ಇಲ್ಲಿ ಭಜನೆ ನಿರಂತರ


Team Udayavani, Jun 1, 2019, 9:13 AM IST

1-a

ಉಡುಪಿಯ ಶ್ರೀಕೃಷ್ಣಮಠದ ಕನಕಗೋಪುರದ ಬಳಿ ಆರಂಭಗೊಂಡ ನಿರಂತರ ಭಜನೆಗೆ ಇಂದು 500ನೇ ದಿನ. 2018ರ ಜನವರಿ 18ರಂದು ಆರಂಭವಾದ ಅಖಂಡ ಭಜನೆ ಹಗಲು, ರಾತ್ರಿ ಎನ್ನದೇ ನಡೆಯುತ್ತಲೇ ಇದೆ. ಈ ನಿರಂತರ ಭಜನೆ 2020ರ ಜನವರಿ 17ರ ಮಧ್ಯರಾತ್ರಿವರೆಗೂ ಮುಂದುವರಿಯುತ್ತದೆ.
—–
ಉಡುಪಿಯ ಕೃಷ್ಣನ ಸನ್ನಿಧಿಗೆ ಹೋದರೆ ಸ್ವಲ್ಪ ಕಿವಿ ತೆರೆದುಕೊಂಡಿರಿ. ಏಕೆಂದರೆ, ದಿನದ 24 ಗಂಟೆ ವಿಠuಲ ನಾಮ ಸ್ಮರಣೆ ನಡೆಯುತಲಿದೆ. ಹೆಚ್ಚು ಕಮ್ಮಿ 18 ತಿಂಗಳುಗಳಿಂದ ಹಗಲು, ರಾತ್ರಿ ಎನ್ನದೆ ಹಾಡುಗಳ ಮೂಲಕ ಕೃಷ್ಣಸ್ಮರಣೆಯಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮ, ಪಂಢರಾಪುರದ ವಿಟuಲ ನಾದಬ್ರಹ್ಮ, ತಿರುಪತಿಯ ತಿಮ್ಮಪ್ಪ ಕಾಂಚನ ಬ್ರಹ್ಮ ಎನ್ನುವುದು ಲೋಕರೂಢಿ. ವಿಟuಲನ ಸನ್ನಿಧಿಯಲ್ಲಿ ನಡೆಯುವ ನಿರಂತರ ತಾಳ, ಭಗವಂತನ ಸಂಕೀರ್ತನೆ ಈ ಎರಡು ವರ್ಷಗಳಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿದೆ.

2018ರ ಜನವರಿ 18ರ ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ಭಜನೆ ಅಖಂಡವಾಗಿ ಮುಂದುವರಿಯುತ್ತಿದೆ. ಇದು 2020ರ ಜನವರಿ 17ರ ಮಧ್ಯರಾತ್ರಿವರೆಗೆ ನಡೆಯಲಿದೆ.

ಶ್ರೀಕೃಷ್ಣಮಠದಲ್ಲಿ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಎರಡನೆಯ ಪರ್ಯಾಯ ಪೂಜೆಯನ್ನು ನಡೆಸುವ ಸಂದರ್ಭದಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ, ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟಗಳು ಸಹಕಾರ ನೀಡುತ್ತಿವೆ. ಕನಕದಾಸರು ಇದ್ದು ಭಜಿಸಿದ ಸ್ಥಳದ ಸಮೀಪದಲ್ಲಿ ಕನಕ ಗೋಪುರವಿದ್ದು, ಅದರ ಪಕ್ಕದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ನಿತ್ಯ ಆರು ಭಜನಾ ಮಂಡಳಿಗಳು ಎರಡೆರಡು ಗಂಟೆಗಳಿಗೊಮ್ಮೆ ಪಾಳಿಯಂತೆ ಹರಿಸಂಕೀರ್ತನೆ ನಡೆಸುತ್ತಿವೆ. ಮೂರು ದಿನಗಳ ಬಳಿಕ ಇನ್ನು ಆರು ತಂಡಗಳು. ಹೀಗೆ ಭಜನೆ ಅನುದಿನ ನಡೆಯುತ್ತಲೇ ಇದೆ…

