ಹಸಿರು ಶಾಲೆ


Team Udayavani, May 6, 2017, 2:47 PM IST

01.jpg

ಬಿಸಿಲು ತಾಂಡವವಾಡುತ್ತಿದ್ದರೂ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿ ಶಾಲೆ ನಿಗಿನಿಗಿ ಹಸಿರಾಗಿದೆ. ನೀರಿಗೆ ತೊಂದರೆ ಇದ್ದರೂ ಶಾಲೆಯ ಪರಿಸರದ ಮೂಲೆ ಕೂಡ ಒಣಗಲ್ಲ. ಈ ಪರಿಸರ ಯಾವ ನಗರದ ಉದ್ಯಾನವನಗಳಿಗೂ ಕಮ್ಮಿ ಇಲ್ಲ. ಇದಕ್ಕೆಲ್ಲಾ ಕಾರಣ ಇಲ್ಲಿನ ಶಿಕ್ಷಕ, ವಿದ್ಯಾರ್ಥಿಗಳು.

ಬೇಸಿಗೆ ಬಿರುಬಿಸಿಲಿನಲ್ಲಿಯೂ ಇಲ್ಲಿನ ಶಿಕ್ಷಕ ರಘುಪತಿ, ಮಕ್ಕಳು ಹಾಗೂ ಪೋಷಕರ ಶ್ರಮದಿಂದ ಸುಮಾರು 1 ಎಕರೆ ಪ್ರದೇಶದಲ್ಲಿರುವ ಶಾಲಾವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮೀಣ ಸೊಗಡಿನ ಕಲಾಕೃತಿ, ಕಾರಂಜಿಗಳ ನರ್ತನದ ನಡುವೆ ಕಣ್ಮನ ಸೆಳೆಯುತ್ತಿದೆ.

ಗ್ರಾಮದ ಕೊಳವೆ ಬಾವಿ ಅನೇಕ ಬಾರಿ ಕೈಕೊಟ್ಟು ನೀರು ಬರಿದಾದಗಲೆಲ್ಲಾ ಶಾಲಾ ಪರಿಸರವನ್ನು ಕಾಪಾಡಲು ಬಹಳ ವ್ಯಥೆ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ದೂರದಿಂದ ಮಕ್ಕಳೊಡನೆ ನೀರು ಹೊರಬೇಕಾಗಿತ್ತು.  ಶಾಲಾವಧಿ ಹಾಗೂ ರಜಾವಧಿಯೆನ್ನದೆ ಮಕ್ಕಳೂ ಶಾಲಾ ಪರಿಸರವನ್ನು ಕಾಪಾಡುತ್ತಾ ಬಂದಿರುವುದು ಬಹಳ ವಿಶೇಷವೇ.

ರಜಾದಿನಗಳಲ್ಲೂ ಕಾರ್ಯನಿರ್ವಹಣೆ
ಬೆಟ್ಟಹಳ್ಳಿ ಕಾಲೋನಿ ಶಾಲೆಯ ಸುಂದರ ಪರಿಸರ ಒಂದೆರಡು ತಿಂಗಳುಗಳ ಶ್ರಮವಲ್ಲ. ಶಿಕ್ಷಕ ರಘುಪತಿ ಅವರ 10 ವರ್ಷಗಳ ತಪಸ್ಸು.  ರಜಾದಿನಗಳಲ್ಲಿಯೂ ಶಿಕ್ಷಕರು ಹೇಳಿದ ಕಾರ್ಯಗಳನ್ನು ಚಾಚುತಪ್ಪದೇ ಪಾಲಿಸುತ್ತಾ ಪರಿಸರ ಅಭಿವೃದ್ದಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಮಕ್ಕಳ ಶ್ರಮದ ಕಾರ್ಯನಿರ್ವಹಣೆಗೆ ಪೋಷಕರ ಬೆಂಬಲವೂ ಹೆಚ್ಚಿನದು.

