- Tuesday 10 Dec 2019
ಅಪಕೀರ್ತಿ ಎಂಬ ಸಾವೂ , ನಾವೂ
Team Udayavani, Jun 15, 2019, 10:16 AM IST
ಮಾನ ಹೋದ ಮೇಲೆ ಬದುಕಿ ಫಲವೇನು? ಎಂಬ ಮಾತು ರೂಢಿಯಲ್ಲಿದೆ. ಹಾಗಾಗಿ ಮನುಷ್ಯ ಹೆದರುವುದು ಮಾನಕ್ಕೆ. ಧನವಂತನಲ್ಲದೇ ಹೋದರೂ
ತೊಂದರೆಯಿಲ್ಲ, ಇರುವಷ್ಟು ಕಾಲ ಮಾನವಂತನಾಗಿ ಬದುಕಿದರೆ ಸಾಕು ಎಂಬುದು ಎಲ್ಲರ ಆಸೆ. ನಮ್ಮ ಬದುಕು ಸಂಪೂರ್ಣವಾಗಿ ಸ್ವಂತದ್ದೇ ಆದರೂ, ಅದು ಲೌಕಿಕವಾದ ಜಗತ್ತನ್ನೂ ಅಲೌಕಿಕ ಇಂದ್ರಿಯಗಳನ್ನೂ
ಅವಲಂಬಿಸಿದೆ. ಈ ಅವಲಂಬನೆಯ ಬದುಕು, ಸುಖ, ಸಂತೋಷ, ದುಃಖ- ದುಮ್ಮಾನಗಳನ್ನು ಸವರಿಕೊಂಡೇ ಸಾಗುತ್ತಿರುತ್ತದೆ. ಇದು ನಿರಂತರ ಚಲನೆ. ಈ ದಿನ ಅಥವಾ ಇವತ್ತು ಹುಟ್ಟಿದ ಕ್ಷಣವೇ ಸಾವಿನತ್ತ ಮುಖ ಮಾಡುತ್ತದೆ. ನಾವು ಕೂಡ ಅಷ್ಟೆ, ಹುಟ್ಟಿದ್ದೇವೆ ಎಂದರೆ ಸಾಯಲಿದ್ದೇವೆ ಎಂದೇ ಅರ್ಥ. ಆದರೆ
ಸಾವು ಕಾಲ-ಕಾರಣ ಎಲ್ಲವನ್ನೂ ಮೀರಿದ್ದು. ಸಾವು ಇವತ್ತಲ್ಲದಿದ್ದರೆ ನಾಳೆ ಬರಬಹುದು. ಆದರೆ ಬದುಕು ಸಾವಿಗಿಂತಲೂ ಹೀನವಾದದ್ದು. ಬದುಕು ಯಾವುದು? ಮತ್ತು ಹೇಗೆ ಬದುಕುವುದು ಎಂಬ ಚಿಂತೆಯಲ್ಲಿಯೇ ಇವತ್ತು ಹಾಗೂ ನಾಳೆಗಳು ಹುಟ್ಟುತ್ತವೆ; ಸಾಯುತ್ತವೆ. ನಾನು ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಬಹುಶಃ ನಾವು ಪ್ರತಿಕ್ಷಣವೂ ಸಾಯುತ್ತಲೇ ಇರುತ್ತೇವೆ.
