ತಲೆಕೆಳಕಾಗಿ ಧುಮುಕುವ ಜೆರ್ಡನ್ಸ್‌ ಬಜ್ಸಾ 


Team Udayavani, Aug 25, 2018, 2:29 PM IST

305.jpg

ತಲೆ ಕೆಳಗಾಗಿ ಧುಮುಕಿ ಕಾಲಲ್ಲಿರುವ ದೃಢವಾದ ಉಗುರಿನ ಸಹಾಯದಿಂದ ಬೇಟೆಯನ್ನು ಹಿಡಿದು ಮರದ ತುದಿಗೆ ತೆಗೆದುಕೊಂಡು ಹೋಗಿ ಅದನ್ನು ಹರಿದು ತಿನ್ನುವುದು ಇದರ ಬೇಟೆಯ ವಿಧಾನ. ಇದರ ಕುತ್ತಿಗೆ ಭಾಗದಲ್ಲಿ ಬೂದು ಬಣ್ಣದ ಕಪ್ಪು ರೇಖೆ ಇರುತ್ತದೆ. Jerdon’s Baza (Aviceda jerdoni)  R  Crow + ನಮ್ಮಲ್ಲಿ ಇದನ್ನು ಗಿಡುಗ ಅಂತ ಕರೆಯುತ್ತಾರೆ. ಇಂಗ್ಲೀಷಿನಲ್ಲಿ ತಲೆಕೆಳಕಾಗಿ ಧುಮುಕುವ ಜೆರ್ಡನ್ಸ್‌ ಬಜ್ಸಾ  ಅಂತಾರೆ. ಇದು ಅತಿ ಸೂಕ್ಷ್ಮ ನೋಟ ಹೊಂದಿರುವ ಹಕ್ಕಿ. ಇದರ ಕಣ್ಣಿನ ರಚನೆ ಅತ್ಯಂತ ನಾಜೂಕಾಗಿದೆ. ಇದಕ್ಕೆ ದೂರದಿಂದಲೇ ತನ್ನ ಬೇಟೆಯನ್ನು ಗುರುತಿಸಬಲ್ಲ ತಾಕತ್ತಿದೆ. ಕೆಲವೊಮ್ಮೆ ಗಾಳಿಯಲ್ಲೆ ರೆಕ್ಕೆ ಬಡಿಯದೇ ಸ್ಥಬ್ದವಾಗಿ ನಿಲ್ಲುವ, ಅಂದರೆ-ಗಾಳಿಯಲ್ಲಿ ತೇಲುವ ಚತುರತೆಯೂ ಈ ಪಕ್ಷಿಗಿದೆ.  ಈ ಹಕ್ಕಿಯ ಹೆಸರಿನ ಜೊತೆ ಪ್ರಾಣಿ ಶಾಸ್ತ್ರಜ್ಞ ಮತ್ತು ಪ್ರಕೃತಿ ತಜ್ಞ ಜೊರxನ್ಸರ ಹೆಸರನ್ನು ಸೇರಿಸಲಾಗಿದೆ.  ಇದು ಸದಾ ಹಾರುವಾಗ ಕೂಗುತ್ತಿರುತ್ತದೆ. ಅದರಿಂದ ಬಜ್ಸಾ ಎಂಬ ಹೆಸರೂ ಸೇರಿರಬಹುದು. ಇಂಪಾದ ಮತ್ತು ಗಡುಸಾದ ದನಿ ಹೊರಡಿಸುವುದರಿಂದ ಇದಕ್ಕೆ ಭಜಂತ್ರಿ ಎಂದು ಕರೆಯುವ ರೂಢಿಯೂ ಇದೆ.