ಬೆಟ್ಟಹಳ್ಳಿ ಕಾಲೋನಿ ಶಾಲೆ ಕೇವಲ ಹದಿಮೂರು ಮಕ್ಕಳಿರುವ ಪುಟ್ಟ ಸರಕಾರಿ ಶಾಲೆ. ಇಲ್ಲಿ ಪರಿಸರ ಸಂರಕ್ಷಣಾ ವಿಚಾರದಲ್ಲಿ ಸದಾ ಮುಂದು.  ನೀರಿನ ಮಿತಬಳಕೆ ಹಾಗೂ ಕಾರಂಜಿಗಳಲ್ಲಿ ಹೆಚ್ಚಾದ ನೀರನ್ನು ಗಿಡಗಳಿಗೆ ಹಾಯಿಸಿ ಇಂಗು ಗುಂಡಿಗಳ ಮೂಲಕ ಇಂಗಿಸುವುದು, ಮಳೆ ನೀರನ್ನು ಇಂಗಿಸುವುದು, ಕಸ ನಿರ್ವಹಣೆ, ಪ್ಲಾಸ್ಟಿಕ್‌ ನಿಯಂತ್ರಣಕ್ಕಾಗಿ ಗ್ರಾಮದ ಅಂಗಡಿಗಳಿಗೆ ಉಚಿತ ಕಾಗದ ಚೀಲಗಳನ್ನು ತಯಾರಿಸಿ ನೀಡುವುದು, ಪ್ರತೀ ಶನಿವಾರ ಗ್ರಾಮ ನೈರ್ಮಲ್ಯಕ್ಕಾಗಿ ಜಾಥಾ, ಕಿರುನಾಟಕಗಳನ್ನು ನಡೆಸುವುದರ ಜತೆಗೆ ಶ್ರಮದಾನ ಮಾಡಿ ಗ್ರಾಮಸ್ಥರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸುವುದು- ಹೀಗೆ ಹತ್ತು ಹಲವು ಪರಿಸರ ಕಾಳಜಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. 

ಈ ಶಾಲೆ ಇತರೆ ಶಾಲೆಗಳಿಗೂ ಸ್ಪೂರ್ತಿಯಾಗಿದೆ.  ವೀರಸಾಗರ, ಲಕ್ಕೇನಹಳ್ಳಿ, ಹುಲಿಕಲ್‌, ಹೊಸಹಳ್ಳಿ, ಗೊಲ್ಲರಹಟ್ಟಿ, ಬೆಟ್ಟಹಳ್ಳಿ, ವೆಂಕಟಯ್ಯನಪಾಳ್ಯ, ಹೂಜೇನಹಳ್ಳಿ ಶಾಲೆಗಳಲ್ಲಿ ಉತ್ತಮ ಪರಿಸರ ಕಾಳಜಿ ಇದ್ದು ಚೆನ್ನಾಗಿ ನಿರ್ವಹಣೆ ಮಾಡಲಾಗಿದೆ. 

 ಗ್ರಾಮದಲ್ಲಿ ನೀರು ಇಲ್ಲದ ವೇಳೆ ಮಕ್ಕಳು ಒಂದೆರಡು ಕಿ ುà ಗಳಿಂದ ನೀರನ್ನು ಹೊತ್ತು ತಂದು ಸಸಿಗಳನ್ನು ಕಾಪಾಡಿದ್ದಾರೆ. ಶನಿವಾರ, ಭಾನುವಾರವೆನ್ನದೆ ಕಾರ್ಯನಿರ್ವಸಿದ್ದಾರೆ. ಅವರ ಶ್ರಮದ ಕುರುಹಾಗಿ ಇಂದು ಶಾಲೆಯನ್ನು ಕಾಣಬಹುದು ಎನ್ನುತ್ತಾರೆ  ಎಸ್‌ಡಿಎಂಸಿ ಅಧ್ಯಕ್ಷ ಪಾತರಾಜು.

ಸಂಧ್ಯಾ ಕೆ 

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.