ಹಳೇ ಬ್ಯಾಟು ಹಳೇ ಚೆಂಡು


Team Udayavani, Nov 16, 2019, 4:02 AM IST

hale-vbatt]

ಹನಿಮೂನ್‌ಗೆ ಹೋದ ಶ್ರೀಕಾಂತ್‌ ವಿಶ್ವಕಪ್‌ ಗೆದ್ದ ಕಥೆ
1983ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲುತ್ತದೆ ಎಂಬ ವಿಶ್ವಾಸ ಯಾರಿಗೂ ಇರಲಿಲ್ಲ. ಆಯ್ಕೆ ಸಮಿತಿಯ ಸದಸ್ಯರಿಗೆ ಬಿಡಿ, ಆಟಗಾರರಲ್ಲಿ ಕೂಡ ಯಾರಿಗೂ ನಾವು ಕಪ್‌ ಗೆಲ್ಲುತ್ತೇವೆ ಎಂಬ ನಂಬಿಕೆ ಇರಲಿಲ್ಲ. ಆದರೆ, ಒಬ್ಬ ಕಪಿಲ್‌ ದೇವ್‌ ಮಾತ್ರ, ಈ ಸಲ ಕಪ್‌ ಗೆಲ್ಲೋದು ನಾವೇ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ತಂಡದ ನಾಯಕ ಆಗಿರುವ ಕಾರಣಕ್ಕೆ ಇಂಥ ಸುಳ್ಳುಗಳನ್ನು ಇಷ್ಟ ಇಲ್ಲದಿದ್ದರೂ ಹೇಳಲೇಬೇಕು ಎಂದು ಜನ ಆಡಿಕೊಂಡು ನಗುತ್ತಿದ್ದರು. ತಮಾಷೆ ಕೇಳಿ, ಭಾರತ ತಂಡ ಕಪ್‌ ಗೆಲ್ಲುತ್ತದೆ ಎಂಬ ನಂಬಿಕೆ, ಅವತ್ತು ತಂಡದ ಆರಂಭಿಕ ಆಟಗಾರ ಆಗಿದ್ದ ಕೆ. ಶ್ರೀಕಾಂತ್‌ ಅವರಿಗೂ ಇರಲಿಲ್ಲ.

ಫೈನಲ್‌ ಪಂದ್ಯದಲ್ಲಿ ಭಾರತದ ಪರ ಹೆಚ್ಚು ರನ್‌ ಹೊಡೆದದ್ದು ( 38 ರನ್‌) ಇದೇ ಶ್ರೀಕಾಂತ್‌, ಆ ದಿನಗಳನ್ನು ನೆನಪು ಮಾಡಿಕೊಂಡು ಹೇಳುತ್ತಾರೆ. “ವಿಶ್ವ ಕ್ರಿಕೆಟ್‌ನಲ್ಲಿ ಅಸಾಮಾನ್ಯರು ಅನ್ನಿಸಿಕೊಂಡಿದ್ದ ಇಯಾನ್‌ ಬಾಥಮ್, ಡೇವಿಡ್‌ ಗೋವರ್‌, ಕ್ಲೈವ್‌ ಲಾಯ್ಡ್, ವಿವಿಯನ್‌ ರಿಚರ್ಡ್ಸ್‌, ರಿಚರ್ಡ್‌ ಹಾಡ್ಲಿ ಮುಂತಾದವರೆಲ್ಲಾ ಎದುರಾಳಿ ತಂಡಗಳಲ್ಲಿ ಇದ್ದರು. ಅವರನ್ನೆಲ್ಲ ಎದುರಿಸಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂಬುದು ನಮ್ಮ ಅನಿಸಿಕೆ ಆಗಿತ್ತು. ಹಾಗಂತ ನೇರವಾಗಿ ಹೇಳುವುದು ಹೇಗೆ? ನಾನೊಂದು ಉಪಾಯ ಮಾಡಿದೆ.

ನನಗೆ ಆಗಷ್ಟೇ ಮದುವೆಯಾಗಿತ್ತು. ಹೇಗಿದ್ದರೂ ವಾರ ಅಥವಾ ಹತ್ತು ದಿನದಲ್ಲಿ ಎಲ್ಲಾ ಮ್ಯಾಚ್‌ ಸೋತು ನಾವು ಮನೆಗೆ ವಾಪಸ್‌ ಬರಬೇಕಾಗುತ್ತೆ. ಉಳಿದವರೆಲ್ಲಾ ದೆಹಲಿಯ ವಿಮಾನ ಹತ್ತಿದಾಗ, ನಾನು ಹೆಂಡತಿಯ ಜೊತೆ ಲಂಡನ್‌ನಲ್ಲಿ ಸ್ವಲ್ಪ ಸುತ್ತಾಡಿದರೆ ಹೇಗೆ ಅನ್ನಿಸಿತು. ನನ್ನ ಪತ್ನಿಗೂ ಅದನ್ನೇ ಹೇಳಿ ಕರ್ಕೊಂಡು ಹೋದೆ. ಅಲ್ಲಿ ನೋಡಿದರೆ, ಎಲ್ಲಾ ಉಲ್ಟಾ ಆಯಿತು. ನಂಬಲಾಗದ ಪವಾಡ ನಡೆದುಹೋಯಿತು. ಪರಿಣಾಮ, ಹನಿಮೂನ್‌ಗೆಂದು ಬಂದಾಕೆ, ಸ್ಟೇಡಿಯಂನಲ್ಲಿ ಕೂತು ಚಪ್ಪಾಳೆ ಹೊಡೆಯಬೇಕಾಯಿತು’ ಎಂದರು.

