ತನ್ನದೇ ನೆಲದಲ್ಲಿ ಶಾಪವಿಮೋಚನೆ ಪಡೆಯುತ್ತಾ ಇಂಗ್ಲೆಂಡ್‌?

40ಕ್ಕೂ ಅಧಿಕ ವರ್ಷಗಳ ಬರದಿಂದಹೊರಬರುತ್ತಾ ಕ್ರಿಕೆಟ್‌ ತವರು ರಾಷ್ಟ್ರ?

Team Udayavani, May 11, 2019, 6:00 AM IST

Ban11051904SBmk

ಮೇ 30ರಿಂದ ಇಂಗ್ಲೆಂಡ್‌ನ‌ಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಶುರುವಾಗಲಿದೆ. ಈ ಬಾರಿ ವಿಶ್ವಕಪ್‌ನ 4, 5 ತಿಂಗಳ ಹಿಂದೆ ಇದ್ದ ಸ್ವರೂಪವೇ ಬೇರೆ.

ಈಗ ಅದು ಪಡೆದುಕೊಂಡಿರುವ ರೂಪವೇ ಬೇರೆ.ನಾಲ್ಕೈದು ತಿಂಗಳ ಹಿಂದೆ ಭಾರತ ತಂಡ ಅತ್ಯಂತಪ್ರಬಲವಾಗಿ ಗೋಚರಿಸಿತ್ತು. ವಿಶ್ವಕಪ್‌ ಗೆಲ್ಲಬಲ್ಲ ತಂಡಗಳ ಪಟ್ಟಿ ತೆಗೆದು ನೋಡಿದಾಗ ಭಾರತಕ್ಕೆ ಮೆಚ್ಚಿನ ತಂಡವೆಂಬ ಗೌರವ ಲಭಿಸಿತ್ತು. ಈಗ 3 ತಿಂಗಳ ಹಿಂದೆ ಆ ಅಭಿಪ್ರಾಯ ಬದಲಾಯಿತು. ಈಗ ಮೆಚ್ಚಿನ ತಂಡಗಳ ಪಟ್ಟಿಯಲ್ಲಿ
ಭಾರತಕ್ಕೆ ಎರಡೋ, ಮೂರನೆಯಧ್ದೋ ಸ್ಥಾನ. ಅಗ್ರಸ್ಥಾನ ಆತಿಥೇಯ ಇಂಗ್ಲೆಂಡ್‌ಗೆ ಸಿಕ್ಕಿದೆ. ಇದುವರೆಗೆ ಒಮ್ಮೆಯೂ ಏಕದಿನ ವಿಶ್ವಕಪ್‌ ಗೆಲ್ಲದ ಇಂಗ್ಲೆಂಡ್‌ಗೆ ಇದು ಅತ್ಯಂತ
ಮಹತ್ವದ ಅವಕಾಶ.

ಕೆಲವು ತಿಂಗಳ ಹಿಂದೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ, ಭಾರತ ಪ್ರವಾಸಕ್ಕೆ ಆಗಮಿಸಿದ ನಂತರ ದಿಢೀರನೆ ಚೇತರಿಸಿಕೊಂಡಿದೆ. ಒಮ್ಮೆಲೆ ಟಿ20, ಏಕದಿನ ಸರಣಿ ಗೆದ್ದು, ನಂತರ ಪಾಕಿಸ್ತಾನವನ್ನು ಏಕದಿನ ಸರಣಿಯಲ್ಲಿ ಸುಲಭವಾಗಿ ಸೋಲಿಸಿದ ಪರಿಣಾಮ ಅದರ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಅದರ ಜೊತೆಗೆ ನಿಷೇಧಕ್ಕೊಳಗಾಗಿದ್ದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ತಂಡಕ್ಕೆ ಮರಳಿದ್ದಾರೆ.

