ಹಳೇ ಬ್ಯಾಟು ಹಳೇ ಚೆಂಡು


Team Udayavani, Oct 26, 2019, 4:01 AM IST

hale-bat

ನಿಧಾನಕ್ಕೆ ಬೌಲಿಂಗ್‌ ಮಾಡ್ರಯ್ಯಾ…
1983ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಭಾರತದ ವಿರುದ್ಧ ಸೋಲುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಏಕದಿನ ಕ್ರಿಕೆಟ್‌ನ ಚಿಲ್ಟಾಗಳು ಅನ್ನಿಸಿಕೊಂಡಿದ್ದ ಭಾರತದ ಆಟಗಾರರು, ಕ್ಲೈವ್‌ ಲಾಯ್ಡ್, ವಿವಿಯನ್‌ ರಿಚರ್ಡ್ಸ್, ಮಾಲ್ಕಮ್‌ ಮಾರ್ಷಲ್‌ರಂಥ ಘಟಾನುಘಟಿ ಆಟಗಾರರಿಂದ ಕೂಡಿದ್ದ ತಂಡವನ್ನು ಸೋಲಿಸುವುದು ಅಂದರೆ ನಂಬುವ ಮಾತೆ? ಆದರೆ, ಯಾರೂ ನಂಬಲಾಗ­ದಂಥ ಪವಾಡವಂತೂ ನಡೆಯಿತು. ಕಪಿಲ್‌ ದೇವ್‌ ಅವರ ಜೊತೆಗಾರ ಆಟಗಾರರು, ಡೆವಿಲ್‌ಗ‌ಳಂತೆಯೇ ಎದುರಾಳಿ ಆಟಗಾರರನ್ನು ಕಾಡಿದರು. ಈ ಸೋಲಿನಿಂದ, ಕ್ರಿಕೆಟ್‌ ಲೋಕಕ್ಕೆ ನಾವೇ ದೊರೆಗಳು ಎಂದು ಭಾವಿಸಿದ್ದ ವೆಸ್ಟ್‌ ಇಂಡೀಸ್‌ ಆಟಗಾರರಿಗೆ ಅವಮಾನವಾಗಿತ್ತು. ಮುಖ್ಯವಾಗಿ, ವಿಂಡೀಸ್‌ನ ಪತ್ರಿಕೆಗಳು ತಮ್ಮ ದೇಶದ ಎಲ್ಲಾ ಆಟಗಾರರಿಗೆ ಛೀಮಾರಿ ಹಾಕಿದ್ದವು.

ಈ ಅವಮಾನದಿಂದ ವೆಸ್ಟ್‌ಇಂಡೀಸ್‌ ತಂಡದ ದಂತಕಥೆ ವಿವಿಯನ್‌ ರಿಚರ್ಡ್ಸ್ ಅದೆಷ್ಟು ಸಿಟ್ಟಾಗಿದ್ದ ಅಂದರೆ, ಭಾರತ ಪ್ರವಾಸಕ್ಕೆ ಹೋದಾಗ, ನಮ್ಮ ಶಕ್ತಿ ಏನು ಅಂತ ತೋರಿಸ್ತೇವೆ ಅಂದಿದ್ದ. ವೇಗದ ಬೌಲಿಂಗ್‌ ಎದುರಿಸಲು ಭಾರತದ ಬ್ಯಾಟ್ಸಮನ್‌ಗಳು ಹೆದರುತ್ತಾರೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಭಾರತ ಪ್ರವಾಸಕ್ಕೆ ಬಂದಾಗ, ಹೊಸ ವೇಗದ ಬೌಲರ್‌ಗಳೊಂದಿಗೇ ಆತ ಬಂದಿದ್ದ. ಆ ಬೌಲರ್‌ಗಳ ವೇಗ ಮತ್ತು ಆಕ್ರಮಣದ ಶೈಲಿ ಹೇಗಿತ್ತು ಅಂದರೆ, ಚೆನ್ನೈನಲ್ಲಿ ಟೆಸ್ಟ್‌ ಆರಂಭವಾಗಿ 10 ನಿಮಿಷ ಕಳೆಯುವಷ್ಟರಲ್ಲಿ, ಭಾರತದ ಮೂರು ವಿಕೆಟ್‌ ಬಿದ್ದಿದ್ದವು! ಆಗ ಆಟ ನೋಡಲು ಬಂದವರೊಬ್ಬರು. “ವಿಶ್ವಕಪ್‌ ಗೆದ್ದ ತಂಡ ಅಲ್ಲವೇ? ಅದೇ ಹುಮ್ಮಸ್ಸಿನಲ್ಲಿ ಚೆನ್ನಾಗಿ ಆಡ್ತಾರೆ, ಐದು ದಿನ ಆಟ ನೋಡಬಹುದು ಅಂತ ಬಂದ್ವಿ. ಈಗ ನೋಡಿದ್ರೆ, ನಾವು ಕೂರುವ ಮೊದಲೇ 3 ಜನ ಔಟ್‌ ಆಗಿದ್ದಾರೆ. ಸ್ವಲ್ಪ ನಿಧಾನಕ್ಕೆ ಬೌಲಿಂಗ್‌ ಮಾಡ್ರಯ್ಯಾ” ಎಂದು ಬೋರ್ಡ್‌ ಬರೆದು ತೋರಿಸಿದ್ದರು…

