ತಪೋ ಧಾಮವೀ ತಪ್ಪಲು…

ಚಾಲುಕ್ಯರ ಬೀಡಿನ ಭಕುತಿಯ ಬೆಡಗು

Team Udayavani, Sep 21, 2019, 5:15 AM IST

u-17

ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ ಸಿಗುವಂಥ ಖುಷಿ ಅಥವಾ ಆತ್ಮತೃಪ್ತಿ. ಹಾಗೆ ಉಭಯ ಲಾಭ ನೀಡುವಂಥ ಪವಿತ್ರ ತಾಣಗಳಲ್ಲಿ ಒಂದು, ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಹಾದಿಯಲ್ಲಿರುವ, ಹುಲಿಗೆಮ್ಮನ ಕೊಳ್ಳ. ಇದು, ಭಕ್ತಿಯ ಜತೆಗೆ, ಮನಸ್ಸಿಗೆ ನೆಮ್ಮದಿ ನೀಡುವ ತಾಣ.

ಏಕಶಿಲೆಯ ಬೃಹತ್‌ ಬಂಡೆ. ಮಳೆಗಾಲ ಬಂತೆಂದರೆ, ಇಲ್ಲಿ ಜಲಪಾತಗಳದ್ದೇ ಮಂತ್ರೋಚ್ಛಾರ. ಋಷಿ ಮುನಿಗಳು ತಪೋಗೈದ ಧಾಮವೆಂದು ಇದನ್ನು ನಂಬಲಾಗಿದೆ. 5ನೇ ಶತಮಾನದಲ್ಲಿ ಚಾಲುಕ್ಯರ ದೊರೆಗಳು ಇಲ್ಲಿಯ ತಂಗುತ್ತಿದ್ದರು ಎನ್ನುತ್ತದೆ, ಇತಿಹಾಸ. ಅವರೆಲ್ಲ ಇಲ್ಲಿಯೇ ವಾಸವಿದ್ದು, ಬಾದಾಮಿ, ಪಟ್ಟದಕಲ್ಲು, ಐಹೊಳೆಯ ದೇಗುಲಗಳನ್ನು ಕಟ್ಟಿಸಿದರೆಂದು ಹೇಳಲಾಗುತ್ತದೆ. ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದ ತಾಣಗಳಲ್ಲಿ ಇದೂ ಒಂದಾಗಿತ್ತು ಎಂಬ ಮಾತೂ ಇದೆ. ಬಂಡೆಯ ತಪ್ಪಲಾಗಿದ್ದರಿಂದ, ಇಲ್ಲಿ ಈ ಹಿಂದೆ ಹುಲಿಗಳು ಹೆಚ್ಚು ವಾಸವಿದ್ದವಂತೆ. ಆ ಕಾರಣ, ಇಲ್ಲಿಗೆ “ಹುಲಿಗೆಮ್ಮನ ಕೊಳ್ಳ’ ಎಂಬ ಹೆಸರು ಬಂತು.

ಹುಲಿಗೆಮ್ಮ, ಕೋಣಮ್ಮ ಹಾಗೂ ಲಕ್ಷ್ಮಮ್ಮ ದೇವಿಯರ ಸಂಗಮ ಸ್ಥಳವಿದು. ಕೊಳ್ಳದ ಎಡಬಲ ಸರೋವರದಲ್ಲಿ ಚಿಕ್ಕ, ಚಿಕ್ಕ ಗುಂಡಿಗಳಲ್ಲಿ 10 ಜ್ಯೋತಿರ್ಲಿಂಗಗಳಿವೆ. ಇದರಲ್ಲಿ 3 ಲಿಂಗಗಳು ನಾಶವಾಗಿವೆ.