ಗಿಡುಗ ಮೋಸದ ಹಕ್ಕಿ. ಹೊಂಚು ಹಾಕಿ, ಎರಗಿ -ಎದುರಾಳಿಗೆ ಸುಳಿವು ಕೊಡದೇ ಹಿಡಿಯುತ್ತದೆ. ಇದರ ತಲೆಯಲ್ಲಿರುವ ಬಿಳಿ ಮತ್ತು ಕಪ್ಪು ಗರಿಗಳಿಂದ ಕೂಡಿದ ಜುಟ್ಟಿನಿಂದ ಇದನ್ನು ಸುಲಭವಾಗಿ ಗುರುತಿಸಬಹುದು.  ಇದರ ಜುಟ್ಟು ನವಿಲಿನ ತಲೆಯ ಶಿಖೆಯಂತೆ, ಎದ್ದು ನಿಂತಂತೆ ಇರುವುದು. ಕೆಲವೊಮ್ಮ ಮುಮ್ಮುಖವಾಗಿಯೂ ಇರುವುದು , ಕೆಲವುಸಲ ಈ ಎಲ್ಲಾ ಗರಿ ಸೇರಿ ಒಂದು ಗರಿಯಂತೆ ಕಾಣುವುದು. ಇನ್ನು ಕೆಲವು ಸಲ ಎಲ್ಲಾ ಗರಿ ಬಿಚ್ಚಿದಾಗ 2-3 ಗರಿಗಳು ಪ್ರತ್ಯೇಕವಾಗಿ ಕಾಣುತ್ತವೆ.  ಆಗ ಅದರ ಗರಿಯಲ್ಲಿರುವ ಬಿಳಿ ಮತ್ತು ಕಪ್ಪು ಬಣ್ಣ ಸ್ಪಷ್ಟವಾಗಿ ಕಾಣುವುದು. ಇದರ ಮೈ ಬಣ್ಣ ಮಣ್ಣು ಕಪ್ಪು. ಮೈಮೇಲೆಲ್ಲಾ ತಿಳಿ ಮತ್ತು ಅಚ್ಚ ಮಣ್ಣುಗಪ್ಪು ಬಣ್ಣದ ಚಿತ್ತಾರವು ಗಮನವಿಟ್ಟು ನೋಡಿದಾಗ ಕಾಣಸಿಗುತ್ತದೆ. 

ಇದರ ಚುಂಚು, ಮಾಂಸಾಹಾರಿ ಹಕ್ಕಿಗಿರುವಂತೆ ಚೂಪಾಗಿದೆ. ತುದಿ ಕೊಕ್ಕಿನಂತಿದೆ. ಇದರಿಂದ ಬೇಟೆಯನ್ನು ಹರಿದು ತಿನ್ನಲು ಅನುಕೂಲವಾಗಿದೆ.  ಈ ಹಕ್ಕಿ ಹಾರುವ ರೀತಿ ಮತ್ತು ಮೈಬಣ್ಣಕ್ಕೆ ಹತ್ತಿರದ ಸಾಮ್ಯತೆ ಇದೆ. 

ಜೆರ್ಡನ್‌ ಜೆರ್ಡನ್ಸ್‌ ಬಜ್ಸಾ  -ಗಿಡುಗ ಹಕ್ಕಿ -ಚಿಕ್ಕದು. ಆದರೆ ಕ್ರಿಸ್ಟೆಡ್‌ ಹವಾಕ್‌ ಈಗಲ್‌ ದೊಡ್ಡದು. ಅಲ್ಲದೆ ತಲೆಯ ಜುಟ್ಟು- ದೊಡ್ಡದು ಮತ್ತು ಮೈ ಬಣ್ಣ -ಹೆಚ್ಚು ಕಪ್ಪು. ರೆಕ್ಕೆಯ ಮೇಲೆ ಚುಕ್ಕೆ ಮತ್ತು ಗೆರೆ ಮಾತ್ರ ಇದೆ. ಆದರೆ ಜೊರ್ಡನ್ಸ್‌ ಗಿಡುಗ ಹಕ್ಕಿಯ ರೆಕ್ಕೆಯ ಮೇಲೆ ಮಧ್ಯದಿಂದ ಆರಂಭವಾಗಿ ವರ್ತುಲಾಕಾರದ ತಿಳಿ ಕಂದು ರೇಖೆ ಎರಡು ಸಾಲು ಇದೆ. ಬೆನ್ನು ,ರೆಕ್ಕೆ ಬುಡದ ಪಾರ್ಶದಲ್ಲೂ ಅರ್ಧ ಚಂದ್ರಾಕಾರದ ರೇಖೆಯನ್ನು ಕಾಣಬಹುದು. 

