ಅಂತರಂಗ ಸಂಪತ್ತು ಮುಖ್ಯ


Team Udayavani, Jan 18, 2020, 6:05 AM IST

antaranaga

ಮನುಷ್ಯನ ಪರಿಪೂರ್ಣ ಜೀವನಕ್ಕೆ ಸಂಪತ್ತು ಅವಶ್ಯ. ಸಂಪತ್ತಿನಲ್ಲಿ ಬಹಿರಂಗ ಮತ್ತು ಅಂತರಂಗ ಸಂಪತ್ತುಗಳೆಂದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಬಹಿರಂಗ ಸಂಪತ್ತು ಹಣ, ವಸ್ತು, ಒಡವೆಗಳಿಂದ ಕೂಡಿದ್ದರೆ, ಅಂತರಂಗ ಸಂಪತ್ತು ಶಾಂತಿ, ನೆಮ್ಮದಿಗಳಿಂದ ಕೂಡಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಮನುಷ್ಯನಿಗೆ ಬಹಿರಂಗ ಸಂಪತ್ತಿದ್ದು, ಅಂತರಂಗ ಸಂಪತ್ತಿಲ್ಲದಿದ್ದರೆ ಆತ ನ ಜೀವನ ಪ್ರಾಣಿಗಳಿಗಿಂತ ಕೀಳು.

ನಾವು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಬೇಕು. ನಮ್ಮಿಂದ ಇನ್ನೊಬ್ಬರು ಕಲಿಯುವಂತೆ ಜೀವನ ನಡೆಸಬೇಕು. ನಮ್ಮ ಜೀವನ ಮುಂದಿನ ಪೀಳಿಗೆಗೆ ದಾರಿಯಾಗಬೇಕು. ಆಗ ನಮಗೆ ಬದುಕು ನಡೆಸಲು ಕಲಿಸಿದ ದೇವನಿಗೆ ಪ್ರೀತಿ ಹುಟ್ಟುತ್ತದೆ. ಸುಂದರ ಬದುಕು ಕಟ್ಟಿಕೊಳ್ಳಲು ಶ್ರೀಮಂತಿಕೆ ಒಂದೇ ಅವಶ್ಯವಲ್ಲ. ಮನುಷ್ಯನ ಅಂತರಾಳದಲ್ಲಿನ ನಿಷ್ಕಲ್ಮಷವಾದ ಮನಸ್ಸು ಬಹು ಮುಖ್ಯ.

ಮನುಷ್ಯನ ಜೀವನದಲ್ಲಿ ಇನ್ನೊಬ್ಬರ ಅಂತಸ್ತು ನೋಡಿ ಅಸೂಯೆ ಪಡುವುದಕ್ಕಿಂತ ಅವರನ್ನು ನೋಡಿ ನಾವು ಬೆಳೆಯುವುದನ್ನು ಕಲಿಯಬೇಕು. ಆಗ ನಮ್ಮ ಜೀವನದಲ್ಲಿ ಬೆಳಕು ಕಾಣಬಹುದು. ಭೂಮಿಯಲ್ಲಿ ಹುಟ್ಟಿದ ನಮಗೆಲ್ಲ ಬದುಕು ಕೊಟ್ಟ ದೇವನು ಕೂಡ ಹೊಟ್ಟೆಕಿಚ್ಚು ಪಡುವಂತೆ ನಾವು ಬದುಕಬೇಕು. ನಮ್ಮ ಮನಸ್ಸಿನಲ್ಲಿರುವ ಭಯ ತೊರೆದು ನೆಮ್ಮದಿಯಾಗಿ ಬದುಕಲು ಮುಂದಾಗಬೇಕು.

ಭೂತಕಾಲದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು ಕಂಪಿಸುವುದು, ಮುಂದೆ ಹೀಗೆ ನಡೆಯುತ್ತದೆ ಎಂದು ಊಹಿಸಿಕೊಂಡು ಭಯ ಪಡುವುದಕ್ಕಿಂತ ನಿನ್ನೆ-ನಾಳೆಯದನ್ನು ಮರೆತು ಈಗಿನ ಕ್ಷಣವನ್ನು ಸಂತೋಷದಿಂದ ಅನುಭವಿಸುವುದನ್ನು ಕಲಿಯಬೇಕು.

ಭಯ ಹೋಗಲಾಡಿಸಲು ಮೂರು ದಾರಿಗಳಿವೆ
1. ಬಂದಿದ್ದನ್ನು ಯಥಾವತ್ತಾಗಿ ಸ್ವೀಕರಿಸುವುದು.
2. ಸಾಮರ್ಥ್ಯಕ್ಕೆ ನೀಗುವಷ್ಟು ಮಾಡಿ, ಉಳಿದಿದ್ದನ್ನು ಆ ದೇವರಿಗೆ ಬಿಡಬೇಕು.
3. ಭಯ ಕಾಡುತ್ತಿದೆ ಎನ್ನುವಾಗ ಶಕ್ತಿ, ಸಮಯವನ್ನು ಸೃಜನಾತ್ಮಕ ಕೆಲಸಗಳಿಗೆ ಬಳಸಬೇಕು.

ಹೀಗೆ ಮಾಡಿದಾಗ, ಭಯ ಹೋಗಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಭೂಮಿಯ ಎಲ್ಲಾ ವಸ್ತುಗಳೂ ಭಯದ ನೆರಳೊಳಗೆ ಬದುಕುತ್ತಿವೆ. ನೆರಳೊಳಗೆ ಬದುಕದ ಭೂಮಿಯ ಮೇಲಿನ ವಸ್ತುವೆಂದರೆ ಅದು ವೈರಾಗ್ಯ ಮಾತ್ರ. ಜೀವನದಲ್ಲಿ ಬರುವ ಎಲ್ಲವನ್ನೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಾದ ಮನುಷ್ಯರು, “ಬಂದದ್ದು ಬರಲಿ ನಿನ್ನ ದಯೆ ಇರಲಿ’ ಎಂದು ದೇವರಿಗೆ ಬಿಡಬೇಕು. ಅಲ್ಲದೇ ನಾನು, ನನ್ನದು ಎಂದುಕೊಳ್ಳದೇ “ಎಲ್ಲಾ ದೇವರದ್ದು’ ಎನ್ನುವ ಮೂಲಕ ನಿಸ್ವಾರ್ಥತೆ ಮೆರೆಯಬೇಕು.

* ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.