ಹಣವನ್ನೇ ಪಡೆಯದ ವೈದ್ಯ ಹರಳಯ್ಯ


Team Udayavani, Jun 15, 2019, 9:36 AM IST

vaidya

ನಿಸ್ವಾರ್ಥ ಸೇವಾ ವೃತ್ತಿಗಳನ್ನೆ ಉದ್ಯಮವನ್ನಾಗಿಸಿಕೊಂಡ ಬಹುಸೌಲಭ್ಯ
ಆಸ್ಪತ್ರೆಗಳ ಸಂಕೀರ್ಣಗಳು ಹಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವುದಿರಲಿ,
ಆಸ್ಪತ್ರೆಯ ಹೊಸ್ತಿಲನ್ನು ಕೂಡಾ ದಾಟಲು ಬಿಡುವುದಿಲ್ಲ. ಹೀಗಿರುವಾಗ, ತನ್ನಲ್ಲಿಗೆಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಔಷಧವನ್ನು ಕೂಡಾ ನೀಡುವ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಹಾಳದ ಹರಳಯ್ಯ ರೋಗಿಗಳ ಪಾಲಿಗೆ ಆಪತಾºಂಧವರಾಗಿದ್ದಾರೆ. ಹಾಗಂತ ಇವರೇನು ಎಂ.ಬಿ.ಬಿ.ಎಸ್‌, ಎಂ.ಡಿ, ಎಂ.ಎಸ್‌ ಓದಿದವದರಲ್ಲ. ತಮ್ಮಲ್ಲಿನ ಕುತೂಹಲ ಮತ್ತು ಆಸಕ್ತಿಯಿಂದಾಗಿ ಈ ಕಾಯಕದಲ್ಲಿ ತೊಡಗಿಕೊಂಡವರು. ಯಾವುದೇ ಪರಿಕರಗಳ ಸಹಾಯವಿಲ್ಲದೆ ಕೇವಲ ನಾಡಿಮಿಡಿತದ ಪರೀಕ್ಷೆಯಿಂದಲೇ ರೋಗ ಪತ್ತೆ ಹಚ್ಚಿ, ಔಷಧ ನೀಡುತ್ತಾರೆ.

ಹೊರರಾಜ್ಯಗಳಿಂದಲೂ ಬರುತ್ತಾರೆ
ಸ್ಪರ್ಶ ಅನುಭವದಿಂದ ಮೂಳೆ ಮುರಿತದ ಪ್ರಮಾಣ ಗುರುತಿಸಿ ಚಿಕಿತ್ಸೆ ನೀಡುವ ಇವರಿಗೆ ಎಕ್ಸ್‌ರೇ ಮತ್ತು ಸ್ಕ್ಯಾನಿಂಗ್‌ಗಳ ಅವಶ್ಯಕತೆಯಿಲ್ಲ. ಹೊರರಾಜ್ಯಗಳಿಂದಲೂ ಸಹ ಇವರಲ್ಲಿಗೆ ಮೂಳೆಮುರಿತದ ಚಿಕಿತ್ಸೆಗಾಗಿ ಜನ ಬರುತ್ತಾರೆ. ಕೈ, ಕಾಲು, ಸೊಂಟ ಇನ್ನಿತರ ಯಾವುದೇ ಭಾಗದಲ್ಲಿ ಎಲುವು, ಕೀಲು, ಮೂಳೆ ಮುರಿತಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಇವರು ನೀಡುತ್ತಾರೆ. ಸ್ಥಳೀಯವಾಗಿ ದೊರಕುವ ಗಿಡಮೂಲಿಕೆಗಳು ಮತ್ತು ಕೆಲವೊಂದಿಷ್ಟು ತರಕಾರಿ ಪದಾರ್ಥಗಳನ್ನು ಬಳಸಿ ಸ್ವತಃ ತಾವೇ ಔಷಧಿ ತಯಾರಿಸಿ ನೀಡುತ್ತಾರೆ. ಚಿಕಿತ್ಸೆಗೆಂದು ಬಂದ ಯಾರೊಬ್ಬರನ್ನೂ ಇವರು ವಾಪಸ್‌ ಕಳಿಸಿದ್ದಿಲ್ಲ. ಕೆಲವರನ್ನು ತಿಂಗಳುಗಟ್ಟಲೆ ತಮ್ಮಲ್ಲೆ ಉಳಿಸಿಕೊಂಡು ಗುಣಮುಖರಾದ
ನಂತರ ಕಳಿಸಿದ್ದೂ ಇದೆ. ಹರಳಯ್ಯ ಅವರು ಸುಮಾರು 40 ವರ್ಷಗಳಿಂದ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಓದದೆ ವೈದ್ಯರಾದ ಕಥೆ
ಶಾಲೆಯಲ್ಲಿದ್ದಾಗ ಜೀವಶಾಸ್ತ್ರದ ಗುರುಗಳು ತರಗತಿಯಲ್ಲಿ ಮಾಡುತ್ತಿದ್ದ ಪ್ರಯೋಗಗಳು, ಕಪ್ಪೆ ಕೊಯ್ದು ಅದರ ಭಾಗಗಳನ್ನು ವಿವರಿಸುತ್ತಿದ್ದಿದ್ದು, ಇವೆಲ್ಲವೂ ಹರಳಯ್ಯನವರಿಗೆ ಪ್ರೇರಣೆ. ವೈದ್ಯರೊಬ್ಬರು ತಮ್ಮ ಊರಿಗೆ ಹೊಸದಾಗಿ ಬಂದಿದ್ದಾಗ ಹರಳಯ್ಯನವರ ತಂದೆ ಭೀಮಪ್ಪನವರು ಆಗೀಗ ಸಹಾಯ ಮಾಡುತ್ತಿದ್ದರಂತೆ. ಆಮೇಲೆ ಮನೆಯಲ್ಲಿ ಸಾಕಿದ ಕುರಿ- ಮೇಕೆ, ದನಕರುಗಳು ಕಾಯಿಲೆ ಬಿದ್ದಾಗ ತಾವೇ ಔಷಧ ನೀಡಲು ಶುರುಮಾಡಿದರು. ಆಗಂತೂ ಹಳ್ಳಿಗಳು ಬಡತನವನ್ನು ಹಾಸಿ ಹೊದ್ದು ಕೊಂಡಿರುತ್ತಿದ್ದವು. ಅಕ್ಕಪಕ್ಕದವರು ಅನಾರೋಗ್ಯಕ್ಕೀಡಾದಾಗಲೂ ತಮಗೆ ತಿಳಿದ ಮೂಲಿಕೆಗಳನ್ನು ಉಪಯೋಗಿಸಿ ಕಾಯಿಲೆ ಗುಣಪಡಿಸುತ್ತಿದ್ದರು. ಅಲ್ಲಿಂದ ಪ್ರಾರಂಭವಾಗಿ ಈವರೆಗೆ ಸಾವಿರಾರು ಮೂಳೆ ಮುರಿತದ ರೋಗಿಗಳನ್ನು, ಇತರ ಕಾಯಿಲೆ ಪೀಡಿತರನ್ನು ಹಣಪಡೆಯದೆ ಗುಣಮುಖರನ್ನಾಗಿಸಿದ್ದಾರೆ. 60 ವಯಸ್ಸಿನ ಆಸುಪಾಸಿನಲ್ಲಿರುವ ಹರಳಯ್ಯ ಇಂದಿಗೂ ವೈದ್ಯ ಸೇವೆಯನ್ನು ಮುಂದುವರಿಸಿದ್ದಾರೆ.

ಬಸವರಾಜ ಸಿದ್ದಣ್ಣವರ

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.