ಇಲ್ಲಿಯ ಬೆಟ್ಟಗಳು ಭೌಗೋಳಿಕ ವೈಶಿಷ್ಟ್ಯತೆಯ ಜೊತೆಗೆ ದೈವಿಕ ಹಾಗೂ ಅಧ್ಯಾತ್ಮಿಕ ತಾಣವಾಗಿ ಮಾರ್ಪಟ್ಟಿವೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ನಿತ್ಯ ಅನ್ನ ಸಂತರ್ಪಣೆಯು ಸದ್ಭಕ್ತರ ಪಾಲಿಗೆ ಪರಮಪ್ರಸಾದ. ಲಿಂಗಗಳಿಗೆ ನಡೆಯುವ ತ್ರಿಕಾಲ ಪೂಜೆಗಳನ್ನು ನೋಡುವುದೇ ಒಂದು ಚೆಂದ. ಲಜ್ಜಾಗೌರಿ, ನಟರಾಜ, ನಾಯಕ, ಬ್ರಹ್ಮ ಮಹೇಶ್ವರಿ, ಬ್ರಾಹ್ಮಿಣಿ, ವೈಷ್ಣವಿ, ಇಂದ್ರಾಣಿ, ವರಾಣಿ, ನಾಗರಸಿಂಹ ಮೂರ್ತಿಗಳು ಮನೋಹರ.

ಎತ್ತರ ಕಲ್ಲಿನ ಗುಡ್ಡಗಳು, ಆಳ ಕಣಿವೆಗಳು, ಸುತ್ತಲೂ ದಟ್ಟ ಗಿಡ-ಮರಗಳು, ಹೆಜ್ಜೆ ಹೆಜ್ಜೆಗೂ ಕಾಣುವ ಕಲ್ಲುಗಳಲ್ಲಿ ಅರಳಿದ ಕಲೆ, ಶಿಲಾಮಂಟಪ… ಇವೆಲ್ಲದರ ನಡುವೆ ನವಿಲು, ಕಿಂಗ್‌ ಫಿಶರ್‌ನಂಥ ಪಕ್ಷಿಗಳ ದರ್ಶನ ಕಣ್ಣಿಗೊಂದು ಹಬ್ಬವೇ ಸರಿ. ಇತಿಹಾಸದ ಗತ ವೈಭವವನ್ನು ನೆನಪಿಸುತ್ತಲೇ, ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ, ಈ ಹುಲಿಗೆಮ್ಮನ ಕೊಳ್ಳ. ಭಕ್ತರಿಗೆ ಭಕ್ತಿಯ ತೊಟ್ಟಿಲಾಗಿ, ಮಳೆಗಾಲದಲ್ಲಿ ನಿಸರ್ಗಪ್ರಿಯರಿಗೆ ಸ್ವರ್ಗವಾಗಿ, ಚಾರಣಿಗರಿಗೆ ಸಾಹಸ ವೇದಿಕೆಯಾಗಿ, ಸಂಶೋಧಕರಿಗೆ ಅಧ್ಯಯನ ಕೇಂದ್ರವಾಗಿ, ಕಲಾವಿದರಿಗೆ ಸ್ಫೂರ್ತಿಯ ಕಾರಂಜಿಯಾಗಿ, ಜನಸಮೂಹವನ್ನು ಸೆಳೆಯುತ್ತಿದೆ.

ಹಲವು ಅಚ್ಚರಿಗಳ ತಾಣವಾಗಿರುವ ಹುಲಿಗೆಮ್ಮನ ಕೊಳ್ಳದ ಪ್ರದೇಶವನ್ನು 1958ರಲ್ಲಿಯೇ “ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಿರುವುದು ವಿಶೇಷ. ಆದರೆ, ಇದಕ್ಕೆ ದೊರೆಯಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ.

ದರುಶನಕೆ ದಾರಿ…
ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವ ದಾರಿಯಲ್ಲಿ ಕೆಂದೂರಿನ ಮೂಲಕ ಭದ್ರನಾಯಕನ ಜಾಲಿಹಾಳವನ್ನು (ಬಿ.ಎನ್‌. ಜಾಲಿಹಾಳ) ತಲುಪಿ, ಅಲ್ಲಿಂದ 2 ಕಿ.ಮೀ. ದೂರ ಕ್ರಮಿಸಿದರೆ, ಹುಲಿಗೆಮ್ಮನಕೊಳ್ಳ ಸಿಗುತ್ತದೆ.

– ಫಿರೋಜ ಮೋಮಿನ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.