ಬದುಕೊಂದು ದಾರಿ
ಈ ಬದುಕಿಗೆ ದಾರಿ ಧರ್ಮ. ಧರ್ಮಾನುಸಾರ ಪಾಲಿಸಬೇಕಾದ ಕರ್ಮಗಳನ್ನು ಬಿಟ್ಟ ಮೇಲೆ ಬದುಕೆಂಬ ಬದುಕೇ, ಸತ್ತು ಶ್ಮಶಾನ ಸೇರಿದಂತೆ. ಹಾಗಾಗಿಯೇ ಮನದ ಸಂಕಲ್ಪ ಧರ್ಮಯುತವಾಗಿ ಇರಬೇಕು. ಇಂದ್ರಿಯಗಳು ನಿಯಂತ್ರಿಸಲ್ಪಡಬೇಕು. ದೇವರು- ಧರ್ಮ ಕೇವಲ ನಂಬುಗೆಯಲ್ಲ. ಅಲಂಕಾರಕ್ಕಿಟ್ಟ ಬಣ್ಣದ ರಥವೂ ಅಲ್ಲ. ನಮ್ಮೊಳಗಿನ ನಾವು ಏನಾಗಿದ್ದೇವೆ? ನಾವು ಏನಾಗಬೇಕು? ಎಂಬ ಅವಲೋಕನಕ್ಕೆ ಇರುವ ಸಾಧನ. ಗುಡಿಯಲ್ಲಿರುವ ಮೂರ್ತಿಗೆ ಧರ್ಮವಿಲ್ಲ. ಅಧರ್ಮವನ್ನು ಆ ಮೂರ್ತಿಯೊಳಗೆ ನೆಟ್ಟು, ಧರ್ಮದೊಳಗೆ ನಾವು ಬಂಧಿಯಾ ಗಬೇಕು. ಹೀಗೆ
ಬಂಧಿಯಾಗದೇ ಬದುಕಿಗೆ ಬಿಡುಗಡೆಯಿಲ್ಲ. ಒಂದು ಶುದ ಸಂಕಲ್ಪ ಮೂರ್ತಿಯೆದುರು ನಿಶ್ಚಯವಾದಾಗ, ಅದುವೇ ನಿಷ್ಕಲ್ಮಷ ಬದುಕಿಗೆ ಸೂತ್ರವಾದಾಗ ಅದಕ್ಕೆ ದೇವರೂ ಸಾಕ್ಷಿಯಾಗುತ್ತಾನೆ ಮತ್ತು ತಥಾಸ್ತು ಅನ್ನುತ್ತಾನೆ. ಇದೇ ಸೂತ್ರವನ್ನು ಇಟ್ಟುಕೊಂಡು ನೀತಿ ಶತಕ ಒಂದು ಮುತ್ತಿನಂಥ ಮಾತನ್ನು ಹೇಳುತ್ತದೆ. ಇದು ಬರಿಯ ಮಾತಲ್ಲ. ಜೀವನಕ್ಕೆ ಹಾಕಿಕೊಳ್ಳಬೇಕಾದ ಒಂದು ಚೌಕಟ್ಟು. ಒಂದು ಜ್ಞಾನ ಮತ್ತು ಒಂದು ಬೆಳಕು. ದುರಾಸೆಯಿದ್ದ ಮೇಲೆ ಇತರ ದುರ್ಗುಣಗಳೇಕೆ ಚಾಡಿಕೋರತನವಿದ್ದರೆ ಪಾತಕಗಳೇಕೆ? ಸತ್ಯವಿದ್ದಮೇಲೆ ತಪಸ್ಸು ಏತಕ್ಕೆ? ನಿಷ್ಕಲ್ಮಷವಾದ ಮನಸ್ಸು ಇದ್ದಮೇಲೆ ತೀರ್ಥಯಾತ್ರೆ ಏತಕ್ಕೆ? ಸೌಜನ್ಯವಿದ್ದ ಮೇಲೆ ಸ್ವಜನರು ಏತಕ್ಕೆ? ನಿಜವಾದ ಮಹಿಮೆಯಿದ್ದ ಮೇಲೆ ಒಡವೆಗಳೇಕೆ? ಒಳ್ಳೆಯ ವಿದ್ಯೆಯಿದ್ದ ಮೇಲೆ ಹಣ ಏತಕ್ಕೆ? ಅಪಕೀರ್ತಿಯಿದ್ದ ಮೇಲೆ ಮೃತ್ಯು ಏತಕ್ಕೆ? ಇದು ನೀತಿಶತಕ ಕೇಳುವ ಮತ್ತು ನಮ್ಮೊಳಗೆ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು.
ದುರಾಸೆಯೇ ದುರ್ಗುಣಗಳ ಮೂಲ
ಶುದಛಿ ಮನಸ್ಸು, ಸತ್ಯ, ಸೌಜನ್ಯ, ಉತ್ತಮ ವಿದ್ಯೆ ನಮ್ಮಲ್ಲಿದ್ದರೆ, ದೇವರು ನಮ್ಮನ್ನೂ, ಜಗವನ್ನೂ ಮೆಚ್ಚುವ. ಇವು ಇಲ್ಲ ವಾದಾಗಲೇ ದುರಾಸೆ, ಚಾಡಿಕೋರತನ, ದೌರ್ಜನ್ಯಗಳು ನಮ್ಮನ್ನು ಆಳುತ್ತವೆ. ಇವುಗಳ ಅಡಿಯಾಳಾದಾಗ ಅಪಕೀರ್ತಿಯ ಪಟ್ಟ ತಪ್ಪಿದ್ದಲ್ಲ. ಅಪಕೀರ್ತಿ ಜೊತೆಯಾದರೆ ಬದುಕಿದ್ದಾಗಲೇ ಸತ್ತಂತೆ. ಕೀರ್ತಿಯು ಕ್ಷಣಿಕ ನೆಮ್ಮದಿಯನ್ನೋ ಹರ್ಷವನ್ನೋ ಕೊಡ ಬಹುದು. ಆದರೆ ಅಪಕೀರ್ತಿ ಕೇವಲ ನೋವನ್ನಲ್ಲ; ಜನ್ಮವಿಡೀ ತಲೆಯೆತ್ತಿ ನಿಲ್ಲದಂಥ ಸ್ಥಿತಿಗೆ ನಮ್ಮನ್ನು ಕರೆದೊಯುತ್ತದೆ. ಜೀವನ ವನ್ನು ಉಳಿಸುವುದು, ಬೆಳೆಸುವುದು ಸತ್ಕರ್ಮ ಮತ್ತು ಸತ್ಧರ್ಮ ಮಾತ್ರ.
