ಕೆಂಪು ತಲೆ ರಣ ಹದ್ದು 


Team Udayavani, Jan 26, 2019, 1:15 AM IST

15.jpg

ಕೆಂಪು ತಲೆ ರಣಹದ್ದನ್ನು ಹಳ್ಳಿಯ ಜನ ರಾಜ-ರಾಣಿ ಎಂದು ಕರೆಯುತ್ತಾರೆ. ದೊಡ್ಡ ಮರಗಳ ತುದಿಯಲ್ಲಿ ಇದು ದೊಡ್ಡ ಗೂಡು ಕಟ್ಟುತ್ತದೆ. Red-Headed Vulture (Sarcogyps calvus ) R  Peacocks +ಈಚಿನ  ದಿನಗಳಲ್ಲಿ ಈ ಪಕ್ಷಿಯ ಸಂತತಿ ಕಡಿಮೆಯಾಗುತ್ತಿದೆ.  

  ಭಾರತದ ರಣಹದ್ದುಗಳ ಪಾಲಿನ ರಾಜ ಅಂದರೆ ಕೆಂಪು ತಲೆ ರಣ್ಣಹದ್ದು.  ಗಾತ್ರದಲ್ಲಿ ಇದು ಟರ್ಕಿ ಕೋಳಿಯಷ್ಟು ದೊಡ್ಡದಾಗಿದೆ. ಇದರ ಕುತ್ತಿಗೆ ಸಹ ಉದ್ದವಾಗಿದೆ.  ಇದು ‘ಎಸಿಪಿಟ್ರಿಡಿಯಾ’ ಕುಟುಂಬಕ್ಕೆ ಸೇರಿದ ಪಕ್ಷಿ. ಈಗಲ್‌, ಕೈಟ್ಸ್‌, ಹವಾಕ್‌ ಈ ಎಲ್ಲಾ ಗುಂಪಿನ ಹಕ್ಕಿಗಳು ಈ ಕುಟುಂಬಕ್ಕೆ ಸೇರಿವೆ.  ಸುಮಾರು 2000 ಕಿ.ಮೀ. ಎತ್ತರದ ಪರ್ವತ ಪ್ರದೇಶ ಮತ್ತು ಮರಗಳಿರುವ ಕಾಡುಗಳೇ ಇದರ ಇರು ನೆಲೆ. 

ಸತ್ತ ಪ್ರಾಣಿಗಳನು,° ಅದರಲ್ಲೂ ಸತ್ತ ಹಸುಗಳ ಮತ್ತು ರಾಸುಗಳ ಮಾಂಸವನ್ನು ತಿನ್ನುವುದು ಎಂದರೆ ರಣ ಹದ್ದಿಗೆ ಎಲ್ಲಿಲ್ಲದ ಖುಷಿ.  ಇದು ಸಾಮಾನ್ಯವಾಗಿ ಬೇಟೆಯಾಡುವುದು ಕಡಿಮೆ.  ಈ ಹತ್ತು ವರ್ಷದಲ್ಲಿ ಇದರ ಸಂತತಿ ಮತ್ತು ಇರುನೆಲೆ ಗಣನೀಯವಾಗಿ ಇಳಿಕೆಯಾಗಿದೆ.  ಅಚ್ಚ ಗುಲಾಬಿ ಬಣ್ಣದ ಕುತ್ತಿಗೆ, ತಲೆ ಕಾಲು ಇದಕ್ಕಿದೆ. ಬಲವಾದ ಚುಂಚು ಇದೆ.  ಅದರ ಬುಡದಲ್ಲಿ ಗುಲಾಬಿ -ಕೆಂಪು ಬಣ್ಣವಿದ್ದರೂ ತುದಿಯಲ್ಲಿ ಬೂದು ಬಣ್ಣದ -ಅರ್ಧ ಕೊಕ್ಕು ಸೇರಿಸಿದಂತೆ ಭಾಸವಾಗುತ್ತದೆ. ಹೀಗಾಗಿ, ಮಾಂಸವನ್ನು ಹರಿದು ತಿನ್ನಲು ಅನುಕೂಲವಾಗಿದೆ.  ಇದರ ಕುತ್ತಿಗೆ ಉದ್ದವಾಗಿದ್ದು,  ಎರಡೂ ಪಾರ್ಶ್ವದಲ್ಲಿ ಗುಲಾಬಿ-ಕೆಂಪು ಬಣ್ಣದ ಚರ್ಮವಿದೆ. ನೋಡಲು ಗಂಡು,  ಹೆಣ್ಣು ಎರಡೂ ಒಂದೇ ರೀತಿ ಇರುತ್ತದೆ.  ಆದರೆ,  ಹೆಣ್ಣು ಹಕ್ಕಿಯ ಕಣ್ಣು- ಅಚ್ಚ ಕಪ್ಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ.  ರೆಕ್ಕೆಯೂ ಕೂಡ ಇದೇ ಬಣ್ಣದಿಂದ ಕೂಡಿರುತ್ತದೆ.   ಅದರ ತುದಿಯಲ್ಲಿ -ತಿಳಿ ಬೂದು ಮಿಶ್ರಿತ ಕಂದುಬಣ್ಣದ ಗರಿ ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ.   ರೆಕ್ಕೆಯ ಬುಡದಲ್ಲಿರುವ ಚಿಕ್ಕ ಗರಿ ಕಪ್ಪಾಗಿರುತ್ತದೆ. 

