ಕೇರಳಿಯಂ ನಾಟ್ಯ ಪುಳಕ


Team Udayavani, Oct 20, 2018, 3:15 PM IST

5-aa.jpg

ಅಲ್ಲಿ ಕೇರಳದ ನೃತ್ಯ ಕಲೆಗಳೆಲ್ಲ ಪಾಕವಾಗಿ ಘಮಗುಟ್ಟುತ್ತಿತ್ತು. ನರ್ತಕಿಯರ ಭಾವಾಭಿನಯಗಳು ಕಣ್ಮನಗಳಿಗೆ ತಂಪೆರೆಯುತ್ತಿತ್ತು. ಒಮ್ಮೆ ಪ್ರದಕ್ಷಿಣೆ. ಇನ್ನೊಮ್ಮೆ ಅಪ್ರದಕ್ಷಿಣೆ. ಹಾಗೆ ಚಲಿಸುತ್ತಲೇ ಪಕ್ಕಕ್ಕೆ ಬಾಗಿ ಸುಂದರ ಸಂಜ್ಞೆಗಳ ಮೂಲಕ ಭಾವಾಭಿನಯ… ಇದೆಲ್ಲವೂ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಕಂಡುಬಂದಂಥ ದೃಶ್ಯ…

ಕೇರಳ ಶಾಸ್ತ್ರೀಯ ನೃತ್ಯವೆಂದರೆ ಅಲ್ಲೊಂದು  ಲಯ, ತಾಳ, ರಾಗ ಪದ್ದತಿ, ಬೆಡಗು, ಬೆರಗು ಸೇರಿದ ನವಭಾವಗಳ ಅಭಿವ್ಯಕ್ತಿ. ಕಲೆಯೊಂದಿಗೆ ಕಸರತ್ತು ಮೇಳೈಸುವ ಝಲಕ್‌ ಅದು. ನೃತ್ಯ ವೈಭವದೊಂದಿಗೆ ಸಂಗೀತದ ಸಡಗರ ಅಲ್ಲಿರುತ್ತೆ. ಕೇರಳದ ಸಾಂಪ್ರದಾಯಿಕ ತೊಡುಗೆಯಾದ ಗೋಲ್ಡ್‌ ಬಾರ್ಡರ್‌ ಇರುವ ಮುಂಡು ಮತ್ತು ನೆರಿಯಟ್ಟು ತೊಟ್ಟವರ ನೃತ್ಯ ಮೋಡಿಯೇ ವೇದಿಕೆಗೆ ಒಂದು ಕಳೆ. ಇದೆಲ್ಲವೂ ಇತ್ತೀಚೆಗೆ ಆಳ್ವಾಸ್‌ ಕೇರಳಿಯಂ ಸಾಂಸ್ಕೃತಿಕ ವೈಭವದಲ್ಲಿ ಅಲೆ ಅಲೆಯಾಗಿ ತೆರೆದುಕೊಂಡ ದೃಶ್ಯಗಳು.

 ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕೇರಳ ವಿದ್ಯಾರ್ಥಿಗಳು ನಡೆಸಿದ ನೃತ್ಯ ವೈಭವವಿದು. ಅದು ಅ.13. ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಪಂಚವಾದ್ಯಂ, ತೆಯ್ಯಂ, ತಿರುವಾಧಿರ್‌, ಸಿಂಗಾರಿ ಮೇಳಗಳು ಸೋಜಿಗ ಸೃಷ್ಟಿಸಿಬಿಟ್ಟವು. ಪೂಕಳಂ ಸುತ್ತ ತಿರುವಾಧಿರ್‌ ನೃತ್ಯ ಪುಳಕ ಸೃಷ್ಟಿಸಿತು. ಪಕ್ಕ ವಾದ್ಯಗಳ ನೆರವಿಲ್ಲದೆ ಮಾಡುವ ಸರಳ ಅರೆ ಶಾಸ್ತ್ರೀಯ ಕಲೆ ಕಣ್ಮನ ಸೆಳೆಯಿತು. ವಿದ್ಯಾರ್ಥಿಯನಿಯರು ಕೇರಳದ ವಿಶಿಷ್ಟ ಮುಂಡು ಹಾಗೂ ಜರಿಯುಳ್ಳ ಮೇಲ್ಮುಂಡನ್ನು ಉಟ್ಟುಕೊಡು ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿ, ಮಲ್ಲಿಗೆ ಹೂವಿನ ಮಾಲೆಯನ್ನು ಮುಡಿದು ಒಂದೇ ಬಣ್ಣದ ಕುಪ್ಪಸವನ್ನು, ತಿರುವಾಧಿರದ ಸಮವಸ್ತ್ರ ಧರಿಸಿ ಕೈ ಕಾಲುಗಳಿಗೆ ಮೆಹಂದಿಯಿಂದ ಶೃಂಗಾರಗೊಂಡ ಸುಂದರಿಯರು ವೃತ್ತಾಕಾರದಲ್ಲಿ ನಿಂತು ಹಾಡುತ್ತಾ, ಪರಸ್ಪರ ಕೈಚಪ್ಪಾಳೆ ತಟ್ಟುತ್ತಾ ನರ್ತಿಸಿದರು. ಒಮ್ಮೆ ಪ್ರದಕ್ಷಿಣೆ. ಇನ್ನೊಮ್ಮೆ ಅಪ್ರದಕ್ಷಿಣೆ. ಹಾಗೆ ಚಲಿಸುತ್ತಲೇ ಪಕ್ಕಕ್ಕೆ ಬಾಗಿ ಸುಂದರ ಸಂಜ್ಞೆಗಳ ಮೂಲಕ ಭಾವಾಭಿನಯ. 

ಜರತಾರಿ ನರ್ತಕಿಯರು…
ನರ್ತಕಿಯರು ಥಳ ಥಳ ಹೊಳೆವ ಚಿನ್ನದ ಜರತಾರಿಯಿಂದ ಅಲಂಕೃತಗೊಂಡಿದ್ದ ಸೀರೆ ಅಂಚು ಬಿಳಿಸೀರೆಗೊಂದು ಅದ್ಭುತ ಮೆರುಗು ತಂದು ಕೊಟ್ಟಿತ್ತು. “ಮೋಹಿನಿ ಅಟ್ಟಂ’ ಅಂತೂ ನಿಜಕ್ಕೂ ಮನೋಹರ. ನೃತ್ಯ ಮಾಡುವಾಗ ಈ ಕಲಾವಿದರ ದೇಹ ಟ್ಯೂನ್‌ ಮಾಡಿದಂತೆ ಬಳುಕಿ ಬಾಗುತ್ತಿತ್ತು. ಅವರ ದೇಹದ ಪ್ರತಿ ಅಂಗದಲ್ಲೂ ನೃತ್ಯದ ಲಾಲಿತ್ಯ ಒಸರುತ್ತಿತ್ತು. ಮೋಹಿನಿಅಟ್ಟಂನಲ್ಲಿ ಗಮನ ಸೆಳೆಯುವುದು ಆಂಗಿಕ ಅಭಿನಯ. ಆ ಹುಡುಗಿಯರು ತಮ್ಮ ಅಂಗೈ ಹಾಗೂ ಗುಲಾಬಿ ಬಣ್ಣದ ಬೆರಳುಗಳನ್ನು ಭಾವಕ್ಕೆ ಅನುಗುಣವಾಗಿ ಬೆಸೆಯುತ್ತಿದ್ದ ದೃಶ್ಯ ಆಕರ್ಷಕ. ಮುಖವನ್ನು ಲಜ್ಜೆಯ ಮು¨ªೆಯಾಗಿಸಿಕೊಂಡು ಬಿಂಕದಿಂದ ನೃತ್ಯ ಮಾಡಿದ ಮೋಹಿನಿ ಅಟ್ಟಂ ಸೊಗಸಾಗಿತ್ತು.

