ಬ್ರಹ್ಮಹತ್ಯಾ ದೋಷಕ್ಕೆ ಮುಕ್ತಿ ದೊರೆತ ಧಾಮ
ಪುರದಪುಣ್ಯಂ- ರಾಮನಾಥಪುರ
Team Udayavani, Sep 21, 2019, 5:00 AM IST
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪುಣ್ಯಕ್ಷೇತ್ರ, ರಾಮನಾಥಪುರ. “ದಕ್ಷಿಣದ ಕಾಶಿ’ ಅಂತಲೇ ಕರೆಯಲ್ಪಡುವ ಈ ಊರಿಗೆ ತ್ರೇತಾಯುಗದಲ್ಲಿ “ವಾಸವಾಪುರಿ’ ಎನ್ನಲಾಗುತ್ತಿತ್ತಂತೆ. ಬ್ರಾಹ್ಮಣನೂ ಆಗಿದ್ದ ರಾವಣನನ್ನು ಸಂಹರಿಸಿದ ನಂತರ ಶ್ರೀರಾಮ, ಬ್ರಹ್ಮಹತ್ಯಾ ದೋಷ ಪರಿಹರಿಸಿಕೊಳ್ಳಲು, ಇಲ್ಲಿಗೆ ಆಗಮಿಸುತ್ತಾನೆ. ಅಗಸ್ತ್ಯ ಋಷಿಗಳ ಸಲಹೆಯ ಮೇರೆಗೆ, ವಿಹಿ° ಪುಷ್ಕರಣಿಯಲ್ಲಿ ಉದ್ಭವ ಶಿವಲಿಂಗವನ್ನು ಹುಡುಕಿ, ಪೂಜಿಸಿ, ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಪಡೆಯುತ್ತಾನೆ ಎನ್ನುವುದು ಪುರಾಣ ಕತೆ. ಅಲ್ಲಿಂದ “ವಾಸವಾಪುರಿ’ಯು ರಾಮನಾಥ ಪುರವಾಗಿ ಬದಲಾಯಿತು ಎನ್ನಲಾಗುತ್ತದೆ. ಅದಕ್ಕೂ ಮುಂಚೆಯೂ ಶ್ರೀರಾಮ, ವಾನರ ಸೇನೆಯೊಂದಿಗೆ ಇಲ್ಲಿಗೆ ಬಂದಿದ್ದನೆಂಬ ಮಾತುಗಳೂ ಇವೆ.
ಗಾಯತ್ರಿ ಚಂದ್ರಶೇಖರ್