ಜನಮೇಜಯನ “ಕಾಂತೇಶ’


Team Udayavani, Mar 7, 2020, 6:08 AM IST

janumajaya

ಕದರಮಂಡಲಗಿಯಲ್ಲಿರುವ ಪ್ರಾಣದೇವರ ಮೂರ್ತಿಯನ್ನು ದ್ವಾಪರಯುಗದಲ್ಲಿ ಜನಮೇಜಯ ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ…

ಸರ್ವಧರ್ಮ ಸಮನ್ವಯ ಕ್ಷೇತ್ರ ಎಂದೇ ಖ್ಯಾತವಾದ ಕದರಮಂಡಲಗಿಯು, ಕಾಂತೇಶನೆಂದೇ ಪೂಜೆಗೊಳ್ಳುವ ಆಂಜನೇಯ ಸ್ವಾಮಿಯ ನೆಲೆವೀಡು. ಇಲ್ಲಿರುವ ಪ್ರಾಣದೇವರ ಮೂರ್ತಿಯನ್ನು ದ್ವಾಪರಯುಗದಲ್ಲಿ ಜನಮೇಜಯ ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ. ಜೊತೆಗೆ ದಾಸಶ್ರೇಷ್ಠರಾದ ಕನಕದಾಸರು ಇಲ್ಲಿ ನೆಲೆಸಿ, “ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ರಚಿಸಿ, ಕ್ಷೇತ್ರದ ಪಾವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂಬುದಕ್ಕೆ, ಇಲ್ಲಿ ಸಂಗ್ರಹಿಸಿಟ್ಟಿರುವ “ಮೋಹನ ತರಂಗಿಣಿ’ಯ ಹಸ್ತಪ್ರತಿ ಸಾಕ್ಷಿಯಾಗಿದೆ.

ಭವ್ಯ ದೇಗುಲ: ಇಲ್ಲಿದ್ದ ಕಾಂತೇಶನ ಶಿಥಿಲವಾಗಿದ್ದ ಗುಡಿಯನ್ನು ಎಂಜಿನಿಯರ್‌ ಐ.ಎಚ್‌. ಕೆಂಚರೆಡ್ಡಿಯವರು ಜೀರ್ಣೋದ್ಧಾರ ಮಾಡಿದ್ದಾರೆ. ಭವ್ಯ ದೇಗುಲ ಕಣ್ಮನ ಸೆಳೆಯುತ್ತದೆ. 8 ಅಂತಸ್ತಿನ ಭವ್ಯ ಹಾಗೂ ಸುಂದರವಾದ 101 ಅಡಿಗಳ ಗೋಪುರವನ್ನೂ ನಿರ್ಮಿಸಲಾಗಿದೆ. ಸುಂದರ ಪುಷ್ಕರಣಿ ಇದೆ. ದೇಗುಲದ ಸುತ್ತಲೂ ಎತ್ತರವಾದ ಆವರಣಗೋಡೆ ಇದೆ. ಈ ಗೋಡೆಯ ಮೇಲೆ ಅಶೋಕವನದಲ್ಲಿನ ಸೀತೆ, ಶ್ರೀರಾಮ ಹಾಗೂ ಆಂಜನೇಯರ ಆಲಿಂಗನ ಸೇರಿದಂತೆ ಹಲವು ಗಾರೆಯ ಶಿಲ್ಪಗಳನ್ನು ಅಳವಡಿಸಲಾಗಿದೆ.

ಕನಕದಾಸರ ಗುಡಿ: ಕಾಂತೇಶ ದೇಗುಲದ ಆವರಣದಲ್ಲಿ ಕನಕದಾಸರ ಗುಡಿ, ರಾಘವೇಂದ್ರ ಸ್ವಾಮಿ ಮಠ ಇವೆ. ಇಲ್ಲಿನ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ “ಕನಕದಾಸರ ಗುಡಿ’ ಎಂದು ಕರೆಯುತ್ತಾರೆ. ಕನಕದಾಸರು ಹುಟ್ಟಿದ್ದು ಬಾಡ ಗ್ರಾಮದಲ್ಲಿ. ಅವರು ಕಾಗಿನೆಲೆಗೆ ಬಂದು ನೆಲೆಸಿದರು. ಅವರು ತಿರುಪತಿ ವೆಂಕಟೇಶನ ದರ್ಶನ ಪಡೆಯಲು ಆಗಾಗ ತಿರುಪತಿಗೆ ಹೋಗುತ್ತಿದ್ದರು. ಆಗ ಕದರಮಂಡಲಗಿ ಕಾಂತೇಶನ ದರ್ಶನ ಪಡೆದು ಲಕ್ಷಿ¾ನಾರಾಯಣನ ಗುಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ.

ನೇರ ದೃಷ್ಟಿಯ ಹನುಮ: ಗರ್ಭಗೃಹದ ಒಳಗೆ ಎದುರು ಮುಖದ ಸಾಲಿಗ್ರಾಮ ಶಿಲೆಯ ಕಾಂತೇಶನ ಸುಂದರ ಮೂರ್ತಿ ಇದೆ. ಈ ದೇವರ ಕಣ್ಣುಗಳನ್ನು ಸೂರ್ಯ ಸಾಲಿಗ್ರಾಮದಿಂದ ಮಾಡಲಾಗಿದ್ದು, ಆಂಜನೇಯ ನೇರವಾಗಿ ಎದುರು ನಿಂತ ಭಕ್ತರನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಕಾಂತೇಶನ ಸನ್ನಿಧಾನದ ಪಕ್ಕದಲ್ಲಿಯೇ ಹನುಮನ ಪಾದುಕೆಗಳ ಗುಡಿಯೂ ಇದೆ.  ಈ ದೇಗುಲದಲ್ಲಿ ಪ್ರತಿದಿನ ಮಧ್ಯಾಹ್ನ 12- 3 ಗಂಟೆಯವರಿಗೆ ಭೋಜನ ವ್ಯವಸ್ಥೆ ಇದೆ.

ದರುಶನಕೆ ದಾರಿ…: ರಾಣೆಬೆನ್ನೂರಿನಿಂದ 12 ಕಿ.ಮೀ. ದೂರದಲ್ಲಿ ಕದರ ಮಂಡಲಗಿ ಕ್ಷೇತ್ರವಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಕಿ.ಮೀ. ಸಾಗಿ, ಬಳಿಕ ಬ್ಯಾಡಗಿ- ಕಾಗಿನೆಲೆ ರಸ್ತೆಯಲ್ಲಿ 9 ಕಿ.ಮೀ. ಕ್ರಮಿಸಿದರೆ ಕಾಂತೇಶನ ಸನ್ನಿಧಿ ಸಿಗುತ್ತದೆ.

* ಲಕ್ಷ್ಮಿಕಾಂತ್‌ ಎಲ್‌.ವಿ.

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.