ರನ್‌ ಮಳೆ ಜತೆಗೆ ರೀನಾ ಮಾತಿನ ಸುರಿಮಳೆ


Team Udayavani, May 5, 2018, 1:52 PM IST

2556.jpg

ಹೆಣ್ಣು ತಾಯಿಯಾಗಿ, ಅಕ್ಕ-ತಂಗಿಯಾಗಿ ಕುಟುಂಬದ ಎಲ್ಲ ಸದಸ್ಯರಿಗೂ ಅಚ್ಚುಮೆಚ್ಚು. ಇಂದು ಗಂಡಿಗೆ ಸರಿಸಮಾನವಾಗಿ ನಿಂತು ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾಳೆ ಮಹಿಳೆ. ಡಾಕ್ಟರ್‌, ಎಂಜಿನಿಯರ್‌, ಪೈಲೆಟ್‌, ವಿಜ್ಞಾನಿ ಹೀಗೆ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಸಾಗಿದ್ದಾಳೆ. ಸೈ ಎನಿಸಿಕೊಂಡಿದ್ದಾಳೆ. ಈಗ ಮಾಧ್ಯಮ ಲೋಕದಲ್ಲೂ ಮಹಿಳೆ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ. ಅಂತಹವರಲ್ಲಿ ಖ್ಯಾತ ಕ್ರೀಡಾ ನಿರೂಪಕಿ ಬಹುಮುಖ ಪ್ರತಿಭೆ ರೀನಾ ಡಿಸೋಜಾ ಕೂಡ ಒಬ್ಬರು. ರೀನಾ ಈಗ ಪ್ರತಿ ದಿನ ಸ್ಟಾರ್‌ ಸುವರ್ಣ ಪ್ಲಸ್‌ ಕನ್ನಡ ಚಾನಲ್‌ನಲ್ಲಿ ಐಪಿಎಲ್‌ ಕುರಿತ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಕ್ರಿಕೆಟ್‌ ದಿಗ್ಗಜರ ಕುರಿತ ಕಾರ್ಯಕ್ರಮ, ಗಣ್ಯ ಕ್ರಿಕೆಟಿಗರ ಸಂದರ್ಶನ, ಐಪಿಎಲ್‌ ಪಂದ್ಯಗಳ ವಿಶ್ಲೇಷಣೆಯಲ್ಲಿ ತಲ್ಲೀನರಾಗಿದ್ದಾರೆ. ಹಿಂದೆ ಪ್ರೊ ಕಬಡ್ಡಿ, ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ನೇರ ಪ್ರಸಾರದ ಟೀವಿ ಕಾರ್ಯಕ್ರಮದ ವೇಳೆಯೂ ಇವರು ನಿರೂಪಕಿಯಾಗಿ ಕೆಲಸ ಮಾಡಿದ್ದರು. 

ಯಾರಿವರು ರೀನಾ?
ಮೂಲತಃ ರೀನಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯವರು. ಅಲ್ಲಿನ ರೋಟರಿ ಇಂಗ್ಲಿಷ್‌ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಳಿಕ ಆಳ್ವಾಸ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಬಳಿಕ ಕರಾವಳಿಯ ಎಂಐಟಿಇ ಮಿಜಾರಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪೂರ್ತಿಗೊಳಿಸಿದರು. ನಿರೂಪಕಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ನೂರು ಕನಸಿನೊಂದಿಗೆ ಬೆಂಗಳೂರಿಗೆ ಆಗಮಿಸಿದರು. ಆರಂಭದಲ್ಲಿ ಮಲ್ಟಿ ನ್ಯಾಷನಲ್‌ ಕಂಪೆನಿ (ಎಂಎನ್‌ಸಿ)ಯಲ್ಲಿ ಉದ್ಯೋಗ ಮಾಡಿದರು. ದಿನ ಹೋದಂತೆ ಈ ಕೆಲಸ ಅವರಿಗೆ ಬೇಸರ ತರಿಸಿತು. ಅದೇ ವೇಳೆಗೆ, ನಿರೂಪಕಿಯಾಗಿ ಬೆಳೆಯಬೇಕು ಎನ್ನುವ ಕನಸು ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು.  ಒಂದು ದಿನ ಗುರುವೊಬ್ಬರು ಅವರಿಗೆ ನೀನು ನಿನ್ನ ಗುರಿಯತ್ತ ನೋಡು, ಕೈ ತುಂಬ ಬರುವ ಸಂಬಳದ ಕಡೆಗಲ್ಲ ಎಂದು ಸಲಹೆ ನೀಡಿದರು. ಇದರಿಂದ ಉತ್ತೇಜಿತರಾದ ರೀನಾ ತಮ್ಮ ಎಂಎನ್‌ಸಿ ಕೆಲಸಕ್ಕೆ ಗುಡ್‌ ಬೈ ಹೇಳಿದರು. ನಿರೂಪಕಿಯಾಗಿ ಕೆಲಸಕ್ಕೆ ಇಳಿದರು. 