ಕಚಗುಳಿ ಕೊಟ್ಟ ಕಥಕ್ಕಳಿ
ಕಥಕ್ಕಳಿ ಕೂಡ ಕೇರಳದ ಜನಪ್ರಿಯ ನೃತ್ಯ. ಇಲ್ಲೂ ಆಂಗಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ. ಕಲಾವಿದರು ನವರಸಗಳನ್ನು ಮುಖದ ಮುಖೇನವೇ ಹೊರಹಾಕಬೇಕು, ಯಕ್ಷಗಾನದಂತೆ. ಎದುರಾಳಿಯನ್ನು ಹೊಂಚಿ ನೋಡುವ ಕಣ್ಣುಗಳು, ಹಣೆಯ ಮೇಲಿರುವ ಕೆಂಪು ನಾಮ, ಕಚ್ಚೆ ಪಂಚೆ, ಬರೀ ಮೈನಲ್ಲಿ ಕತ್ತಿ ಹಾಗೂ ಗುರಾಣಿಯನ್ನು ಹಿಡಿದು ಹೋರಾಡುವ ಪರಿ ನೋಡುಗರ ಹೃದಯಬಡಿತ ಹೆಚ್ಚಿಸುತ್ತದೆ. ಪುಟಾಣಿ ಪಟುಗಳ ಖಡ್ಗ ಜಳಪಿಸುತ್ತಿದ್ದ ರೀತಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತು. ವೇದಿಕೆ ಮೇಲೆ ಬಂದ ಇಬ್ಬರು ಕಳರಿಪಯಟ್ಟು ಪಟುಗಳು ಖಡ್ಗ ಜಳಪಿಸುತ್ತಿದ್ದ ರೀತಿ ಹಾಗೂ ಅವುಗಳಿಂದ ಹೊರಡಿಸುತ್ತಿದ್ದ ಶಬ್ದಕ್ಕೆ ಕೆಲವರು ಭಯಭೀತರಾದರು, ಹಲವರು ರೋಮಾಂಚನಗೊಂಡರು.
  ಒಟ್ಟಿನಲ್ಲಿ ಅಂದು ಕೇರಳವೇ, ಕರ್ನಾಟಕ ಅಂಗಳಕ್ಕೆ ಬಂದು ಥಕ ತೈ ಅಂದಂತೆ ಭಾಸವಾಗಿತ್ತು.

ಅಲಂಕಾರದ ಸೊಬಗು
ಮದುವೆ ಹೆಣ್ಣಿನಂತೆ ಕಲಾವಿದರೂ ಆಡಂಬರದ ವಸ್ತ್ರಗಳನ್ನು ಧರಿಸಿ, ಮೈತುಂಬಾ ಆಭರಣ ತೊಟ್ಟು ಅಲಂಕರಿಸಿಕೊಂಡಿರುತ್ತಾರೆ. ಕೈಕಾಲುಗಳಲ್ಲಿ ಢಾಳಾಗಿ ಕಾಣುವ ಗೋರಂಟಿ ಅವರ ಅಂದಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ. ವೇಗವಾಗಿ ನರ್ತಿಸುವುದು ಒಪ್ಪನ ನೃತ್ಯದ ವಿಶೇಷತೆ. ಕಸೂತಿ ಮಾಡಿದ ಹಸಿರು ಲಂಗ ದಾವಣಿ ತೊಟ್ಟ ಯುವತಿಯರು ಮಾಡಿದ ಒಪ್ಪನ ನೃತ್ಯ ಮನಸೆಳೆಯಿತು. 

ಯಜಾಸ್‌ ದುದ್ದಿಯಂಡ, ಮೂಡುಬಿದಿರೆ 

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.