ದುಷ್ಟ ಭಯಂಕರಿ “ಬನಶಂಕರಿ’


Team Udayavani, Dec 28, 2019, 6:09 AM IST

dushta

ಬನಶಂಕರಿ ದೇವಿಯ ಜಾತ್ರೆಯು ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧ. ಈ ಬಾರಿ ರಥೋತ್ಸವವು, ಪುಷ್ಯ ಮಾಸದ ಬನದ ಹುಣ್ಣಿಮೆಯಂದು (ಜ.10) ಏರ್ಪಡುತ್ತಿದೆ…

ಬನಶಂಕರಿಯ ಶಾಕಾಂಬರಿಯ ಶಕ್ತಿಪೀಠ ನಾಡಿನ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ ದೇವಿಯು ನವದುರ್ಗೆಯರಲ್ಲಿ 6ನೇ ಅವತಾರ. ಪಾರ್ವತಿಯು ಸಿಂಹದ ಮೇಲೆ ಕುಳಿತು, ಸದ್ಭಕ್ತರಿಗೆ ಅಭಯಹಸ್ತ ಚಾಚಿರುವ ಜಗನ್ಮಾತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಶಕ್ತಿಪೀಠಕ್ಕೆ ನಾನಾ ಕಥೆಗಳಿವೆ. ಈ ಹಿಂದೆ ಇಲ್ಲಿ ಜಲಕ್ಷಾಮ ಆಗಿದ್ದಾಗ, ಬನಶಂಕರಿ ದೇವಿಯು ಜಲಕೃಪೆ ನೀಡಿದಳು ಎನ್ನುವುದು ಒಂದು ಪ್ರತೀತಿ.

ತಿಲಕಾರಣ್ಯದಲ್ಲಿ ದುರ್ಗರಕ್ತ ಮತ್ತು ಧೂಮ್ರಾಕ್ಷರೆಂಬ ಕ್ರೂರ ರಾಕ್ಷಸರು ಸರ್ವರಿಗೂ ತೊಂದರೆ ಕೊಡುತ್ತಾ, ದೇವಲೋಕಕ್ಕೂ ದಾಳಿಯಿಟ್ಟರಂತೆ. ಆಗ ದೇವಿ ಆದಿಶಕ್ತಿಯ ಉಗ್ರ ರೂಪ ತಾಳಿ, ರಾಕ್ಷಸರನ್ನು ಸಂಹರಿಸುತ್ತಾಳೆ. ನಂತರ ದೇವತೆಗಳ ಭಕ್ತಿಗೆ ಒಲಿದು, ಶಾಂತ ಸ್ವರೂಪಿಯಾಗಿ ಬನಶಂಕರಿಯಲ್ಲಿ ನೆಲೆ ನಿಂತಳು ಎನ್ನುವ ನಂಬಿಕೆಯೂ ಇದೆ.

ಚಾಲುಕ್ಯ ಧಾಮ: ಕೋಟೆಯನ್ನು ನೆನಪಿಸುವ ಪ್ರವೇಶ ದ್ವಾರ, 360 ಅಡಿಗಳ ಚೌಕಾಕಾರದ ಕಲ್ಯಾಣಿ… ಹಾಗೇ ಮುಂದಕ್ಕೆ ಹೋದರೆ, ಸುಂದರ ಬನಶಂಕರಿ ದೇವಾಲಯ. 7ನೇ ಶತಮಾನದ ಚಾಲುಕ್ಯರ ಅರಸನಾದ 1ನೇ ಜಗದೇಕಮಲ್ಲನ ಕಾಲದಲ್ಲಿ ಈ ದೇಗುಲವನ್ನು ಕಟ್ಟಲಾಯಿತು. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಬಗ್ಗೆ ಶಾಸನಗಳು ಹೇಳುತ್ತವೆ. 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು, ದೇಗುಲದ ಪುನರ್‌ ನಿರ್ಮಾಣ ಮಾಡಿರುವ ಬಗ್ಗೆ ಉಲ್ಲೇಖಗಳಿವೆ. ಸ್ತಂಭಗಳಲ್ಲಿ ಚಿತ್ರಿತವಾದ ಚಾಲುಕ್ಯ ವಾಸ್ತುಶಿಲ್ಪದ ಕುಸುರಿ ಕಲೆಯ ಅಂದಕ್ಕೆ ದೃಷ್ಟಿಯ ಬೊಟ್ಟು ಇಡಲೇಬೇಕು. ಅಷ್ಟು ಸೊಗಸಾಗಿದೆ.

ಆಳೆತ್ತರದ ದೇವಿ: ಗರ್ಭಗುಡಿಯಲ್ಲಿ ಸಿಂಹದ ಮೇಲೆ ಕುಳಿತ ಪಾರ್ವತಿ ದೇವಿಯ ಮೂರ್ತಿ, 5 ಅಡಿ ಎತ್ತರವಿದೆ. ಮೂರ್ತಿಯು ಕಪ್ಪುಶಿಲೆಯಿಂದ ಕೂಡಿದೆ. ದೇವಿಗೆ ಅಷ್ಟ ಭುಜಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಹಾಗೂ ಲಿಪ್ತಿ ಅಲ್ಲದೆ, ಎಡಗೈಯಲ್ಲಿ ಡಮರು, ಢಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ಈ ದೇವಿ, ತ್ರಿನೇತ್ರೆ; ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಸ್ವರೂಪಿಣಿ.

ಬನಶಂಕರಿ ದೇವಿಯ ಜಾತ್ರೆಯು ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧ. ಈ ಬಾರಿ ರಥೋತ್ಸವವು, ಪುಷ್ಯ ಮಾಸದ ಬನದ ಹುಣ್ಣಿಮೆಯಂದು (ಜ.10) ಏರ್ಪಡುತ್ತಿದೆ. 108 ವಿವಿಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿಡುವುದು ಈ ಸಂದರ್ಭದ ವಿಶೇಷ.

ದರುಶನಕೆ ದಾರಿ…: ಬನಶಂಕರಿ ದೇಗುಲವು, ಬಾಗಲಕೋಟೆಯಿಂದ 38 ಕಿ.ಮೀ. ದೂರದಲ್ಲಿದೆ. ಬಾದಾಮಿಯಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ರೈಲು, ಬಸ್ಸು ಸಂಪರ್ಕ ಬೆಸೆಯುತ್ತವೆ.

ತೆಪ್ಪದೊಳು ಕಂದಮ್ಮ…: ಬನಶಂಕರಿಯಲ್ಲಿ ಜಾತ್ರೆ ವೇಳೆ ನಡೆಯುವ ತೆಪ್ಪೋತ್ಸವ, ಒಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗುತ್ತದೆ. ನವಜಾತ ಶಿಶುಗಳಿಗೆ ದೇವಿಯ ಆಶೀರ್ವಾದ ಸಿಗಲೆಂದು ಪಾಲಕರು, ಬಾಳೆದಿಂಡಿನಲ್ಲಿ ತಯಾರಿಸಲಾದ ತೆಪ್ಪದಲ್ಲಿ ಮಗುವನ್ನು ಮಲಗಿಸಿ, ಕಲ್ಯಾಣಿಗೆ ಪ್ರದಕ್ಷಿಣೆ ಹಾಕುತ್ತಾರೆ.

* ಸುರೇಶ ಗುದಗನವರ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.