ಸಂತ್ರಸ್ತರ ದುಃಖಕ್ಕೆ ದನಿಯಾಗಿ…
ಮೇಷ್ಟ್ರು: ವೀರಣ್ಣ ಮಡಿವಾಳರ; ಸೇವೆ: ಪ್ರವಾಹ ಸಂತ್ರಸ್ತರಿಗೆ ನೆರವು
Team Udayavani, Aug 31, 2019, 5:11 AM IST
ಕಳೆದ ಒಂದು ವರುಷದಲ್ಲಿ, ಬೆಳಗಾವಿ ಜಿಲ್ಲೆಯ ಅಂಬೇಡ್ಕರ್ ನಗರದ ನಿಡಗುಂದಿ ಶಾಲೆ, ತಾನೇ ನಂಬದಷ್ಟು ಹೊಸತನಗಳಿಗೆ ಮುಖವೊಡ್ಡಿತು. ಶಾಲೆಯ ತುಂಬೆಲ್ಲ, ಕಾಮನಬಿಲ್ಲು ಮೂಡಿತು. ಗೋಡೆಗಳು ಬಣ್ಣಬಣ್ಣದ ಚಿತ್ತಾರ ಹೊತ್ತು, ಮಕ್ಕಳ ಮನೋಲೋಕವನ್ನು ಕದ್ದವು. ಶಾಲೆಯಂಗಳ, ಹೂ ಹಸಿರ ಸೌಂದರ್ಯದಿಂದ ತೂಗಾಡಿತು. “ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎಂಬ ಅಭಿಯಾನವನ್ನು ಮನ್ನಡೆಸುವಲ್ಲೂ ಈ ಶಾಲೆ ಮುಂಚೂಣಿ. ಈಗ ಈ ಶಾಲೆ ಮತ್ತಷ್ಟು ಅಪ್ಡೇಟ್ ಆಗಿ, “ಸ್ಮಾರ್ಟ್ ಪ್ಲಸ್’ ಆಗಿದೆ. ಆಧುನಿಕ ಕಲಿಕೋಪಕರಣಗಳ ಮೂಲಕ ಮಕ್ಕಳು ಡಿಜಿಟಲ್ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಎಲ್ಲ ಕ್ರಾಂತಿಯ ಹಿಂದೆ ಇರುವ ಮೇಷ್ಟ್ರು, ವೀರಣ್ಣ ಮಡಿವಾಳರ. ಕನ್ನಡ ಸಾಹಿತ್ಯದಲ್ಲೂ ಇವರ ಕೊಡುಗೆ ಕಾಣಬಹುದು. ಮೊನ್ನೆ ಇದೇ ಮೇಷ್ಟ್ರು, ಪ್ರವಾಹದ ಹೊತ್ತಿನಲ್ಲಿ ಕೈಕಟ್ಟಿ ಕೂರಲಿಲ್ಲ. ಶಾಲೆಯನ್ನು ಚೆಂದಗಾಣಿಸಲು ಯಾವ ಫೇಸ್ಬುಕ್ ಗೋಡೆ ನೆರವಾಗಿತ್ತೋ, ಅದೇ ಗೋಡೆಯ ಮೇಲೆ ತಮ್ಮ ನೆಲದ ಸಂಕಟ ಹಂಚಿಕೊಂಡರು. ಪ್ರವಾಹ ಪೀಡಿತ ಹಳ್ಳಿಗಳಿಗೆ ಹೋಗಿ, ಒಬ್ಬ ಸುದ್ದಿಗಾರನಂತೆ ಲೈವ್ ವಿಡಿಯೋಗಳ ಮೂಲಕ ಜನರ ಸಂತ್ರಸ್ತ ಬದುಕನ್ನು ಎಲ್ಲರ ಮುಂದಿಟ್ಟರು. ನೆರವು, ಪ್ರವಾಹದಂತೆ ಬಂತು. ಹಾಗೆ ಬಂದ ನೆರವನ್ನು, ಕಷ್ಟದಲ್ಲಿದ್ದ ಜನರಿಗೆ ಮುಟ್ಟಿಸಿದರು. ಆಹಾರ ಧಾನ್ಯ, ಉಡುಪು, ಪುಸ್ತಕ, ಬ್ಯಾಗುಗಳನ್ನು ಸಲ್ಲ ಬೇಕಾದವರಿಗೆ ಸಲ್ಲಿಸಿ, ಪುಣ್ಯ ಕಟ್ಟಿಕೊಂಡರು.
– ಸೋಮು ಕುದರಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..