ಹಳೇ ಬ್ಯಾಟು ಹಳೇ ಚೆಂಡು


Team Udayavani, Oct 12, 2019, 4:01 AM IST

hale-bat-ol

ನಿದ್ರೆಯಿಂದ ಸಿಗುವಂಥ ಖುಷಿ ಎಲ್ಲೂ ಸಿಗಲ್ಲ …
ಭಾರತ ತಂಡ ಕಂಡ ಶ್ರೇಷ್ಠ ವಿಕೆಟ್‌ ಕೀಪರ್‌ ಯಾರು ಅಂದರೆ, ಇಂದಿನ ತಲೆಮಾರಿನ ಜನ ನೆನಪಿಸಿಕೊಳ್ಳುವ ಹೆಸರು ಎಂ. ಎಸ್‌. ಧೋನಿ. ಆದರೆ, 80ರ ದಶಕದ ಆಟಗಾರರು ಅಂದಾಗ ನೆನಪಾಗುವ ಹೆಸರು ಸಯ್ಯದ್‌ ಕಿರ್ಮಾನಿ ಅವರದ್ದು. ಸಯ್ಯದ್‌ ಮುಜಬಾ ಹುಸೇನ್‌ ಕಿರ್ಮಾನಿ ಎಂಬುದು ಅವರ ಪೂರ್ಣ ಹೆಸರು. ಕಿರ್ಮಾನಿಯ ಹೆತ್ತವರು ಹೈದರಾಬಾದ್‌ ಮೂಲದವರು. ಈತ ಬೆಳೆದದ್ದು ಅಂದಿನ ಮದ್ರಾಸ್‌ನಲ್ಲಿ ಬದುಕು ಕಂಡುಕೊಂಡಿದ್ದು ಬೆಂಗಳೂರಿನಲ್ಲಿ. ಮಿಂಚಿನ ವೇಗದಲ್ಲಿ ಸ್ಟಂಪಿಂಗ್‌ ಮಾಡುವುದು ಮತ್ತು ಡೈವ್‌ ಹೊಡೆದು ಕ್ಯಾಚ್‌ ಹಿಡಿಯುವುದರಲ್ಲಿ ಕಿರ್ಮಾನಿಯನ್ನು ಸರಿಗಟ್ಟುವ ಕೀಪರ್‌ಗಳು 80ರ ದಶಕದಲ್ಲಿ ಇರಲಿಲ್ಲ ಅನ್ನುವುದು ಒಪ್ಪಲೇಬೇಕಾದ ಸತ್ಯ.

1983ರಲ್ಲಿ, ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ ವಿಶ್ವಕಪ್‌ ಗೆದ್ದಿತಲ್ಲ, ಅದರಲ್ಲಿ ಕಿರ್ಮಾನಿಯ ಪಾತ್ರ ಕೂಡ ಮಹತ್ವದ್ದು. ಅಲ್ಲಿ ಒಟ್ಟು 17 ಕ್ಯಾಚ್‌ ಪಡೆಯುವ ಮೂಲಕ ವಿಶ್ವಕಪ್‌ ಸರಣಿಯ ಶ್ರೇಷ್ಠ ವಿಕೆಟ್‌ ಕೀಪರ್‌ ಎಂಬ ಹಿರಿಮೆಗೂ ಅವರು ಪಾತ್ರರಾದರು. ವಿಕೆಟ್‌ ನ ಹಿಂದೆ ನಿಂತಾಗ ಮೈಯೆಲ್ಲಾ ಕಣ್ಣಾಗಿ ಇರುತ್ತಿದ್ದ ಕಿರ್ಮಾನಿ, ಸ್ವಲ್ಪ ಬಿಡುವು ಸಿಕ್ಕರೂ ಸಾಕು ಕೋಳಿನಿದ್ದೆ ತೆಗೆಯಲು ಮುಂದಾಗುತ್ತಿದ್ದರಂತೆ. ತಮ್ಮ ಪುಸ್ತಕದಲ್ಲಿ ಈ ಕುರಿತು ಗವಾಸ್ಕರ್‌ ಹೀಗೆ ಬರೆದಿದ್ದಾರೆ- ಆಗ ನಾವು ಇಂಗ್ಲೆಂಡ್‌ ವಿರುದ್ಧ ಆಡಲು ಹೋಗಿದ್ದೆವು. ಬ್ಯಾಟಿಂಗ್‌ ಸೈಡ್‌ ನಲ್ಲಿ ನಮ್ಮಆರಂಭಿಕ ಆಟಗಾರರಿದ್ದರು.

ನಮ್ಮ ತಂಡದ ಮ್ಯಾನೇಜರ್‌ ಆಗಿದ್ದ ರಾಮ್‌ ಪ್ರಕಾಶ್‌ ಮೆಹ್ರಾ, ಕಿರ್ಮಾನಿಯನ್ನು ಕರೆದು ಹೇಳಿದರು- ನೀನು ಆಡಲು ಹೋಗುವುದು 7ನೇ ವಿಕೆಟ್‌ಗೆ. ನಿನ್ನ ಸರದಿ ಬರುವ ತನಕ ಇಲ್ಲಿಯೇ ಕೂತಿದ್ದು ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ನ ಮೂವ್ಮೆಂಟ್‌ ಗಮನಿಸು… ನಿನ್ನ ಕೌಶಲ್ಯ ಇಂಪೂ›ವ್‌ ಆಗಲಿಕ್ಕೆ ಅದರಿಂದ ಸಹಾಯ ಆಗುತ್ತೆ… ಮೆಹ್ರಾ, ಆ ಕಡೆಗೆ ಹೋಗುವುದನ್ನೇ ಕಾಯುತ್ತಿದ್ದ ಕಿರ್ಮಾನಿ, ನಂತರ ಸದ್ದಿಲ್ಲದೇ ನಿದ್ರೆಗೆ ಜಾರಿಬಿಟ್ಟಿದ್ದರು. ಭರ್ತಿ 30 ನಿಮಿಷದ ನಂತರ ಎಚ್ಚರಾಗಿ ,ನಿದ್ರೆಯಲ್ಲಿ ಸಿಗುವ ಸಂತೋಷ ಬೇರೆ ಯಾವುದರಿಂದಲೂ ಸಿಗೋದಿಲ್ಲ ಎಂದು ಹೇಳಿ ಖೀಲ್ಲನೆ ನಕ್ಕಿದ್ದರು.