ಇಬ್ಬರೂ ಭರ್ಜರಿ ಲಯದಲ್ಲಿದ್ದಾರೆ. ಇದು ಆ ತಂಡದ ಮನೋಬಲವನ್ನು ಏಕಾಏಕಿ ಗಗನಗಾಮಿಯನ್ನಾಗಿಸಿದೆ. ಮತ್ತೂಂದು ಕಡೆ ದ.ಆಫ್ರಿಕಾ, ಹಿಂದಿನ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ನ್ಯೂಜಿಲೆಂಡ್‌ ಕೂಡ ಪ್ರಬಲವಾಗಿವೆ. ಆದ್ದರಿಂದ ವಿಶ್ವಕಪ್‌ ಮೆಚ್ಚಿನ ತಂಡಗಳ ಪಟ್ಟಿ ತೆಗೆದು ನೋಡಿದಾಗ ಇಂಗ್ಲೆಂಡ್‌, ಭಾರತ, ಆಸ್ಟ್ರೇಲಿಯ, ದ.ಆಫ್ರಿಕಾ,ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಇನ್ನು ಮಾಜಿ ಚಾಂಪಿಯನ್‌ ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ ತಂಡಗಳ ಬಗ್ಗೆ ಯಾರಿಗೂ ಭರವಸೆಯಿಲ್ಲ. ಈ ಬಾರಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ಕೂಟ ನಡೆಯುತ್ತಿರುವುದರಿಂದ ಈ ತಂಡಗಳು ಲೀಗ್‌ ಹಂತವನ್ನು ಮೀರುವುದೇ ಅನುಮಾನ. ಇನ್ನು ಬಾಂಗ್ಲಾದೇಶ, ಆಫ್ಘಾನಿಸ್ತಾನ ಒಂದೆರಡು ಅಚ್ಚರಿಯ ಪ್ರದರ್ಶನ ನೀಡಿದರೆ ಅದೇ ಅದ್ಭುತ.

1975ರಿಂದ ಒಮ್ಮೆಯೂ ಗೆದ್ದಿಲ್ಲ ಇಂಗ್ಲೆಂಡ್‌
ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ಗೆ ಆಶೆಯೊಂದು ಚಿಗುರಿಕೊಂಡಿದೆ. 1975ರಿಂದ ಇದುವರೆಗೆ 11 ವಿಶ್ವಕಪ್‌ಗ್ಳು ನಡೆದಿವೆ.ಇಂಗ್ಲೆಂಡ್‌ ಮೂರು ಬಾರಿ ಫೈನಲ್‌ ಪ್ರವೇಶಿಸಿದೆ. ಆದರೆ ಒಮ್ಮೆಯೂ ಗೆಲ್ಲಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಪ್ರಬಲ ತಂಡವಾಗಿದ್ದ ಅದು ನಂತರ ಲಯ ಕಳೆದುಕೊಂಡು ದುರ್ಬಲವಾಗಿ ಬದಲಾಯಿತು. ಕಳೆದ ವಿಶ್ವಕಪ್‌ನಿಂದ ಮತ್ತೆ ಪ್ರಬಲವಾಗಿ ಬದಲಾಗಿದೆ. ಈ ಬಾರಿಯಂತೂ ಆಲ್‌ರೌಂಡರ್‌ಗಳು, ಬ್ಯಾಟ್ಸ್‌ಮನ್‌ಗಳು, ವೇಗಿಗಳನ್ನು ಪರಿಗಣಿಸಿದರೆ ಇಂಗ್ಲೆಂಡ್‌ ಅತ್ಯಂತ ಬಲಿಷ್ಠ ತಂಡ. ಜೋ ರೂಟ್‌, ಜೋಸ್‌ಬಟ್ಲರ್‌, ಜೇಸನ್‌ ರಾಯ್‌ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಬೆನ್‌ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಮೋಯಿನ್‌ ಅಲಿ ಅತ್ಯುತ್ತಮ ಆಲ್‌ರೌಂಡರ್‌ಗಳು. ತಂಡದ ಪ್ರಮುಖ ಬೌಲರ್‌ಗಳೆಲ್ಲ ಆಲ್‌ರೌಂಡರ್‌ ಪಟ್ಟಿಯಲ್ಲೇ ಇದ್ದಾರೆ. ಇದು ಇಂಗ್ಲೆಂಡ್‌ ಪಾಲಿನ ಗಮನಾರ್ಹ ಸಂಗತಿ.