ನಿತ್ಯ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಮಧ್ವ ಮಂಟಪದಲ್ಲಿ ಸುಪ್ರಭಾತವಿರುತ್ತದೆ. ಇದರಲ್ಲಿ ವಿವಿಧ ದೇವತೆಗಳು, ಗುರುಗಳು, ದಾಸರನ್ನು ಸ್ಮರಿಸುವ ಶ್ಲೋಕಗಳನ್ನು ಪಠಿಸುತ್ತಾರೆ. ಒಂದು ಭಜನಾ ತಂಡ ಭಜನೆ ಹಾಡುತ್ತಿದ್ದರೆ, ಉಳಿದ ಐದು ತಂಡಗಳು ಸುಪ್ರಭಾತದಲ್ಲಿ ಪಾಲ್ಗೊಳ್ಳುತ್ತವೆ. ಪ್ರತಿ ತಂಡ ಎರಡೆರಡು ಗಂಟೆಗೊಮ್ಮೆ ಪಾಳಿಯನ್ನು ಬದಲಾಯಿಸುತ್ತದೆ. ಬೆಳಗ್ಗೆ 6ರಿಂದ 8 ಗಂಟೆವರೆಗೆ ಭಜನೆ ಮಾಡಿದ ತಂಡ, ಮತ್ತೆ ಸಂಜೆ 6ರಿಂದ ಬೆಳಗ್ಗೆ 8 ಗಂಟೆವರೆಗೆ ಭಜನೆ ಮಾಡುವುದು ರೂಢಿಯಲ್ಲಿದೆ.

ಈ ಎಲ್ಲ ಭಜನಾ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿರುವುದು ದಾವಣಗೆರೆ ಮಹಾನಗರಪಾಲಿಕೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಮೂಲತಃ ಬಳ್ಳಾರಿ ಕಂಪ್ಲಿಯವರಾದ ಗುರುರಾಜ ಆಚಾರ್ಯ ಮತ್ತು ಅವರ ಪತ್ನಿ ಗೀತಾ. ಈ ದಂಪತಿ ಇದಕ್ಕೋಸ್ಕರ ಉಡುಪಿಗೇ ಬಂದು ನೆಲೆಸಿದ್ದಾರೆ. “ಈ ಅಪೂರ್ವ ಅವಕಾಶವನ್ನು ಶ್ರೀಕೃಷ್ಣ ಮತ್ತು ಶ್ರೀಪಲಿಮಾರು ಸ್ವಾಮೀಜಿಯವರು ಕೊಟ್ಟಿದ್ದಾರೆ’ ಎನ್ನುತ್ತಾರೆ ಗುರುರಾಜ ಆಚಾರ್ಯ.

ಸೇವಾ ದಾಖಲೆ

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕೇರಳದ ಕಾಸರಗೋಡು, ಆಂಧ್ರಪ್ರದೇಶ, ತಮಿಳುನಾಡು ಭಾಗಗಳಿಂದ ಭಜನಾ ಮಂಡಳಿಗಳು ಜಾತಿಮತಭೇದವಿಲ್ಲದೆ ಬಂದು ನಾದಸೇವೆಯನ್ನು ಸಲ್ಲಿಸುತ್ತಿವೆ. ನಿರಂತರ ಭಜನೆಯು ಜೂ. 1ಕ್ಕೆ 500ನೆಯ ದಿನಕ್ಕೆ ಕಾಲಿಡುತ್ತಿದೆ. ಇದುವರೆಗೆ ಸುಮಾರು 3,000 ಭಜನಾ ಮಂಡಳಿಗಳು ಭಾಗವಹಿಸಿವೆ. ಒಂದು ಬಾರಿ ಬಂದ ತಂಡ ಇನ್ನೊಮ್ಮೆ ಬರುವ ಅಗತ್ಯವಿಲ್ಲದಷ್ಟು ಮಂಡಳಿಗಳಿವೆ. ಈಗೀಗ ದಿನಕ್ಕೆ ಆರು ತಂಡದ ಬದಲು 10-12 ತಂಡಗಳು ಬರುತ್ತಿವೆ. ಒಂದೊಂದು ತಂಡದಲ್ಲಿರುವ ಸದಸ್ಯರ ಸಂಖ್ಯೆ 25 ಜನರೆಂದುಕೊಂಡರೆ 75,000 ಭಜನಾ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇನ್ನಾರು ತಿಂಗಳಲ್ಲಿ ಇದು ಮುಗಿಯಬಹುದು. ಆಗ ಭಾಗಿಯಾದ ಒಟ್ಟು ಕಲಾವಿದರ ಸಂಖ್ಯೆ ಲಕ್ಷ ದಾಟುತ್ತದೆ.