ಕ್ರಿಕೆಟ್‌ ನನಗೆ ಕೆಲಸ ಕೊಡಿಸಿದೆ, ಗೌರವ ಕೊಟ್ಟಿದೆ…
ಸವ್ಯಸಾಚಿ ಎಂದು ಹೆಸರಾದವರು ಜಿ.ಆರ್‌.ವಿಶ್ವನಾಥ್‌. ಅವರಿಗೆ ಸಂಬಂಧಿಸಿದ ಒಂದು ಸುದ್ದಿಯನ್ನು ಕಳೆದ ವಾರ ಇದೇ ಅಂಕಣದಲ್ಲಿ ಓದಿದ್ದೀರಿ. 80 ರ ದಶಕದಲ್ಲಿ ಟೆಸ್ಟ್‌. ಮ್ಯಾಚ್‌ಗಳಿಗಿಂತ ಹೆಚ್ಚು ಜನಪ್ರಿಯ ಆಗಿದ್ದುದು ರಣಜಿ ಪಂದ್ಯಗಳು. ಭಾರತ ತಂಡ ಎಂದಾಗ ಒಟ್ಟಿಗೇ ಮೈದಾನಕ್ಕೆ ಇಳಿಯುತ್ತಿದ್ದ ಆಟಗಾರರು, ರಣಜಿ ಪಂದ್ಯದ ಸಂದರ್ಭದಲ್ಲಿ ಪರಸ್ಪರ ಎದುರಾಳಿಗಳಾಗಿ ಬದಲಾಗುತ್ತಿದ್ದರು. ಮುಂಬೈ- ಕರ್ನಾಟಕದ ರಣಜಿ ಪಂದ್ಯ ಅಂದರೆ, ಕುತೂಹಲ ದುಪ್ಪಟ್ಟಾಗುತ್ತಿತ್ತು. ಕಾರಣ ಮುಂಬೈ ತಂಡದಲ್ಲಿ ಗವಾಸ್ಕರ್‌, ವೆಂಗ್‌ ಸರ್ಕಾರ್‌ ಮುಂತಾದವರಿದ್ದಾರೆ, ಕರ್ನಾಟಕ ತಂಡದಲ್ಲಿ ವಿಶ್ವನಾಥ್‌, ಕಿರ್ಮಾನಿ, ರೋಜರ್‌ ಬಿನ್ನಿ, ರಘುರಾಮ್‌ ಭಟ್‌ ಮುಂತಾದ ಆಟಗಾರರು ಇರುತ್ತಿದ್ದರು. ಮುಖ್ಯವಾಗಿ, ಆ ದಿನಗಳಲ್ಲಿ ಒಂದು ಸುದ್ದಿ ಚಾಲ್ತಿಯಲ್ಲಿತ್ತು.

ಏನೆಂದರೆ-ವಿಶ್ವನಾಥ್‌ ಅವರ ಆಟವನ್ನು ಮೆಚ್ಚಿ, ಅವರನ್ನೇ ಮದುವೆ ಆಗುವುದಾಗಿ ಗವಾಸ್ಕರ್‌ ಅವರ ತಂಗಿ ಪಟ್ಟು ಹಿಡಿದರೆಂದೂ, ಕಡೆಗೆ ತಮ್ಮ ಪ್ರಯತ್ನದಲ್ಲಿ ಯಶಸ್ವಿ ಆದರೆಂದೂ ಕ್ರಿಕೆಟ್‌ ಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿಯೇ ಒಮ್ಮೆ ಕ್ರೀಡಾ ಪತ್ರಕರ್ತರೊಬ್ಬರು ವಿಶ್ವನಾಥ್‌ ಅವರನ್ನು ಕೇಳಿದ್ದರು- ಸರ್‌, ಕ್ರಿಕೆಟ್‌ ನಿಂದ ನಿಮಗೆ ಏನು ಸಿಕ್ಕಿದೆ?, ಆಗ, ವಿಶ್ವನಾಥ್‌ ಸಂಭ್ರಮದಿಂದಲೇ ಹೀಗೆ ಹೇಳಿದ್ದರು- ಕ್ರಿಕೆಟ್‌ ನಿಂದ ನನಗೆ ಬ್ಯಾಂಕ್‌ನಲ್ಲಿ ನೌಕರಿ ಸಿಕ್ಕಿದೆ. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಕ್ರಿಕೆಟ್‌ ಆಟಗಾರ ಎಂಬ ಕಾರಣಕ್ಕಾಗಿಯೇ ನನಗೆ ಹೆಚ್ಚಿನ ಗೌರವ ಸಿಗುತ್ತಿದೆ. ಅದಕ್ಕಿಂತ ಹೆಚ್ಚಿನದು ಬೇರೇನು ಬೇಕು?

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.