ಹಳೇ ಬ್ಯಾಟು ಹಳೇ ಚೆಂಡು


Team Udayavani, Feb 22, 2020, 6:00 AM IST

haale

ಟೀಕೆಗಳಿಗೆ ಶತಕದ ಉತ್ತರ ಕೊಟ್ಟರು!
ಕರ್ನಾಟಕದ ಶ್ರೇಷ್ಠ ಕ್ರಿಕೆಟ್‌ ಆಟಗಾರರು ಎಂದು ಪಟ್ಟಿ ಮಾಡಲು ಹೊರಟರೆ ಮರೆಯದೇ ಸೇರಿಸಬೇಕಾದ ಹೆಸರು ಕಿರ್ಮಾನಿ ಅವರದ್ದು. ಸೈಯದ್‌ ಸ್ತಫಾ ಹುಸೇನ್‌ ಕಿರ್ಮಾನಿ ಎಂಬುದು ಅವರ ಪೂರ್ಣ ಹೆಸರು. ಭಾರತ ಕಂಡ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂಬುದು ಕಿರ್ಮಾನಿಯ ಹೆಗ್ಗಳಿಕೆ. ಈ ಹಿಂದೆ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆಗೇನಿದ್ದರೂ ಐದು ದಿನಗಳ ಟೆಸ್ಟ್‌ ಪಂದ್ಯದ ರಾಜದರ್ಬಾರು.

ಒಂದು ದಿನದ ಆಟ ಎಂದುಕೊಂಡರೆ, ಪೂರ್ತಿ 85-90 ಓವರ್‌ಗಳನ್ನೂ ಆಡಲೇಬೇಕಿತ್ತು. ಒಂದು ವೇಳೆ, ಕಡೆಯ 10-20 ಓವರ್‌ ಬಾಕಿಯಿದ್ದಾಗ, ಯಾರಾದರೂ ಪ್ರಮುಖ ಆಟಗಾರ ಔಟ್‌ ಆದರೆ, ಉಳಿದ ಓವರ್‌ಗಳನ್ನು ಆಡುವಂಥ ಸಾಮಾನ್ಯ ಆಟಗಾರನನ್ನು “ರಾತ್ರಿ ಕಾವಲುಗಾರ’ ಅಥವಾ “ನೈಟ್‌ವಾಚ್‌ಮನ್‌’ ಆಗಿ ಆಡುವ ಅಂತಹದೊಂದು ಅವಕಾಶ ಸಿಗುತ್ತಿತ್ತು. ಕಿರ್ಮಾನಿಗೂ 1979ರಲ್ಲಿ ಸಿಕ್ಕಿತ್ತು. ಎದುರಾಳಿಗಳಾಗಿದ್ದ ಆಸ್ಟ್ರೇಲಿಯನ್ನರು, ಕಿರ್ಮಾನಿಯನ್ನು ವೆರಿ ಪುವರ್‌ ಬ್ಯಾಟ್ಸ್‌ಮನ್‌ ಎಂದೇ ಆಗ ಭಾವಿಸಿದ್ದರು. ಆದರೆ ಈಗ ಅದ್ಭುತ ಒಪ್ಪಲು ಕ್ರೀಡಾ ಲೋಕ ಸಿದ್ಧವಿರಲಿಲ್ಲ.

ಹಾಗೆಂದೇ ಕೆಲವರು ಇದೊಂದು ಅಷ್ಟೇ ಎಂದು ಕೊಂಕು ನುಡಿದರು. ಈ ಟೀಕೆಗೆ ಉತ್ತರ ಕೊಡುವಂಥ ಅವಕಾಶವೊಂದು 5 ವರ್ಷಗಳ ನಂತರ ಕಿರ್ಮಾನಿಗೆ ಸಿಕ್ಕಿತು. ಆಗ ಇಂಗ್ಲೆಂಡ್‌ ವಿರುದ್ಧ ಮುಂಬೈಯಲ್ಲಿ ನಡೆದ ಟೆಸ್ಟ್‌ನಲ್ಲಿ ಕಿರ್ಮಾನಿಯನ್ನು ಮತ್ತೂಮ್ಮೆ ನೈಟ್‌ವಾಚ್‌ಮನ್‌ ಆಗಿ ಆಡಲು ಕಳಿಸಲಾಯಿತು. ಟೀಕಿಸಿದವರಿಗೆಲ್ಲ ಉತ್ತರ ಕೊಡಲೇಬೇಕು ಎಂಬಂತೆ ನೆಲಕಚ್ಚಿ ನಿಂತು ಆಡಿ ಮತ್ತೂಮ್ಮೆ ಸೆಂಚುರಿ ಹೊಡೆದರು. ವಿಕೆಟ್‌ ಕೀಪರ್‌ಗಳು ಒಬ್ಬ, ನೈಟ್‌ವಾಚ್‌ಮನ್‌ ಎಂದು ಆಡಲು ಬಂದು, ಎರಡು ಬಾರಿಯೂ ಶತಕ ಹೊಡೆದಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ.