ಶ್ರೀಕೃಷ್ಣನಿಗೆ ನಮ್ಮ ಪರ್ಯಾಯ ಕಾಲದ ಪೂಜೆ ಸಲ್ಲಿಸುವಾಗ ನಿರಂತರ ಭಗವಂತನ ನಾಮಸಂಕೀರ್ತನೆ ನಡೆಯಲಿ ಎಂಬ ಆಶಯದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡೆವು.
ಭಜನಾ ಮಂಡಳಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಮ್ಮಿಂದ ಮಾಹಿತಿ ಹೋಗದಿದ್ದರೂ ಅವರಾಗಿಯೇ ಬಂದು ಸೇವೆ ಸಲ್ಲಿಸುತ್ತಿದ್ದಾರೆ ಬಹಳ ಜನರಿಗೆ ಇದರಿಂದ ಶ್ರೀಕೃಷ್ಣನ ಅನುಗ್ರಹವಾಗಿದೆ ಎನ್ನುತ್ತಾರೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು.

ಶಹನಾಜ್‌ ಭಜನಾಸೇವೆ
ಈ ಭಜನೆಗೆ ಧರ್ಮದ ಬೌಂಡರಿ ಇಲ್ಲ. ಇದಕ್ಕೆ ಶಹನಾಜ್‌ ಉದಾಹರಣೆ- ಈಕೆ ಗದಗ ಜಿಲ್ಲೆ ನರಗುಂದ ತಾಲೂಕು ಶಿರೋಳ ಗ್ರಾಮದವರು. ಹುಬ್ಬಳ್ಳಿಯಲ್ಲಿ ಟೈಲರಿಂಗ್‌ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಇವರಿಗೆ ಭಜನಾ ಮಂಡಳಿಗಳ ಸಂಪರ್ಕವಿದೆ. ಇವರು ಸ್ವತಃ ಭಜನೆ ಕಲಿತು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಎರಡು ದಿನವಿದ್ದು ಸಂಕೀರ್ತನ ಸೇವೆ ಸಲ್ಲಿಸಿದರು. ಆನಂತರ, ಹುಬ್ಬಳ್ಳಿಯಲ್ಲಿ ಮೂರು, ತಿರುವಾಳದಲ್ಲಿ ಒಂದು ತಂಡಕ್ಕೆ ಭಜನಾ ತರಬೇತಿ ಕೊಟ್ಟರು. ಈಗ ಇವರು ಕಲಿಸಿದ ತಂಡಗಳೂ ಉಡುಪಿಗೆ ಬಂದು ನಾದಸೇವೆ ನೀಡಿವೆ. “ನಮ್ಮ ಊರಿನಲ್ಲಿ ಹಿಂದುಗಳು, ಮುಸ್ಲಿಮರು ಕೂಡಿ ಬಾಳುತ್ತಿದ್ದೆವು. ನನಗೆ ಹಾಡುವ ಹವ್ಯಾಸವಿತ್ತು. ಭಜನಾ ಸಂಘಟಕ ಬೆಳಗಾವಿ ಜಿಲ್ಲೆ ರಾಮದುರ್ಗದ ವಿಜಯೇಂದ್ರ ಜೋಷಿಯವರ ಸಂಪರ್ಕವಾದಾಗ ಭಜನೆ ಹೇಳಿಕೊಡಲು ಕೇಳಿದೆ. ಒಪ್ಪಿದರು. ಆರಂಭಿಸಿದ ಒಂದೇ ವಾರದಲ್ಲಿ ನನಗೆ ಉತ್ತಮ ಫ‌ಲಿತಾಂಶ ಸಿಕ್ಕಿದೆ’ ಅನ್ನೋದು ಶಹನಾಜ್‌ ಉತ್ತರ.

ಮಧ್ಯರಾತ್ರಿ ಬಂದ ಮಗು ಯಾರದು?

