ಆನೆಯ ತಲೆ ಕಂಡಿತೆ ನಿಮಗೆ?
Team Udayavani, Mar 7, 2020, 6:06 AM IST
ಗದಗ ಜಿಲ್ಲೆಯ ಈ ಪಟ್ಟಣ, ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇಲ್ಲಿರುವ ಸುಂದರ ಕೋಟೆಯನ್ನು ಕಟ್ಟಿಸಿದ್ದು ಶಿವಾಜಿಯವರೇ ಎನ್ನುತ್ತದೆ ಇತಿಹಾಸ. ಇದೇ ಇತಿಹಾಸದಾಚೆ ಪುರಾಣದ ನೆರಳೂ ಈ ಊರಿನ ಮೇಲೆ ಬೀಳುತ್ತದೆ. ಮಹಿಷಾಸುರನ ಮಗ ಗಜಾಸುರನು, ಇಲ್ಲಿ ಕೋಟೆ ಕಟ್ಟಿಕೊಂಡು ವಾಸವಿದ್ದ ಎನ್ನುವ ಪುರಾಣ ಕಥೆಗಳಿವೆ. ಇಲ್ಲಿನ ಕೋಟೆಯ ಮೇಲೆ ನಿಂತು ವೀಕ್ಷಿಸಿದಾಗ, ಪೂರ್ವಭಾಗದ ಗುಡ್ಡ ಆನೆಯ ತಲೆ ಹಾಗೆ ಗೋಚರಿಸುವುದರಿಂದ ಹಾಗೂ ಅದರ ಮುಂದಿನ ಭಾಗ ಸೊಂಡಿಲ ಹಾಗೆ ಕಾಣುವುದರಿಂದ ಇದಕ್ಕೆ “ಗಜೇಂದ್ರಗಡ’ ಎಂಬ ಹೆಸರು ಬಂತು ಎನ್ನಲಾಗುತ್ತದೆ.
* ಶರಣಬಸವ ಟಿ.ಆರ್., ಶಿಶುನಾಳ