 ಕಾಲಿನ ಬಣ್ಣ ಕೆಂಪು.  ಮೊಳಕಾಲಿನ ಭಾಗದಲ್ಲಿ ಕಪ್ಪು ಗರಿವ್ಯಾಪಿಸಿದೆ. ಕೆಳಕಾಲು ಮತ್ತು ಬೆರಳಿನಲ್ಲಿ ಗರಿಗಳಿಲ್ಲದ ಬೋಳಾದ ಕೆಂಪು ಚರ್ಮವು ಎದ್ದು ಕಾಣುತ್ತದೆ.  ಕಾಲು ಸ್ವಲ್ಪ ಕುಳ್ಳು. ಆದರೆ ದಪ್ಪನಾಗಿದೆ.  ಕಾಲಿನ ಬೆರಳಿನಲ್ಲಿ ಬೂದು ಬಣ್ಣದ ಚೂಪಾದ ಉಗುರಿದೆ.  ಹಾರುವಾಗ ರೆಕ್ಕೆಯ ಅಡಿಯಲ್ಲಿ ಕಾಣುವ – ಬಿಳಿ ಗೆರೆ ಮತ್ತು ತೊಡೆ ಮತ್ತು ಕುತ್ತಿಗೆ ಬುಡದಲ್ಲಿರುವ ಬಿಳಿ ಮಚ್ಚೆ ಇದನ್ನು ಗುರುತಿಸುವ ಚಿಹ್ನೆ. ಇದರ ಸ್ಥೂಲ ಆಕಾರ ಮತ್ತು ಬಣ್ಣ ನೋಡಿ ಇದನ್ನು ಇತರೆ ರಣ ಹದ್ದಿಗಿಂತ ಭಿನ್ನ ಎಂದು ಗುರುತಿಸಬಹುದು. 

 ಹಳ್ಳಿಗರು ಇದನ್ನು ರಾಜ ರಾಣಿ ಅಂತ ಕರೆಯುತ್ತಾರೆ.  ಇದರ ಕುತ್ತಿಗೆ ಹಿಂಭಾಗದಲ್ಲಿ ಕಪ್ಪು ಗರಿ ಕುತ್ತಿಗೆಗೆ ಆಧಾರ ಆಗಿರುವ ಪೇಡ್‌ ನಂತೆ ಭಾಸವಾಗುತ್ತದೆ. ಕಾಗೆ, ಸತ್ತ ದನದ ಕಣ್ಣನ್ನು ಒಯ್ಯುವುದು ಈ ಹದ್ದಿಗೆ ಕಾಣಿಸುತ್ತದೆ. ಆಗ ಮೊದಲು ಈ ರಾಜಾ -ರಾಣಿ ಹದ್ದು ಬರುತ್ತದೆ. ಹೀಗೆ ಬಂದ ಈ ಲೀಡರ್‌, ಮೊದಲ ಮಾಂಸದ ಭೋಜನ ಸವಿಯುವುದು. ಅನಂತರ ಉಳಿದದ್ದು ತನ್ನ ಗುಂಪಿನಲ್ಲಿರುವ ಸೇವಕ, ಗುಂಪಿನ ಒಡೆಯ, ರಕ್ಷಕ, ಸಾಮಾನ್ಯ ಪ್ರಜೆ ಈ ರೀತಿಯ ಅದರ ಕೆಟಗರಿಗೆ ಅನುಗುಣವಾಗಿ ಸತ್ತ ಪ್ರಾಣಿಗಳನ್ನು ತಿನ್ನುತ್ತದೆ.   

ಈಗೀಗ  ಕೆಂಪು ರಣಹದ್ದುಗಳ ಇದರ ಸಂತತಿಯೇ ಕಡಿಮೆಯಾಗುತ್ತಿದೆ. ಸತ್ತ ದನ ಹಸುಗಳನ್ನು ಈಗ ಎಸೆಯುವುದಿಲ್ಲ . ಅದರಿಂದ ಆಹಾರದ ಕೊರತೆ ಮತ್ತು ಭತ್ತದ ಪೈರಿಗೆ ಸಿಂಪಡಿಸುವ ಕೀಟ ನಾಶಕ ದನದ ಮಾಂಸದ ಮೂಲಕ ಇದರ ದೇಹ ಸೇರಿ ಅಳಿವಿಗೆ ಕಾರಣವಾಗುತ್ತಿದೆ ಎನ್ನುವ ವಾದವಿದೆ. 

  ಈ ಹಕ್ಕಿ ಭಿನ್ನ ರೀತಿಯಲ್ಲಿ ಹಾರುತ್ತದೆ.  ಕೆಲವೊಮ್ಮ ಗಾಳಿಯಲ್ಲಿ ತೇಲುತ್ತಾ ಭೂಮಿಯ ಮೇಲಿರುವ ತನ್ನ ಆಹಾರ ಗುರುತಿಸುವಷ್ಟು ಇದರ ನೋಟ ಸೂಕ್ಷ್ಮವಾಗಿದೆ. ದೊಡ್ಡ ಮರದ ತುತ್ತ ತುದಿಯಲ್ಲಿ ಗೂಡು ಕಟ್ಟುತ್ತದೆ. ಡಿಸೆಂಬರ್‌-ಏಪ್ರಿಲ್‌ ಇದು ಮರಿಮಾಡುವ ಸಮಯ.  10-15 ಮೀ ಎತ್ತರದ ಮರದ ತುದಿಯಲ್ಲಿ ಕಟ್ಟಿಗೆ ಕೋಲನ್ನು ಸೇರಿಸಿ ದೊಡ್ಡ ಗೂಡನ್ನು ಕಟ್ಟುತ್ತದೆ. ಅದರಲ್ಲಿ ಒಂದೇ ಒಂದು ಮೊಟ್ಟೆ ಇಡುತ್ತದೆ. 

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.