ಪ್ರೀತಿಯನ್ನು ಆರಾಧಿಸಿ, ಬೀಳದಿರಿ..


Team Udayavani, Feb 15, 2020, 6:04 AM IST

pretiyannu

ನಾವು ಪ್ರೀತಿಯನ್ನು ಆರಾ ಧಿಸಬೇಕು. ಪ್ರೀತಿಯಲ್ಲಿ ಬೀಳಬಾರದು. ಪ್ರೀತಿಯಲ್ಲಿ ಎದ್ದರೆ ಮಾತ್ರ ಅದಕ್ಕೆ ಪ್ರೀತಿ ಎನ್ನುತ್ತಾರೆ. ನಾವು ಮಾಡುವ ಪ್ರೀತಿ ಹೇಗಿರಬೇಕೆಂದರೆ, ಕುರಿ ಸರೋವರ­ದಲ್ಲಿ ನೀರು ಕುಡಿದಂತಿರಬೇಕು. ಎಮ್ಮೆ­ಯಂತೆ ಇಳಿದು ಸರೋವರ ಕೊಳಕು ಮಾಡಿದಂತೆ ಜಗತ್ತನ್ನು ಕೆಡಿಸುವ ಕೆಲಸ ಮಾಡಬಾರದು.

ನಾವು ಜೀವಿಸುವ ಜಗತ್ತು ಬಹು ಅನುಭವಗಳ ತಾಣ. ಅನುಭವಗಳಿಂದ ನಾವೂ ಕೆಡಬಾರದು. ಜಗತ್ತೂ ಕೆಡಬಾರದು. ನಾವು ಹೋದ ನಂತರ ಮುಂದಿನ ಪೀಳಿಗೆ ಈ ಜಗತ್ತು ಕೆಟ್ಟದ್ದು ಎನ್ನಬಾರದು. ಈ ಜಗತ್ತನ್ನು ಅನುಭವಿಸಿ ನಾವು ಶ್ರೀಮಂತ­ರಾದರೆ ನಮ್ಮ ಬದುಕು ಶ್ರೀಮಂತ. ಜಗತ್ತು ಅನುಭವಿಸಿ ಬಡವನಾದರೆ ನಮ್ಮ ಬದುಕೂ ಬಡವಾಗುತ್ತದೆ.

ನಾವು ನೋಡುವ ದೃಷ್ಟಿಯಲ್ಲಿ ಹಲವಾರು ಬಗೆಗಳಿವೆ. ರೈತರು ಮಣ್ಣಲ್ಲಿ ಭತ್ತ ಬೆಳೆದು ಜಗತ್ತಿಗೆ ಅನ್ನ ಕೊಟ್ಟರೆ, ಇನ್ನೂ ಕೆಲವರು ಚೀನಾಕ್ಕೆ ಮಣ್ಣು ಮಾರಿ ಚೈನಿ ಮಾಡಿದರು. ಜೀವನದಲ್ಲಿ ದಿವ್ಯತೆ ಬರಬೇಕಾದರೆ ಸೃಷ್ಟಿ ಬದಲಾಗಲ್ಲ. ಆ ಸೃಷ್ಟಿ ನೋಡುವ ನಮ್ಮ ದೃಷ್ಟಿ ಬದಲಾದರೆ ಜಗತ್ತು ದಿವ್ಯವಾಗುತ್ತದೆ. ಸ್ವರ್ಗವಾಗುತ್ತದೆ. “ಸೋಚ ಬದಲೋ ದೇಶ ಬದಲೇಗಾ’, “ವೇಷ್‌ ಬದಲನೆಸೆ ದೇಶ ನಹಿ ಬದಲೇಗಾ’- ಅಂದರೆ, ವಿಚಾರಗಳು ಬದಲಾಗಬೇಕು. ಆಗ ದೇಶ ಬದಲಾಗುತ್ತದೆ.

ನಾನೂ ಬೆಳೆಯಬೇಕು, ಇತರರೂ ಬೆಳೆಯ­ಬೇಕೆಂಬ ಭಾವನೆಗಳು ನಮ್ಮಲ್ಲಿ ಬರಬೇಕು. ನಾವು ಇನ್ನೊಬ್ಬನ ತಟ್ಟೆಯಲ್ಲಿರುವುದನ್ನು ತೋರಿಸಬಾರದು. ದೇವರು ನನಗೆ ಕೊಟ್ಟಿದ್ದನ್ನು ನಾನು ಅನುಭವಿಸಬೇಕು. ಯಾವುದು ನಾಲಿಗೆಗೆ ರುಚಿ ಕೊಡುತ್ತದೆಯೋ ಅದು ದೇಹಕ್ಕೆ ಕಹಿ ಕೊಡುತ್ತದೆ. ಯಾವುದು ದೇಹಕ್ಕೆ ಕಹಿ ಕೊಡುತ್ತದೆಯೋ, ಅದು ನಾಲಿಗೆಗೆ ಬಹಳ ರುಚಿ ಕೊಡುತ್ತದೆ.

ಅಬ್ದುಲ್‌ ಕಲಾಂರಿಗೆ ಒಬ್ಬ ವ್ಯಕ್ತಿ, “ನಿಮ್ಮ ಆರೋಗ್ಯ, ನಿಮ್ಮ ಸಂತೋಷಕ್ಕೆ ಕಾರಣ ಏನು? ನಿಮ್ಮ ಆರೋಗ್ಯದ ಗುಟ್ಟೇನು?’ ಎಂದು ಕೇಳಿದರಂತೆ. ಆಗ ಅವರು, “ನನ್ನಲ್ಲಿಗೆ ಬಂದವನಿಗೆ ನಾನು ಏನು ಕೊಟ್ಟು ಖುಷಿಪಡಿಸಲಿ?’ ಎಂದು ಯೋಚಿಸು­ತ್ತೇನೆ. ಹೀಗಾಗಿ ನಾನು ಆರೋಗ್ಯವಂತನಾಗಿಯೂ, ಸಂತೋಷ­ಭರಿತ­ನಾಗಿಯೂ ಇದ್ದೇನೆ’ ಎಂದರಂತೆ. ನಾವು, ದೇವರು ಕೊಟ್ಟದನ್ನು ಹಂಚಿ ತಿನ್ನಬೇಕು. ಕೋಳಿ- ಕಾಗೆ ಒಂದಗುಳ ಕಂಡರೆ ತನ್ನ ಬಳಗ ಕರೆಯುತ್ತದೆ. ಹಾಗೆ, ಮನುಷ್ಯನೂ ಹಂಚಿಕೊಂಡು ತಿನ್ನುವ ಮನೋಭಾವ ಬೆಳೆಸಿಕೊಳ್ಳಬೇಕು.

* ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಸಿದ್ದೇಶ್ವರಮಠ, ಕೊಪ್ಪಳ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.