ಯುದ್ಧ ಗೆಲ್ಲಿಸಿದ ದೇವಿ…

 ಸಾಲು ಮರದಮ್ಮನ ಐತಿಹಾಸಿಕ ಮಹಿಮೆ

Team Udayavani, Aug 10, 2019, 5:00 AM IST

22

ಪಾಳೇಗಾರರ ಕಾಲದಲ್ಲಿ ದಂಡಯಾತ್ರೆ, ಯುದ್ಧಕ್ಕೂ ಮುನ್ನ ಸಾಲುಮರದಮ್ಮನಿಗೆ ಪೂಜೆ ಸಲ್ಲಿಸಿ, ಹೊರಡುವ ರೂಢಿಯಿತ್ತು. ಸೈನ್ಯವು ಯುದ್ಧ ಗೆದ್ದು ಹಿಂತಿರುಗಿ ಬಂದಾಗ, ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಈಗ ಈ ದೇವಿಯನ್ನು ರೋಗ ನಿವಾರಿಸುವ ದೇವಿಯಂತೆ ಭಕ್ತರು ಕಾಣುತ್ತಿದ್ದಾರೆ…

ಇತಿಹಾಸದಲ್ಲಿ ಪ್ರತಿ ಅರಸರ ದಿಗ್ವಿಜಯದ ಹಿಂದೆಯೂ ಒಂದಲ್ಲಾ ಒಂದು ದೇವರ ಆರಾಧನೆ ಇದ್ದೇ ಇತ್ತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿರುವ ಸಾಲುಮರದಮ್ಮ ಅಂಥದ್ದೇ ಮಹಿಮೆ ಹೊಂದಿರುವ ದೇವತೆ. ಪ್ರಾಚೀನ ಕಾಲದಿಂದಲೂ ಈಕೆ ಶಕ್ತಿದೇವತೆ. ಇಲ್ಲಿನ ಹೆದ್ದಾರಿಯ ಎರಡೂ ಸಾಲಿನಲ್ಲಿ ಸಾಲುಮರವಿದ್ದು, ಒಂದು ಬುಡದಲ್ಲಿ ಈ ದೇವಿಯ ಗುಡಿ ಇರುವುದರಿಂದ, “ಸಾಲುಮರದಮ್ಮನ ದೇಗುಲ’ ಅಂತಲೇ ಕರೆಯುತ್ತಾರೆ.

ಗಂಗರ ಕಾಲದಿಂದ ವಿಜಯನಗರ ಕಾಲದವರೆಗೂ ವಿವಿಧ ರಾಜರು ಮತ್ತು ಪಾಳೇಗಾರರಿಂದ ಈ ದೇವಿಗೆ ಆರಾಧನೆ ನಡೆಯುತ್ತಿತ್ತು ಎಂಬುದಕ್ಕೆ ಉಲ್ಲೇಖಗಳಿವೆ. ಎಲ್ಲಕ್ಕೂ ಮುಖ್ಯವಾಗಿ ತರೀಕೆರೆ ಪಾಳೇಗಾರರಿಂದ ಈ ದೇಗುಲ ಅಭಿವೃದ್ಧಿ ಕಂಡು, ಗ್ರಾಮ ದೇವತೆ ಅಂತಲೇ ಖ್ಯಾತಿ ಪಡೆಯಿತು. ಪಾಳೇಗಾರರ ಕಾಲದಲ್ಲಿ ದಂಡಯಾತ್ರೆ, ಯುದ್ಧಕ್ಕೂ ಮುನ್ನ ಸಾಲುಮರದಮ್ಮನಿಗೆ ಪೂಜೆ ಸಲ್ಲಿಸಿ, ಹೊರಡುವ ರೂಢಿಯಿತ್ತು. ಸೈನ್ಯವು ಯುದ್ಧ ಗೆದ್ದು ಹಿಂತಿರುಗಿ ಬಂದಾಗ, ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು.

ರೋಗ ನಿವಾರಿಸುವ ದೇವಿ
ತರೀಕೆರೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಪ್ಲೇಗ್‌, ಕಾಲರಾ, ಸಿಡುಬು ಇತ್ಯಾದಿ ಸಾಂಕ್ರಾಮಿಕ ರೋಗ ಬಂದಾಗ, ಈ ದೇವಿಗೆ ಹರಕೆ ಹೊತ್ತರೆ, ಅದು ಶಮನವಾಗುತ್ತಿತ್ತು ಎನ್ನುವ ಮಾತುಗಳಿವೆ. ಅದರಂತೆ, ಈಗಲೂ ಭಕ್ತರು ರೋಗ ನಿವಾರಣೆಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾರೆ. ಮೊಸರನ್ನದ ಎಡೆ ನೀಡಿ, ಹರಕೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಅಲ್ಲದೇ, ವಿದ್ಯೆ, ಉದ್ಯೋಗ ಪ್ರಾಪ್ತಿ, ಸಂತಾನ ಪ್ರಾಪ್ತಿ, ರೋಗ ನಿವಾರಣೆ, ಭಯ ನಿವಾರಣೆಗೆ ಪ್ರಾರ್ಥಿಸಿ ಭಕ್ತರು ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ.

ಗುಡಿಯಿಂದ ದೇಗುಲವಾಗಿ….
ನೂರಾರು ವರ್ಷಗಳ ಹಳೆಯದಾದ ಈ ದೇಗುಲವು ಮೊದಲು ಚಿಕ್ಕ ಗುಡಿಯಂತೆ ಇತ್ತು. ಸುಮಾರು 22 ವರ್ಷಗಳ ಹಿಂದೆ, ಸ್ಥಳೀಯ ಗ್ರಾಮಸ್ಥರೆಲ್ಲ ಸೇರಿ ಸಮಿತಿ ರಚಿಸಿಕೊಂಡು, ದೇಗುಲದ ಜೀರ್ಣೋದ್ಧಾರ ಮಾಡಿ, ಸುಂದರ ಕಟ್ಟಡ ನಿರ್ಮಿಸಿದರು. ಅಲ್ಲದೆ, ದೇವರ ಮೂರ್ತಿಯ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಿದರು. ದಶಕದ ಹಿಂದೆ, ದೇಗುಲದ ಮುಂಭಾಗದಲ್ಲಿ, ಆಕರ್ಷಕ ರಾಜಗೋಪುರವೂ ತಲೆಯೆತ್ತಿದೆ.

ಶ್ರಾವಣ ವಿಶೇಷ
ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ ಅಭಿಷೇಕ, ಶತನಾಮಾವಳಿ ಪೂಜೆ ನಡೆಯುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ವಿಜಯ ದಶಮಿಯವರೆಗೆ ನಿತ್ಯ ವೈಭವದ ಉತ್ಸವ ಪೂಜೆ ನೆರವೇರುತ್ತದೆ. ನವರಾತ್ರಿಯಂದು ನಿತ್ಯವೂ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ವಿಶೇಷ ಅಭಿಷೇಕ ಮತ್ತು ಸರ್ವಾಲಂಕಾರ ಪೂಜೆ ನಡೆಯುತ್ತದೆ. ಭಕ್ತರಿಗೆ ಮೊಸರನ್ನ ಪ್ರಸಾದ ವಿತರಣೆ ನಡೆಯುತ್ತದೆ.

ದರುಶನಕೆ ದಾರಿ…
ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ, ಬಿ.ಎಚ್‌. ರಸ್ತೆಯ ಪಕ್ಕದಲ್ಲಿಯೇ ಸಾಲುಮರದಮ್ಮನ ದೇಗುಲವಿದೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.