ನೆಲದಿಂದ ಎದ್ದ ಹನುಮ

ಸಾಮರಸ್ಯ ಸಾರುವ ಪುಣ್ಯಧಾಮ - ಶ್ರೀ ನೆಲದ ಆಂಜನೇಯ, ದೊಡ್ಡಬಳ್ಳಾಪುರ

Team Udayavani, Feb 22, 2020, 6:06 AM IST

neladinda

ರೈತರು ಮಣ್ಣಿನ ದಿಬ್ಬವನ್ನು ನೆಲಸಮ ಮಾಡುವಾಗ, ನೆಲದ ಅಡಿಯಲ್ಲಿ ಹನುಮನ ಗುಡಿ ಕಾಣಿಸಿತು. ಆತನೇ “ನೆಲದಾಂಜನೇಯ’ ಎಂದು ಪ್ರಸಿದ್ಧಿ ಪಡೆದ…

ಕಲಿಯುಗದಲ್ಲಿ ಶನಿದೇವರ ಕೃಪಾಕಟಾಕ್ಷ ಬೇಕಿದ್ದರೆ ಹನುಮಂತನನ್ನು ಆರಾಧಿಸಬೇಕು. ಶಕ್ತಿ, ಯುಕ್ತಿ ಸಾಹಸಕ್ಕೆ ಹನುಮಂತ ಪ್ರಸಿದ್ಧಿ. ಅದರಲ್ಲೂ ಪುರಾತನ ದೇಗುಲಗಳ ಹನುಮ ಎಷ್ಟೇ ದೂರವಿದ್ದರೂ, ಭಕ್ತರು ನಂಬಿ ಬರುತ್ತಾರೆ. ದೊಡ್ಡಬಳ್ಳಾಪುರ­ದಲ್ಲಿರುವ ನೆಲದ ಅಂಜನೇಯ ಕೂಡ ಅಂಥ ಮಹಿಮೆಯುಳ್ಳ ಕ್ಷೇತ್ರ.

ನೆಲದಡಿ ಸಿಕ್ಕ ದೇಗುಲ: ಶತಮಾನಗಳ ಹಿಂದೆ ಈ ದೇಗುಲದ ಜಾಗದಲ್ಲಿ ಹೊಲವಿತ್ತು. ಮಣ್ಣಿನ ದಿಬ್ಬವನ್ನು ನೆಲಸಮ ಮಾಡುವಾಗ, ಇಲ್ಲಿ ನೆಲದ ಆಳದಲ್ಲಿ ದೇವಸ್ಥಾನದ ಗರ್ಭಗುಡಿ ಕಾಣಿಸಿತು. ನಂತರದಲ್ಲಿ ಹನುಮ ಗುಡಿಯನ್ನು ಸ್ವಚ್ಛಮಾಡಿ, ಭಕ್ತಾದಿಗಳು ಬರಲು ದಾರಿಮಾಡಿ, ಪೂಜೆ- ಪುನಸ್ಕಾರಗಳು ಪ್ರಾರಂಭವಾದವು.

ದೇವಸ್ಥಾನ ಹಾಗೂ ದೇವರ ಮೂರ್ತಿ ನೆಲದಡಿಯಲ್ಲಿ ಸಿಕ್ಕಿದ್ದರಿಂದ ಈ ಹನುಮಪ್ಪನಿಗೆ ನೆಲದಾಂಜನೇಯ ಎಂಬ ಹೆಸರು ಬಂತು. ಈ ದೇಗುಲ ಹಾಗೂ ಮೂರ್ತಿ, ಸಾವಿರಾರು ವರ್ಷದ ಹಿಂದಿನದು ಇರಬಹುದೆಂದು ಅಂದಾಜಿಸಲಾಗಿದೆ. ಹಿಂದೆ ಧರ್ಮಾಂಧ ದಾಳಿಕೋರರು ಶ್ರದ್ಧಾ ಹಿಂದೂ ದೇಗುಲಗಳನ್ನು ನಾಶಮಾಡುತ್ತಿದ್ದ ಕಾಲದಲ್ಲಿ ಈ ಗುಡಿಯನ್ನು ರಕ್ಷಿಸುವುದಕ್ಕಾಗಿ ಮಣ್ಣಿನಲ್ಲಿ ಮುಚ್ಚಿ ರಕ್ಷಿಸಿರಬಹುದು ಎಂದು ಊಹಿಸಲಾಗಿದೆ.

