ ಹೊಲಸು ಕಸ ತಿಪ್ಪೆಗಳನ್ನು ತನ್ನಆಹಾರ ದೊರಕಿಸಲು ಉಪಯೋಗಿಸುತ್ತಾರೆ. ಇದು ಪ್ರಕೃತಿ ಶುಚಿಕಾರ್ಯದಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತದೆ. ದೊಡ್ಡ  ಭಾರವಾದ ದೇಹ, ಭಾರವಾದ ದೊಡ್ಡ ಕೊಕ್ಕು ಇರುವುದರಿಂದ ಓಡುತ್ತಾ ರೆಕ್ಕೆ ಬಿಚ್ಚಿ ಸ್ವಲ್ಪದೂರ ಓಡಿ ಹಾರಲು ಆರಂಭಿಸುತ್ತದೆ.  ಇದರ ಹಾರುವ ಪರಿ.

ಪ್ರಕೃತಿಯನ್ನು ಶುಚಿ ಗೊಳಿಸಲು ಪ್ರಕೃತಿಯೇ ನೀಡಿದ ಜಾಡಮಾಲಿ ಹಕ್ಕಿ ಎಂದರೂ ತಪ್ಪಾಗಲಾರದು. ರಣ ಹದ್ದು ಅಂದರೆ ಭಾರತೀಯ ರಣ ಹದ್ದು ಮತ್ತು ಇದಕ್ಕೆ ತುಂಬಾ ಸಾಮ್ಯತೆಇದೆ. ಇವೆರಡೂ ಪ್ರಕೃತಿ ಶುಚಿ ಕಾರ್ಯದಲಿ Éಅಗ್ರಸ್ಥಾನ ವಹಿಸುತ್ತವೆ. ಅಂತೆ ಇವೆರಡೂ ಹಕ್ಕಿ ಪರಿಸರ ಶುಚಿಕಾರ್ಯ ನಿರ್ವಸುತ್ತಿದ್ದರೂ ಅಳಿವಿನ ಅಪಾಯದಲ್ಲಿರುವುದು ದುರ್ದೈವ. ದನಗಳ ಮಾಂಸ, ಕೊಳೆತ ತಿಪ್ಪೆಯ ಆಹಾರ ತಿನ್ನುತ್ತ ಇರುವ ಇವೆರಡೂ ದೇಹದ ಗಾತ್ರ, ರೆಕ್ಕೆ ವಿನ್ಯಾಸ, ಹಾರುವುದು, ಹಾರುತ್ತಾ ತೇಲುವುದು ಮೊದಲಾದ  ಸ್ವಭಾವದಲ್ಲಿ ಸಾಮ್ಯತೆ ಇದೆ.  ಹದ್ದಿನ ಕುತ್ತಿಗೆ ಮೇಲ್ಭಾಗದಲ್ಲಿ ಕಾಲರಿನಂತೆ ಬಿಳಿ ಗರಿಗಳಿವೆ. ಅಂತೆ ಎಡೊjಟೆನrಕೊಕ್ಕರೆಯ ಕುತ್ತಿಗೆ ಹಿಂಭಾಗದಲ್ಲಿ ಮೇಲೆ ಕೇಸರಿ ಬಣ್ಣದ ಮುತ್ತು ಪೋಣಿಸಿದಂತಿರುವ ಎದ್ದುಕಾಣುವ ಭಾಗಇದೆ. ಅದರಂತೆ ಕುತ್ತಿಗೆ ಬುಡದಲ್ಲಿ ಎದೆಯ ಕೆಳಗಡೆ ತೂಗುವ ಚೀಲದಂತಿರುವ ಜೋಳಿಗೆ ಇದೆ. ಇದರಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಕುತ್ತಿಗೆಯ ಕೆಳಗೆ ನೇತಾಡುವ ಕೆಂಪನೆಯ ಚೀಲ 30 ಸೆಂ.ಮೀ. ದೊಡ್ಡದಿದೆ. ಇದರ ರೆಕ್ಕೆ ರಣ ಹದ್ದಿನ ರೆಕ್ಕೆಯನ್ನು ತುಂಬಾ ಹೋಲುತ್ತದೆ. ರೆಕ್ಕೆ ಮೇಲ್ಭಾಗ ನೀಲಿಗಪ್ಪು ಬಣ್ಣದಿಂದ ಕೂಡಿರುತ್ತದೆ. ತುದಿಯಲ್ಲಿ ಬೂದುಬಣ್ಣ, ಹೊಟ್ಟೆ ಭಾಗ ಮಾಸಲು ಬಿಳಿ ಬಣ್ಣ. ಕುತ್ತಿಗೆ, ತಲೆಕೇಸರಿ ಬಣ್ಣದ್ದಾಗಿರುತ್ತದೆ.  ಈ ಹಕ್ಕಿ ಸರಾಸರಿ 135 ಸೆಂ.ಮೀ ಇರುತ್ತದೆ. ರೆಕ್ಕೆಯ ಅಗಲ 250 ಸೆಂ.ಮೀ.  ಸುಮಾರು 43 ವರ್ಷ ದೀರ್ಘಾಯುಷ್ಯ ಇರುವ ಕೊಕ್ಕರೆ. ಕೊಕ್ಕರೆಗಳಲ್ಲಿಯೇ ಹೆಚ್ಚು ವರ್ಷ ಬದುಕುವ ಹಕ್ಕಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಸ್ಥೂಲ ಕಾಯದ ಈ ಕೊಕ್ಕರೆ ಸುಮಾರು 8 ರಿಂದ 11 ಕೆ.ಜಿ ಭಾರವಿರುತ್ತದೆ. ಇದೇ ಗುಂಪಿಗೆ ಸೇರಿದ ಆಫ್ರಿಕಾದ ನಿವಾಸಿ ಮೆರಂಬು ಸ್ಟಾರ್ಕ್‌ 8.9 ಕೆಜಿ ಭಾರದಿಂದ ಕೂಡಿರುತ್ತದೆ. ಇದಕ್ಕಿಂತ ಹೆಚು ಸ್ಥೂಲ ದೇಹದ ಹಕ್ಕಿ ಗ್ರೇಟರ್‌ ಎಟೂj ಟೆಂಟ್‌ಕೊಕ್ಕರೆ. ಇದರ ಒಂದು ರೆಕ್ಕೆಯ ಅಳತೆ 80.5 ಸೆಂ. ಮೀ. ಇದರ ಬಾಲ 31.8 ಸೆಂ.ಮೀ ಇದೆ. ಕುತ್ತಿಗೆ ಕೆಳಗಿನ ಚೀಲ ದೊಡ್ಡದಾದಾಗ ಸುಮಾರು 32.4 ಸೆಂ.ಮೀ ಅಗಲವಾಗುತ್ತದೆ. ಅನ್ನ ನಾಳಕ್ಕೆ ಮತ್ತು ಈ ಚೀಲಕ್ಕೆ ಸಂಬಂಧವಿರುವುದಿಲ್ಲ. ಇದು ಶ್ವಾಸ ನಾಳಕ್ಕೆ ಸೇರಿದೆ. ಇದು ಗಾಳಿ ತುಂಬಿಸಿಡಲು ಸಹಕರಿಸುತ್ತವೆ.ಇದರಿಂದ ಕೊಕ್ಕರೆಗೆ ಏನು ಉಪಯೋಗ? ಈ ವಿಚಾರವಾಗಿ ಸಂಶೋಧನೆ ನಡೆಯಬೇಕಿದೆ.  