ವಿಷ್ಣು ಭಟ್ ಹೊಸ್ಮನೆ
ಈ ವಿಭಾಗದಿಂದ ಇನ್ನಷ್ಟು
-
ಡಾ.ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು' ಈಗ ಸಿನಿಮಾ ತೆರೆಯ ಮೇಲೆ ಎದ್ದುಬಂದಿದ್ದಾಳೆ. ಆ ಚಿತ್ರದಲ್ಲಿ ಆಕೆಯ ಪಾಲಿಗೆ ಧ್ಯಾನಪೀಠವೇ ಆಗಿಹೋಗಿರುವುದು, ಒಂದು...
-
ಭಾರತದ ಮೊದಲನೇ ಕರಡಿ ಧಾಮದ ಖ್ಯಾತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿ ಧಾಮದ್ದು. ಈ ಧಾಮಕ್ಕೀಗ ಭರ್ತಿ 25 ವರ್ಷ. ಕರಡಿ- ಮಾನವರ ಸಂಘರ್ಷ ತಡೆಯುವ...
-
ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...
-
ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...
-
ಸದ್ಗುರು ಕ್ಷೇತ್ರಗಳ ಸಾಲಿನಲ್ಲಿ ವರದಪುರದ ಶ್ರೀಧರಾಶ್ರಮ, ಭಕ್ತರ ಜನಮಾನಸದಲ್ಲಿ ಹೆಸರು ಮಾಡಿರುವ ತಾಣ. ಸುಂದರ ಬೆಟ್ಟದ ತಪ್ಪಲಿನಲ್ಲಿ, ಮಲೆನಾಡಿನ ಹಸಿರಿನ ತಂಪಿನಲ್ಲಿರುವ...
ಹೊಸ ಸೇರ್ಪಡೆ
-
ಹೊಸದಿಲ್ಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಂದ್ ಆಚರಿಸಲಾಗುತ್ತಿದೆ. ಈಶಾನ್ಯ...
-
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಬಂಟ್ವಾಳ ನಿವಾಸಿ ಆನಂದ ಜಿ. ಅವರು ಡಿ. 9ರ ತಡರಾತ್ರಿ ನಿಧನ ಹೊಂದಿದ್ದಾರೆ. ಬಿಜೆಪಿ ಪಕ್ಷದಲ್ಲಿ ವಿವಿಧ...
-
ಹೊಸದಿಲ್ಲಿ: ಜನರ ಬ್ಯಾಂಕ್ ಖಾತೆಯಿಂದ ಕಳ್ಳದಾರಿಯಲ್ಲಿ ಹಣ ಕದಿಯುತ್ತಿದ್ದ ರೋಮಾನಿಯಾದ ಪ್ರಜೆಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೋಮಾನಿಯಾ...
-
ಹೊಸದಿಲ್ಲಿ: ಐವತ್ತು ಮೈಕ್ರಾನ್ಗಳಿಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬ್ಯಾಗ್ ಬಳಕೆಯಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ...
-
ಇಂಫಾಲ್: ಕೆಳಗೆ ಬಿದ್ದ ವಸ್ತುಗಳನ್ನು ಹೆಕ್ಕಿ ಕೊಡುವ ಮತ್ತು ಸಂಭಾಷಣೆ ನಡೆಸುವ ರೋಬೋಟ್ ಅನ್ನು ಮಣಿಪುರ ರಾಜಧಾನಿ ಇಂಫಾಲ್ನ ಇರಾಮ್ ರೋಶನ್ (21) ಎಂಬ ಯುವಕ...