ಇಡೀ ತಂಡವನ್ನು ಒಬ್ಬನೇ ಹೆದರಿಸಿಬಿಟ್ಟ!
2011 ರಲ್ಲಿ ಭಾರತ ತಂಡ ವಿಶ್ವಕಪ್‌ ಗೆದ್ದು ಬೀಗುತ್ತಿದ್ದ ಸಂದರ್ಭ. ರನ್ನರ್‌ಅಪ್‌ ಆಗಿದ್ದ ಶ್ರೀಲಂಕಾ ತಂಡದ ನಾಯಕ ಮಹೇಲ ಜಯವರ್ಧನೆ ಅವರ ಮೊಗದಲ್ಲಿ ನಿರಾಸೆ ತುಂಬಿಕೊಂಡಿತ್ತು. ನಿಮ್ಮ ತಂಡದ ಸೋಲಿಗೆ ಮುಖ್ಯ ಕಾರಣ ಏನು ಎಂದಾಗ-ಧೋನಿ, ಗೌತಮ್‌ ಗಂಭೀರ್‌, ಕೊಹ್ಲಿಯವರ ಅದ್ಭುತ ಬ್ಯಾಟಿಂಗ್‌ ಎಂದು ಉತ್ತರ ಬರಬಹುದು ಎಂದು ಹಲವರು ಅಂದಾಜು ಮಾಡಿದ್ದರು. ಆದರೆ ಜಯವರ್ಧನೆ ಅವರ ಯಾರ ಹೆಸರನ್ನೂ ಹೇಳಲಿಲ್ಲ. ಶ್ರೀಲಂಕಾದ ಸೋಲಿಗೆ ಜಹೀರ್‌ ಖಾನ್‌ ಅವರ ಬೌಲಿಂಗ್‌ ಮುಖ್ಯ ಕಾರಣ ಅಂದರು. ಹೌದಾ? ಅದು ಹೇಗೆ ಎಂದು ಮತ್ತೆ ಪ್ರಶ್ನಿಸಿದಾಗ ಜಯವರ್ಧನೆ ಹೇಳಿದ್ದು- ಮೊದಲ 5 ಓವರ್‌ಗಳಲ್ಲಿ 50 ರನ್‌ ಹೊಡೆಯಬೇಕು.

ಆಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿಬೇಕು, ನಂತರ ವೇಗವಾಗಿ ರನ್‌ ಗಳಿಸಿ 300ರ ಮೊತ್ತ ದಾಟಬೇಕು ಎಂಬುದು ನಮ್ಮ ಪ್ಲಾನ್‌ ಆಗಿತ್ತು. ನಮ್ಮ ಆರಂಭಿಕ ಆಟಗಾರರಿಗೆ ಅದನ್ನೇ ಹೇಳಿದ್ದೆ. ಆದರೆ, ನಾವ್ಯಾರೂ ಊಹಿಸದ ರೀತಿಯಲ್ಲಿ ಬೌಲಿಂಗ್‌ ಮಾಡಿದ ಜಹೀರ್‌ ಬ್ಯಾಟ್ಸಮನ್‌ಗಳನ್ನು ಕಂಗಾಲು ಮಾಡಿದರು. ಮೊದಲ 5 ಓವರ್‌ಗೆ ಅವರು ನೀಡಿದ್ದು ಕೇವಲ 6 ರನ್‌. ಅದ್ಭುತವಾಗಿ ಬೌಲಿಂಗ್‌ ಮಾಡುವ ಮೂಲಕ, ಇಡೀ ತಂಡವನ್ನು ಒಬ್ಬ ಜಹೀರ್‌ ಹೆದರಿಸಿಬಿಟ್ಟರು. ಭಾರತವನ್ನು ಒತ್ತಡದಲ್ಲಿ ಸಿಕ್ಕಿಸಬೇಕು ಅಂದುಕೊಂಡಿದ್ದ ನಾವೇ ಒತ್ತಡಕ್ಕೆ ಸಿಕ್ಕಿಕೊಂಡೆವು… ಅದರ ಪರಿಣಾಮವಾಗಿಯೇ ಸೋತೆವು…

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.