ಈ ಹಕ್ಕಿಯ ಮಾಂಸ ಕುಷ್ಠ ರೋಗಕ್ಕೆಔಷಧ. ಇದರಿಂದ ಈ ಮಹಾ ರೋಗ ವಾಸಿಯಾಗುವುದು ಎಂಬುದು ದಾಖಲಾದ ವಿಚಾರವಾಗಿದೆ.  ಮರಿ ಮಾಡುವ ಸಮಯದಲ್ಲಿ ಕುತ್ತಿಗೆ ಎದೆ, ಬೂದು ಬಣ್ಣದ ಕಾಲು ಸಹ ಕೆಂಪು ಬಣ್ಣ ತಳೆಯುತ್ತದೆ. ಪ್ರಬುದ್ಧಾವಸ್ಥೆ ತಲುಪಿದ ಹಕ್ಕಿಯ ರೆಕ್ಕೆಯ ಮಧ್ಯದ ಗರಿಗಳು ಹೆಚ್ಚು ದಟ್ಟ ವರ್ಣದಿಂದ ಕೂಡಿರುತ್ತದೆ.   ಇದರ ಭರ್ಜಿಯಂತಿರುವ ದೊಡ್ಡ ಕೊಕ್ಕು 32.2 ಸೆಂ. ಮೀ.ನಷ್ಟಿದೆ.  

 ಮಾನವನ ಉಳಿವಿಗಾಗಿ ಇವುಗಳನ್ನು ರಕ್ಷಿಸಲೇ ಬೇಕಾದ ಪರಿಸ್ಥಿತಿ ಇದೆ. ಆಸ್ಸಾಂನಲ್ಲಿ ಈ ಸಂತತಿ ಉಳಿಸಲು ಅವುಗಳಿಗೆ ಪ್ರತ್ಯೇಕ ಸ್ಥಳ ಇರಿಸಿರುವುದರಿಂದ ಅಲ್ಲಿ ಇವು ಸಂತಾನಾಭಿವೃದ್ಧಿಯಾಗಿದೆ. 

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.