ಶಾಂತಿಮಂತ್ರ ಹೇಳುವ ಸಂಸ್ಕಾರದ ಪಾಠ ಕೇಳಿಸಿಕೊಳ್ಳಿ…


Team Udayavani, Apr 20, 2019, 6:02 PM IST

Bahu-Shaanthi

ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು.

ಒಂದು ಶುಭಕಾರ್ಯ, ಒಂದು ಶುಭ ಸಮಾರಂಭ, ಒಂದು ದೇವತಾಕಾರ್ಯ ಮೊದಲಾದವುಗಳನ್ನು ಆರಂಭಿಸುವಾಗ ಶಾಂತಿಮಂತ್ರದಿಂದ ಆರಂಭಿಸಿ, ಅಂತ್ಯದಲ್ಲೂ ಶಾಂತಿಮಂತ್ರವನ್ನು ಹೇಳುವುದೇ ಸತ್ಸಂಪ್ರದಾಯ. ಇದು ಹಲವರಿಗೆ ತಿಳಿದಿರುವ ಸಂಗತಿ. ನಾಳೆ ಏನಾಗಬೇಕು? ಎಂದು ಕೇಳಿದರೆ ಉತ್ತರ, ಒಳ್ಳೆಯದಾಗಬೇಕಷ್ಟೆ ಎಂಬುದು.

ಈ ಒಳ್ಳೆಯದಾಗುವುದು ಎಂದರೆ ಏನು? ಕನಸಿನಲ್ಲಿ ಕಂಡ ಸಂಪತ್ತು ಮನೆ ಎದುರು ಬಂದು ಬೀಳುವುದೇ ಅಥವಾ ಬಯಸಿದ ಅಧಿಕಾರವೊಂದು ನಾಳೆ ಇದ್ದಕ್ಕಿದ್ದಂತೆ ದೊರೆಯುವುದೇ? ಏನೂ ಕಷ್ಟವೇ ಇಲ್ಲದೆ ಬದುಕುವುದೇ? ಇವ್ಯಾವುದೂ ಅಲ್ಲ. ಒಂದು ನೆಮ್ಮದಿಯ ಬದುಕು. ಒಳ್ಳೆಯ ಬದುಕಿಗೆ ಮನಸ್ಸೂ ಒಳ್ಳೆಯದಾಗಿರಬೇಕು. ಅಷ್ಟೇ ಅಲ್ಲದೆ, ಸುತ್ತಲಿನ ಸಮಾಜ-ಸಂಸ್ಕೃತಿ, ಪ್ರಕೃತಿ, ನುಡಿ-ನಡೆ ಎಲ್ಲವೂ ಒಳ್ಳೆಯದಾಗಿದ್ದರೆ ಮಾತ್ರ ನಾಳೆಗಳು ಒಳ್ಳೆಯ ದಿನಗಳಾಗುತ್ತವೆ. ಈ ಒಳ್ಳೆಯದು ಎಂಬುದೂ ವ್ಯಕ್ತಿಗತವೇ ಬಿಡಿ. ಹಾಗಾಗಿ, ಎಲ್ಲರಿಗೂ ಒಳ್ಳೆಯದಾದರೆ ಅಷ್ಟು ಸಾಕು.

ಶಾಂತಿ ನೆಮ್ಮದಿ
ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಸಂಸ್ಕೃತಿ. ಒಳ್ಳೆಯ ಸಂಸ್ಕೃತಿಯಿಂದ ಎಲ್ಲ ನಡೆ-ನುಡಿಗಳೂ ಉತ್ತಮವೇ ಆಗಿ ಒಳ್ಳೆಯದೇ ಆಗುತ್ತದೆ. ಹಾಗಾಗಿಯೇ, ಶಾಂತಿಮಂತ್ರ ಯಾವಾಗಲೂ ಅಂತಹ ಒಳ್ಳೆಯ ಆಶಯವನ್ನು ಹೊಂದಿರುತ್ತದೆ. ಶಾಂತಿ ಎಂದರೆ ನೆಮ್ಮದಿ. ಶಾಂತಿಯುತವಾದ ಮನಸ್ಸು ಎಲ್ಲರದ್ದೂ ಆಗಿದ್ದಾಗ ಎಲ್ಲರಿಗೂ ನೆಮ್ಮದಿ. ಹೀಗೊಂದು ಶಾಂತಿ ಮಂತ್ರವಿದೆ.