ಹೀಗೊಂದು ಘಟನೆ ನಡೆಯಿತು. ಇದನ್ನು ನಂಬುವುದು ಬಿಡುವುದು ನಿಮಗೆ ಸೇರಿದ್ದು. ಕಾಸರಗೋಡು ರಾಮದಾಸ ನಗರದ ಹೊತ್ತ “ತಣ್ತೀಮಸಿ’ ಭಜನಾ ತಂಡದ ಆರು ಸದಸ್ಯೆಯರು ಆರು ತಿಂಗಳ ಹಿಂದೆ ಶ್ರೀಕೃಷ್ಣಮಠದ ನಿರಂತರ ಭಜನೆಗೆ ಬಂದಿದ್ದರು. ಇವರ ಪಾಳಿ ರಾತ್ರಿ 12ರಿಂದ 2 ಗಂಟೆ. ಇವರು ಭಜನೆಯನ್ನು ಆಗತಾನೇ ಕಲಿಯಲು ಆರಂಭಿಸಿದ್ದರು. ಎರಡು ಗಂಟೆ ಕಾಲ ಹಾಡುವಷ್ಟು ಹಾಡುಗಳ ದಾಸ್ತಾನೂ ಇರಲಿಲ್ಲ. ಮಧ್ಯರಾತ್ರಿಯಾದ ಕಾರಣ ಅಂಗಡಿ ಬದಿಯಲ್ಲಿ ಮಲಗಿದವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ನಿರ್ಜನ ಪ್ರದೇಶ.

ಯಾರೂ ಇಲ್ಲದ ಕಾರಣ ಹಾಡಿಲ್ಲದಿದ್ದರೂ ಹಾಡುವ ಧೈರ್ಯವಿತ್ತು, ಕಣ್ಣು ಮುಚ್ಚಿ ವೇದಿಕೆಯಲ್ಲಿ “ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ…|’ ಅಂತ ಹಾಡು ಶುರುವಾಯಿತು…ಹಾಡುಗಾರರು ಒಳಗೆ ತನ್ಮಯರಾಗಿದ್ದರೆ ಹೊರಗೆ ಸುಮಾರು ಮೂರು ವರ್ಷ ಪ್ರಾಯದ ದೈವೀ ಅಲಂಕೃತ ಮಗುವೊಂದನ್ನು ಕಾಣೋದೇ! ಮಗು ಆಚಿಂದ ಈಚೆ, ಈಚಿಂದ ಆಚೆ ಹೋಗುತ್ತಿತ್ತು, ಇವರನ್ನು ಕಂಡು ಮುಗುಳು ನಗುತ್ತಿತ್ತು. ಸಹ ಹಾಡುವವರಿಗೆ ಇದಾವ ಮಗು? ತಂದೆ ತಾಯಿ ಎಲ್ಲಿ? ಈ ಹೊತ್ತಲ್ಲಿ ಯಾರ ಕರೆತಂದರು ಎಂಬ ಪ್ರಶ್ನೆ ಮೂಡಿತು. ಕೊನೆಗೆ, ಪಾಳಿ ಬದಲಾಯಿತು. ಹೊಸ ಪಾಳಿಯವರಿಗೆ ಆ ಮಗು ಕಾಣಲಿಲ್ಲ. ಹುಡುಕಿದ ಇವರಿಗೂ ಕಾಣಲಿಲ್ಲ. “ನಮಗೆ ಮಗು ಕಾಣಲಿಲ್ಲ. ಬದಲಿಗೆ ಕನಕನ ಕಿಂಡಿಯಲ್ಲಿ ದರ್ಶನ ಮಾಡಿ ಧನ್ಯರಾದೆವು. ಊರಿಗೆ ಹೋದ ಬಳಿಕ ನಮಗೆ ಭಜನೆ ಹೇಳಿಕೊಡುವ ವಿಷ್ಣುಮಂಗಲ ಕ್ಷೇತ್ರದ ವೀಣಾ ಅವರ ಮನೆಗೆ ಹೋಗಿ ನೋಡಿದರೆ, ಆ ಮಗುವನ್ನು ಹೋಲುವ ಕೃಷ್ಣನ ಚಿತ್ರವಿತ್ತು. ಈಗಲೂ ವಾರಕ್ಕೊಮ್ಮೆ ಅವರ ಮನೆಗೆ ತರಗತಿಗೆ ಹೋದಾಗ ಆ ಚಿತ್ರ ನೋಡದೆ ಸಮಾಧಾನವೇ ಇಲ್ಲ’ ಎನ್ನುತ್ತಾರೆ ತಂಡದಲ್ಲಿ ಹಾಡಿದ ಸದಸ್ಯರಾದ ರತ್ನ, ಶಾಂಭವಿ, ಪುಷ್ಪಾವತಿ, ಪದ್ಮಿನಿ, ದೀಪಾ, ಚಂದ್ರಾವತಿ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.