ಅಷ್ಟ ಭಾಷಾ ಪ್ರವೀಣೆ
ರೀನಾ ಡಿಸೋಜಾ, 8 ವರ್ಷಗಳಿಂದ ಟೀವಿ, ಸ್ಟೇಜ್‌ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷ್‌, ಕನ್ನಡ, ಹಿಂದಿ, ತುಳು, ಮಂಗಳೂರು-ಗೋವಾ ಕೊಂಕಣಿ, ಮರಾಠಿ, ತಮಿಳು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ರೀನಾ 6 ವರ್ಷದಲ್ಲಿ 900ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ.

ಕ್ರೀಡಾಲೋಕಕ್ಕೆ ಬಂದು 1 ವರ್ಷ
ಕಾರ್ಪೋರೇಟ್‌ ಸಂಸ್ಥೆಯಲ್ಲಿ ಯಶಸ್ವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ರೀನಾ, ಕಳೆದ 1 ವರ್ಷದಿಂದ ಕ್ರೀಡಾ ನಿರೂಪಕಿಯಾಗಿ ಯಶಸ್ವಿಯಾಗಿದ್ದಾರೆ. ಇಂದು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತವರು ಕನ್ನಡದಲ್ಲಿ ಮಾತನಾಡುವುದನ್ನು ಕಾಣುವುದೇ ಅಪರೂಪ. ಅಂತಹುದರಲ್ಲಿ ರೀನಾ ಮುತ್ತಿನಂತೆ ಪಕ್ಕಾ ಕನ್ನಡದಲ್ಲಿ ಪಟ್‌…ಪಟ್‌ ಮಾತನಾಡುತ್ತಾರೆ. ಕ್ರೀಡಾ ಲೋಕದ ಕಲಿಗಳ ಸಂದರ್ಶನ ನಡೆಸುತ್ತಾರೆ. ಕಳೆದ ವರ್ಷದ ಪೊ›ಕಬಡ್ಡಿ, ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ ಹಾಗೂ ಇದೀಗ ಮೊದಲ ಸಲ ಐಪಿಎಲ್‌ ನೇರ ಪ್ರಸಾರದಲ್ಲಿ ರೀನಾ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ. 

ನಂ.1 ನಿರೂಪಕಿಯಾಗುವ ಗುರಿ
ಇನ್ನೆರಡು ವರ್ಷದಲ್ಲಿ ನಂ.1 ನಿರೂಪಕಿಯಾಗುವ ಕನಸು ಕಾಣುತ್ತಿದ್ದೇನೆ. ದಿನಂಪ್ರತಿ ಅದಕ್ಕಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದೇನೆ. ಜನರನ್ನು ನಗಿಸುವುದು, ಅವರಿಗೆ ಮಾತಿನಿಂದ ಮನೋರಂಜನೆ ನೀಡುವುದು ನನ್ನ ಕೆಲಸ. ಗ್ರಾಮೀಣ ಭಾಗದಿಂದ ಬಂದು ಇಂದು ದೇಶ-ವಿದೇಶದಲ್ಲಿ 900ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಕುರಿತು ನನಗೆ ಹೆಮ್ಮೆ ಇದೆ. ಕುಟುಂಬದ ಸದಸ್ಯರ, ಗುರುಗಳ ಆಶೀರ್ವಾದದಿಂದಲೇ ಇದೆಲ್ಲ ಸಾಧ್ಯವಾಗಿದೆ.
 -ರೀನಾ ಡಿಸೋಜಾ, ಕ್ರೀಡಾ ನಿರೂಪಕಿ

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.