ಓಂ ಭದ್ರಂ ಕರ್ಣೇಭಿಃ
ಶ್ರುಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿವ್ಯìಶೇಮ
ದೇವಹಿತಂ ಯದಾಯುಃ||
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ ||

ಈ ಶ್ಲೋಕದ ಅರ್ಥ ಹೀಗಿದೆ: ಹೇ ದೇವತೆಗಳೇ, ಮಂಗಳವಾದುದನ್ನು ಕಿವಿಗಳಿಂದ ಕೇಳ್ಳೋಣ. ಹೇ ಪೂಜಾರ್ಹರೇ, ಪವಿತ್ರವಾದುದನ್ನು ಕಣ್ಣುಗಳಿಂದ ನೋಡೋಣ. ದೃಢವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ, ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಆಯಸ್ಸನ್ನು ಹೊಂದೋಣ. ಮಗುವೊಂದು ಪ್ರತಿಯೊಂದನ್ನೂ ಮೊತ್ತಮೊದಲು ಕಲಿಯುವುದು ಕೇಳುವಿಕೆ ಮತ್ತು ನೋಡುವಿಕೆಯಿಂದಲೇ.

ಪ್ರತಿಯೊಬ್ಬ ಮನುಷ್ಯನಿಗೂ, ಬದುಕಿನ ಪ್ರತಿಹಂತದಲ್ಲೂ ಹೀಗೇಯೇ. ಒಂದು ಕಲ್ಪನೆಗೂ ಕೂಡ ವಾಸ್ತವದ ಯಾವುದೋ ಒಂದು ಎಳೆ ಬೇಕೇಬೇಕು. ಹಾಗೆಯೇ ಯೋಚನೆಯೊಂದು ನಮ್ಮನ್ನು ಆವರಿಸಲು ಅಥವಾ ಮನಸ್ಸಿನಲ್ಲಿ ಯೋಚನೆ ಹುಟ್ಟಲು ಕಾರಣವಾಗುವುದೇ ಈ ಕೇಳಿದ್ದು ಮತ್ತು ನೋಡಿದ ಪ್ರಸಂಗ.

ಹುಲಿಯೊಂದನ್ನು ನೋಡಿದವನಿಗೆ ಆತ ಸಿಂಹವನ್ನು ನೋಡದೇ ಹೋದರೂ ಅದು ಹೇಗಿರುತ್ತದೆ ಎಂಬುದರ ಅರಿವು ಮೂಡಿಸುವುದು ಸುಲಭ. ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು. ಹಾಗಾಗಿ, ಈ ಮಂತ್ರದಲ್ಲಿ ಮಂಗಳಕರವಾದದ್ದೇ ಕಿವಿಗೆ ಬೀಳಲಿ ಎಂಬ ಆಶಯವಿದೆ.
ನೋಡುವುದೂ ಕೂಡ ಪವಿತ್ರವಾದದ್ದೇ ಇರಲಿ ಎಂಬ ಮತ್ತೂಂದು ಸದಾಶಯ.

ಸಂಸ್ಕಾರಯುತವಾದ ಕಾರ್ಯಗಳು ಕಣ್ಣಿಗೆ ಬಿದ್ದಾಗ ಮನಸ್ಸು ಕೂಡ ಅದರ ಕಡೆಯೇ ಆಕರ್ಷಿತವಾಗಿ ದೇಹವನ್ನು ಅದರಲ್ಲಿ ತೊಡಗಿಸಲು ಅಣಿಯಾಗುತ್ತದೆ. ಅಂತೆಯೇ, ಕ್ರೌರ್ಯದಂತಹ ಸಂಸ್ಕಾರ ರಹಿತವಾದ ಸಂಗತಿಗಳನ್ನು, ಕಣ್ಣು ನೋಡುತ್ತಾ ಇದ್ದಾಗ ಮನಸ್ಸು ಅದಕ್ಕೇ ಒಗ್ಗಿಕೊಂಡು ಅದು ಕೆಟ್ಟದು ಎಂಬುದು ಅರಿವಾಗದೇ ಅಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂದಾಗುವುದು ಸಹಜ. ಹಾಗಾಗಿಯೇ, ಉತ್ತಮವಾದದ್ದು ಮಾತ್ರ ನಮ್ಮ ಕಿವಿಯನ್ನು ಸೇರಬೇಕು, ಕಣ್ಣುಗಳು ಅದನ್ನಷ್ಟೇ ನೋಡಬೇಕು. ಒಂದು ಸುಸಂಸ್ಕೃತಿಯ ಮೂಲ ಹುಟ್ಟಿಗೆ ಕಾರಣವಾಗುವ ಅಂಶಗಳು ಈ ಶಾಂತಿ ಮಂತ್ರಗಳಲ್ಲಿ ಅಡಕವಾಗಿವೆ.

ಇಂತಹ ಶಾಂತಿಮಂತ್ರಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ, ಸನ್ಮಾರ್ಗದಲ್ಲಿಯೇ ಬದುಕನ್ನು ನಿರ್ವಹಿಸಲು ಪ್ರೇರಕವಾಗಿವೆ. ಆಗಾಗ ಇವನ್ನು ಕೇಳುತ್ತಿರಬೇಕು ಮತ್ತು ಅದಕ್ಕೂ ಹೆಚ್ಚಾಗಿ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

— ವಿಷ್ಣು ಭಟ್‌ ಹೊಸಮನೆ

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.