ಬಾಲದ ಪುಕ್ಕ ಉದ್ದವಾಗಿದೆ. ಆದರೆ ಗಿಡುಗದ ಬಾಲ ಚಿಕ್ಕದು. ಜೆರ್ಡನ್‌ ಗಿಡುಗದ ಗರಿಯ ಬದಿಯ ರೇಖೆ ಮತ್ತು ಅಂಚು ಇದನ್ನು ಗುರುತಿಸಲು ಇರುವ ಗುರುತು. ಸಮಶೀತೊಷ್ಣ ವಲಯದ -ದೊಡ್ಡ ಮರಗಳಿರುವ -ಬೆಟ್ಟದ ತಪ್ಪಲು ಪ್ರದೇಶ , ದೊಡ್ಡ ಮರದ ಕಾಡಿನ ಸಮೀಪದ ಜಾಗ, ಭಾರತದ ಉತ್ತರದ ಪೂರ್ವ ಭಾಗ, ಬಾಂಗ್ಲಾದೇಶ, ಸಿಕ್ಕಿಂನಿಂದ ಅಸ್ಸಾಂವರೆಗೆ, ಬರ್ಮಾ, ಸುಮಾತ್ರಾದಲ್ಲೂ ಈ ತಳಿಯ ಗಿಡುಗಗಳು ಇವೆ.

ತಲೆ ಕೆಳಗಾಗಿ ಧುಮುಕಿ ಕಾಲಲ್ಲಿರುವ ದೃಢವಾದ ಉಗುರಿನ ಸಹಾಯದಿಂದ ಬೇಟೆಯನ್ನು ಹಿಡಿದು ಮರದ ತುದಿಗೆ ತೆಗೆದುಕೊಂಡು ಹೋಗಿ ಅದನ್ನು ಹರಿದು ತಿನ್ನುವುದು ಇದರ ಬೇಟೆಯ ವಿಧಾನ. ಇದರ ಕುತ್ತಿಗೆ ಭಾಗದಲ್ಲಿ ಬೂದು ಬಣ್ಣದ ಕಪ್ಪು ರೇಖೆ ಇರುತ್ತದೆ. ಕುತ್ತಿಗೆಯಿಂದ ಅಲ್ಲದೇ ಹೊಟ್ಟೆ ಭಾಗದಲ್ಲೂ ಇದೇ ಬಣ್ಣದ ಗೆರೆಗಳಿವೆ.  ದಕ್ಷಿಣ ಭಾರತ, ಶ್ರೀಲಂಕಾದಲ್ಲೂ ಇವೆ.  ಚಿಕ್ಕ ಪ್ರಾಣಿ, ಇಲಿ, ಮೃದ್ವಂಗಿ, ಹರಣೆ, ಓತಿಕ್ಯಾತ, ಮೊಲ, ಚಿಕ್ಕ ಹಾವುಗಳನ್ನೂ ಇದು ತಿಂದು ತೇಗುವುದುಂಟು. 

ಕಾವುಕೊಡುವುದು, ಮರಿಗಳ ರಕ್ಷಣೆ, ಗುಟುಕು ನೀಡುವುದು ಮುಂತಾದ ಕೆಲಸಗಳನ್ನು ಗಂಡು ಹೆಣ್ಣು ಸೇರಿ ಒಟ್ಟಾಗಿ ನಿರ್ವಹಿಸುತ್ತದೆ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.