ಆಟಗಾರರಿಗೆ ರೈಲಿನ ಹೆಸರು!
ಯಾವುದೇ ಒಬ್ಬ ವ್ಯಕ್ತಿ ಸೆಲೆಬ್ರಿಟಿ ಅನ್ನಿಸಿಕೊಂಡರೆ, ಅವನನ್ನು ಅವರ ಊರಿನ ಹೆಸರಲ್ಲಿ ಗುರುತಿಸುವುದುಂಟು. ಇಲ್ಲವಾದರೆ ಸೆಲೆಬ್ರಿಟಿಯ ರಾಜ್ಯದ ಹೆಸರಾಂತ ತಿಂಡಿಯ ಹೆಸರಿನ ಜೊತೆ ಅವರ ಹೆಸರು ಸೇರಿಸುವುದುಂಟು. ಹರ್ಯಾಣ ಹರಿಕೇನ್‌, ಕಾಶ್ಮೀರಿ ಆ್ಯಪಲ್‌ ಅಂತ ಹೆಸರುಗಳಲ್ಲಿ ಕೆಲವು. ಆದರೆ, ಕ್ರೀಡಾಪಟುಗಳನ್ನು ಗುರುತಿಸುವಾಗ ಮಾತ್ರ ರೈಲುಗಾಡಿಗಳ ಹೆಸರಿನ ಜೊತೆ ಆಟಗಾರರ ಹೆಸರನ್ನು ಜೋಡಿಸುತ್ತಾರೆ. ಕೇರಳದ ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ ಅವರನ್ನು – ಪಯ್ಯೋಲಿ ಎಕ್ಸ್‌ಪ್ರೆಸ್‌ ಎಂದು ಕರೆದದ್ದು, ಧೋನಿಯನ್ನು ರಾಂಚಿ ಎಕ್ಸ್‌ಪ್ರೆಸ್‌ ಎಂದು ಕೂಗಿದ್ದು ಈ ಮಾತಿಗೆ ಉದಾಹರಣೆಗಳು. ನಮ್ಮ ಜಾವಗಲ್‌ ಶ್ರೀನಾಥ್‌ ಅವರನ್ನು ಕರ್ನಾಟಕ ಎಕ್ಸ್‌ಪ್ರೆಸ್‌ ಎಂದು ಕರೆಯುತ್ತಾ ಇದ್ದುದನ್ನೂ ಇಲ್ಲಿ ಮಾಡಿಕೊಳ್ಳಬೇಕು. ಅಂತೂ ಆಟಗಾರರ ನೆಪದಲ್ಲಿ ರೈಲುಗಳ ಖ್ಯಾತಿಯೂ, ರೈಲುಗಳ ಹೆಸರಿನಿಂದ ಊರ ಮೇಲಿನ ಪ್ರೀತಿಯೂ ಹೆಚ್ಚಾಯಿತು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.