ರಾಮ- ಹನುಮ ಆಲಿಂಗನ: ಮುಖ್ಯದ್ವಾರದಲ್ಲಿ ಶ್ರೀರಾಮ- ಹನುಮರು ಆಲಿಂಗಿಸಿಕೊಂಡಿರುವ ಆಳೆತ್ತರದ ಮೂರ್ತಿ ಮನಸ್ಸಿಗೆ ಮುದ ನೀಡುವಂತಿದೆ. ಪ್ರತಿದಿನವೂ ಸಾವಿರಾರು ಜನ ಈ ದೇಗುಲಕ್ಕೆ ಬಂದು ಅಂಜನೇಯನಿಗೆ ಹರಕೆ ಸಲ್ಲಿಸುತ್ತಾರೆ.

8 ದಿನ ನಿರಂತರ ಪ್ರದಕ್ಷಿಣೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ಪ್ರತೀತಿ ಇದೆ. ಸಂತಾನಭಾಗ್ಯ ಕರುಣಿಸುವ ಕರುಣಾಮಯಿ ಈ ಹನುಮ. ಕಂಕಣ ಭಾಗ್ಯ ಕೂಡಿರದ ಹುಡುಗಿಯರು ಇಲ್ಲಿ 48 ದಿನ ಬಂದು ಹನುಮಪ್ಪನ ದರ್ಶನ- ಪೂಜೆ ಮಾಡಿದರೆ, ಕಂಕಣಭಾಗ್ಯ ಕೂಡಿಬರುತ್ತದೆ ಎಂದು ಭಕ್ತರು ನಂಬಿದ್ದಾರೆ.

ದರುಶನಕೆ ದಾರಿ…: ದೊಡ್ಡಬಳ್ಳಾಪುರದ ಹಳೇ ಬಸ್‌ ನಿಲ್ದಾಣದ ಸಮೀಪವೇ ನೆಲದ ಅಂಜನೇಯ ಸ್ವಾಮಿಯ ದೇಗುಲದ ಮುಖ್ಯದ್ವಾರ ಕೈಬೀಸಿ ಕರೆಯುತ್ತದೆ.

ಭಕ್ತರೇ ಇಲ್ಲಿ ಅರ್ಚಕರು!
-ಈ ದೇಗುಲಕ್ಕೆ ಯಾರೂ ಅರ್ಚಕರಿರುವುದಿಲ್ಲ. ಈ ದೇಗುಲಕ್ಕೆ ಬರುವ ಭಕ್ತರು ಸ್ವತಃ ತಾವೇ ತಮ್ಮ ಕೈಯ್ನಾರೆ ಹನುಮಪ್ಪನಿಗೆ ಪೂಜೆ, ಮಂಗಳಾರತಿ ಸಲ್ಲಿಸಿ ಪಾದ ಮುಟ್ಟಿ ನಮಸ್ಕರಿಸಿ ಹೋಗುತ್ತಾರೆ.

-ದೇಗುಲದ ಆವರಣದಲ್ಲಿ ಪಂಚವೃಕ್ಷಗಳಾದ ಅರಳಿಮರ, ಅತ್ತಿಮರ (ದೇವದಾರು) ಬಿಲ್ವಪತ್ರೆ, ಬನ್ನಿಮರ ಹಾಗೂ ಬೇವಿನ ಮರಗಳಿದ್ದು, “ಪಂಚವೃಕ್ಷ ಹನುಮ’ ಎಂಬ ಹೆಸರೂ ಈತನಿಗಿದೆ.

-ದೇವಸ್ಥಾನಕ್ಕೆ ಹೊಂದಿಕೊಂಡಂತೆಯೇ ಮಸೀದಿಯೂ ಇದ್ದು, ಮತೀಯ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

* ಪ್ರಕಾಶ್‌ ಕೆ. ನಾಡಿಗ್‌, ತುಮಕೂರು

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.