ಸಿಕ್ಸರ್‌ ಹೊಡೆಸಿಕೊಂಡದ್ದು ಮರೆಯಲಾಗದ ಕ್ಷಣ
ಭಾರತ ಕ್ರಿಕೆಟ್‌ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಲಕ್ಷ್ಮೀಪತಿ ಬಾಲಾಜಿ ಕೂಡ ಒಬ್ಬರು. ಜಾವಗಲ್‌ ಶ್ರೀನಾಥ್‌ ಅವರಷ್ಟೇ ವೇಗದಲ್ಲಿ ಅವರಷ್ಟೇ ನಿಖರವಾಗಿ ಚೆಂಡು ಎಸೆಯಬಲ್ಲ ಬೌಲರ್‌ ಎಂಬ ಹೆಗ್ಗಳಿಕೆ ಬಾಲಾಜಿ ಅವರಿಗಿತ್ತು. ಸಾಮಾನ್ಯವಾಗಿ ಎಂಟು ಅಥವಾ ಒಂಭತ್ತನೇ ವಿಕೆಟ್‌ಗೆ ಆಡಲು ಬರುತ್ತಿದ್ದ ಬಾಲಾಜಿ ಒಂದರ ಹಿಂದೊಂದು ಬೌಂಡರಿ, ಸಿಕ್ಸರ್‌ ಹೊಡೆದು ಕ್ರೀಡಾ ಪ್ರೇಮಿಗಳನ್ನು ರಂಜಿಸುತ್ತಿದ್ದರು.

ಪಾಕಿಸ್ತಾನದಲ್ಲಿ ಇವರ ಆಟವನ್ನು ನೋಡಬೇಕೆಂಬ ಒಂದೇ ಆಸೆ ಯಿಂದ ಕ್ರೀಡಾಂಗಣಕ್ಕೆ ಬರುವ ಜನರಿದ್ದರು. ಅಂದರೆ ಬಾಲಾಜಿಯ ಆಟ ಸೃಷ್ಟಿಸದ ಹವಾ ಎಂಥದಿರಬೇಕೋ ಲೆಕ್ಕ ಹಾಕಿ. ಇಂಥ ಹಿನ್ನೆಲೆಯ ಬಾಲಾಜಿಯನ್ನು ಅದೊಮ್ಮೆ ಸಂದರ್ಶನದಲ್ಲಿ – ನಿಮ್ಮ ಕ್ರೀಡಾ ಜೀವನದ ಮರೆಯಲಾಗದ ಕ್ಷಣ ಯಾವುದು ಎಂದು ಕೇಳಲಾಯಿತು. ಆಗ ಬಾಲಾಜಿ ಹೇಳಿದ ಮಾತಿದು: “ಸಾಮಾನ್ಯವಾಗಿ ಒಂದು ದಿನದ ಪಂದ್ಯಗಳಲ್ಲಿ 8 ಅಥವಾ 9ನೇ ವಿಕೆಟ್‌ಗೆ ಆಡಲು ಬರುವವರು ಬೇಗ ಔಟ್‌ ಆಗುತ್ತಾರೆ. ಅಂಥವರ ವಿಕೆಟ್‌ ಪಡೆಯುವ ಸುಲಭ ಅವಕಾಶ ಬೌಲರ್‌ಗೆ ಇರುತ್ತದೆ.

ಕಡೆಯ ವಿಕೆಟ್‌ಗಳನ್ನು ಬೇಗ ಉರುಳಿಸಿ, ನನ್ನ ತಂಡದ ಗೆಲುವಿಗೆ ಕಾರಣನಾಗಬೇಕು ಎಂಬ ಆಸೆ ಎಲ್ಲ ಬೌಲರ್‌ಗೂ ಇರುತ್ತದೆ. ಅದೊಮ್ಮೆ 8ನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಬ್ರೇಟ್‌ ಲೀ ಆಡಲು ಬಂದಾಗ ಅವರನ್ನು ಔಟ್‌ ಮಾಡುವ ಹುಮ್ಮಸ್ಸು ನನಗೂ ಇತ್ತು. ಅದು ಪಂದ್ಯದ ಕಡೆಯ ಓವರ್‌, ಬ್ರೇಟ್‌ ಲೀ ವಿಕೆಟ್‌ ಬಿದ್ದರೆ ಭಾರತ ಗೆಲ್ಲುತ್ತಿತ್ತು. ಅಂಥ ಲೆಕ್ಕಾಚಾರದಲ್ಲೇ ನಾನೂ ಚೆಂಡೆಸೆದೆ. ಆದರೆ ಬ್ರೇಟ್‌ ಲೀ ಅವನ್ನೂ ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಆಸ್ಟ್ರೇಲಿಯವನ್ನು ಗೆಲ್ಲಿಸಿಬಿಟ್ಟರು. ನಾನು ಎಂದೂ ಮರೆಯಲಾಗದ ನೋವಿನ ಕ್ಷಣವೆಂದರೆ ಅದೇ’.

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.