ಬಹುತೇಕ ಆಟಗಾರರು ಆಲ್‌ರೌಂಡರ್‌ಗಳಾಗಿರುವುದರಿಂದ, ತಂಡ ಸಂಪೂರ್ಣ ಬಲಿಷ್ಠವಾಗಿರುತ್ತದೆ. ಹೆಚ್ಚುವರಿ ಆಟಗಾರರನ್ನು ತೆಗೆದುಕೊಳ್ಳಬೇಕಾದ ಅಗತ್ಯವೇ ಇರುವುದಿಲ್ಲ. ಉದಾಹರಣೆಗೆ, ಈಗ ಇಂಗ್ಲೆಂಡ್‌ ತಂಡದಲ್ಲಿರುವ ಆಲ್‌ ರೌಂಡರ್‌ಗಳಾದ ಬೆನ್‌ಸ್ಟೋಕ್ಸ್‌, ಕ್ರಿಸ್‌ವೋಕ್ಸ್‌ ಮುಖ್ಯವೇಗಿಗಳ ಪಾತ್ರ ನಿರ್ವಹಿಸುತ್ತಾರೆ. ಮೋಯಿನ್‌ ಅಲಿ ಬ್ಯಾಟಿಂಗ್‌ ಜೊತೆಗೆ ಮುಖ್ಯ ಸ್ಪಿನ್ನರ್‌ ಪಾತ್ರ ನಿರ್ವಹಿಸುತ್ತಾರೆ. ಇದರ ಪರಿಣಾಮ ತಂಡದ 8ನೇ ಕ್ರಮಾಂಕದವರೆಗೆ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆಗ ಯಾರೋ ಒಬ್ಬರು ಆಡಿ ತಂಡವನ್ನು ಗೆಲ್ಲಿಸುವ ವಿಶ್ವಾಸವಿರುತ್ತದೆ.

ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದರೆ, ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ನತದೃಷ್ಟ ತಂಡವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಇದು ಸಕಾಲ. 40ಕ್ಕೂ ಅಧಿಕ ವರ್ಷಗಳ ವಿಶ್ವಕಪ್‌ ಗೆಲ್ಲದೇ ಬರ ಅನುಭವಿಸಿರುವ ಇಂಗ್ಲೆಂಡ್‌, ಈ ಬಾರಿ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಕಾತುರದಿಂದ ಕಾದು ನಿಂತಿದೆ. ಅದಕ್ಕೆ ಪೂರಕವಾಗಿ ತಂಡವನ್ನು ರಚಿಸಿಕೊಂಡಿದೆ. ಅದು ಉಪಾಂತ್ಯ ಮತ್ತು ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯ
ತಂಡಗಳು ಒಡ್ಡುವ ಸವಾಲನ್ನು ಮೀರಿ ನಿಂತರೆ ವಿಶ್ವಕಪ್‌ ಗೆಲ್ಲುವುದು ಖಾತ್ರಿ.

ರೌಂಡ್‌ ರಾಬಿನ್‌
ಮಾದರಿ ಹೇಗಿರುತ್ತದೆ?
ಒಂದು ಗುಂಪಿನಲ್ಲಿರುವ ಒಂದು ತಂಡ ಉಳಿದೆಲ್ಲ ತಂಡಗಳ ವಿರುದಟಛಿ ಸೆಣಸುವುದನ್ನು ರೌಂಡ್‌ ರಾಬಿನ್‌ ಲೀಗ್‌ ಎನ್ನುತ್ತಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಒಂದೇ ಗುಂಪು ಮಾಡಲಾಗಿದೆ. ಪಾಲ್ಗೊಳ್ಳುವ ಹತ್ತೂ ತಂಡಗಳು, ಮತ್ತೂಂದು ತಂಡದ ವಿರುದ್ಧ ಸೆಣಸುತ್ತವೆ. ಅಗ್ರಸ್ಥಾನ ಪಡೆದ ನಂತರ 4 ತಂಡಗಳು ಸೆಮಿಫೈನಲ್‌ಗೆ ಸ್ಥಾನ ಪಡೆಯುತ್ತವೆ. ಅಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೇರುತ್ತವೆ. ಅಲ್ಲಿ ಗೆದ್ದ ತಂಡಕ್ಕೆ ಟ್ರೋಫಿ.ಈ ಬಾರಿ ವಿಶ್ವಕಪ್‌ನಲ್ಲಿ ಇದೇ ಮಾದರಿಯನ್ನು ಅಳವಡಿಸಲಾಗಿದೆ. ವಿಶ್ವಕಪ್‌ನ ಆರಂಭದ ಕಾಲದಲ್ಲಿ ಈ ಮಾದರಿಯನ್ನು ಬಳಸಿಕೊಳ್ಳಲಾಗಿತ್ತು. ಅದಾದ ನಂತರ ಅಪರೂಪಕ್ಕೆ ಇಂತಹ ಪ್ರಯೋಗ ಮಾಡಲಾಗಿದೆ.

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.