ಸಭ್ಯ ಜೀವನದಿಂದ ಸಮ್ಯಕ್‌ ದರ್ಶನ


Team Udayavani, Oct 5, 2019, 3:07 AM IST

sabhya

ತತ್ವವನ್ನು ವಸ್ತು ಸ್ವರೂಪದಿಂದ ಯುಕ್ತವಾದ, ಜೀವಾದಿ ಪದಾರ್ಥಗಳ ಶ್ರದ್ಧೆ ಇಡುವುದಕ್ಕೆ “ಸಮ್ಯಕ್‌ ದರ್ಶನ’ ಎನ್ನುತ್ತಾರೆ. ಸಮ್ಯಕ್‌ ದರ್ಶನ, ಧರ್ಮದ ಮೂಲಸ್ತಂಭವಾಗಿದೆ. “ಸಮ್ಯಕ್‌’ ಎಂದರೆ, ನಿಜವಾದ, ಯಥಾರ್ಥವಾದ, ವಾಸ್ತವವಾದ ಶ್ರದ್ಧೆ. ಇದರ ಅಭಾವವಾದರೆ, ಜ್ಞಾನವು ಸಮ್ಯಕ್‌ ಆಗದು. ಚಾರಿತ್ರ್ಯವೂ ಆಗದು. ಮುಕ್ತಿಯ ಮಹಲಿಗೆ ಸಮ್ಯಕ್‌ ದರ್ಶನ ಪ್ರಥಮ ಮೆಟ್ಟಿಲು. ಇದು ನಮ್ಮ ವಿಚಾರಕೇಂದ್ರೀಯ ಆಧಾರ ಸ್ತಂಭವಾಗಿದೆ.

ಆಚಾರದ ವಿಶುದ್ಧಿಗಾಗಿ, ವಿಚಾರ ಶುದ್ದಿಯು ಅನಿವಾರ್ಯವಾಗಿದೆ. ಸಮ್ಯಕ್‌ ದರ್ಶನ ಮತ್ತು ಸಮ್ಯಕ್‌ ಚಾರಿತ್ರ್ಯದಲ್ಲಿ ಅಂಕಿ ಮತ್ತು ಶೂನ್ಯಕ್ಕಿರುವ ಸಂಬಂಧ‌ವಿದೆ. ಎಷ್ಟೇ ಶೂನ್ಯಗಳಿದ್ದರೂ ಅಂಕಿಗಳಿಲ್ಲದಿದ್ದರೆ, ಅದಕ್ಕೆ ಯಾವ ಮಹತ್ವವೂ ಇರುವುದಿಲ್ಲವೋ ಹಾಗೆ. ಸಮ್ಯಕ್‌ ದರ್ಶನವು ಅಂಕಿ ಇದ್ದಂತೆ ಮತ್ತು ಸಮ್ಯಕ್‌ ಚಾರಿತ್ರ್ಯವು ಶೂನ್ಯವಿದ್ದಂತೆ. ಎರಡೂ ಇರಲೇಬೇಕು. ಸಮ್ಯಕ್‌ ದರ್ಶನದಿಂದಲೇ ಸಮ್ಯಕ್‌ ಚಾರಿತ್ರ್ಯದ ತೇಜಸ್ಸು ಕಂಗೊಳಿಸುವುದು.

ಸಮ್ಯಕ್‌ ದರ್ಶನ ರಹಿತ ಚಾರಿತ್ರ್ಯವೆಂದರೆ, ಕಣ್ಣಿಲ್ಲದ ವ್ಯಕ್ತಿಯಂತೆ ಅವನು ನಿರಂತರ ನಡೆಯಬಹುದು. ಆದರೆ, ಗುರಿಯ ಕಲ್ಪನೆ ಇರುವುದಿಲ್ಲ. ಲಕ್ಷ್ಯವಿಲ್ಲದ ಪಯಣ ವ್ಯರ್ಥ ಕಾಲ ಹರಣದಂತೆ ಶರೀರಕ್ಕೊಂದು ವೃಥಾ ಶ್ರಮ. ಸ್ವಭಾವದಿಂದ ಅಧಿಗಮ ಅಂದರೆ, ಪರೋಪ ದೇಶದಿಂದ ಸಮ್ಯಕ್‌ ದರ್ಶನ ಉತ್ಪನ್ನವಾಗುತ್ತದೆ. ತನ್ನ ಸ್ವಭಾವದಿಂದ ಅಂದರೆ, ಪರೋಪ ದೇಶ ಇಲ್ಲದೆಯೇ ಪೂರ್ವ ಭವ ಸಂಸ್ಕಾರದಿಂದ ಉತ್ಪನ್ನವಾಗುವ ಸಮ್ಯಕ್‌ ದರ್ಶನಕ್ಕೆ “ಅಧಿಗಜ ಸಮ್ಯಕ್‌ ದರ್ಶನ’ ಎಂದು ಹೇಳುವರು.

ಈ ಎರಡೂ ಸಮ್ಯಕ್ತವೇ ಆಗಿದೆ. ಮಾನವ ಜೀವಿಗೆ ಮಿಥ್ಯಾತ್ವ, ಸಮ್ಯಕ್‌ ಮಿಥ್ಯಾತ್ವ, ಸಮ್ಯಕ್‌ ಪ್ರಕೃತಿ, ಅನಂತಾನುಬಂಧಿ, ಕ್ರೋಧ, ಮಾನ, ಮಾಯ, ಲೋಭ- ಈ ಏಳು ಕರ್ಮ ಪ್ರಕೃತಿಗಳ ಉಪಶಮ, ಕ್ಷಯ ಅಥವಾ ಕ್ಷಯೋಪಶಮವನ್ನು ಹೊಂದಲೇಬೇಕು. ಇದು ಅನಿವಾರ್ಯ. ವಿಭಿನ್ನ ದೃಷ್ಟಿಯಿಂದ ಸಮ್ಯಗ್ಧರ್ಶನದ ವಿಭಿನ್ನ ಲಕ್ಷಣಗಳನ್ನು ಹೇಳಿರುವರು.

ಅವು: 1. ಪರಮಾರ್ಥಭೂತ (ದೇವ, ಶಾಸ್ತ್ರ ಮತ್ತು ಗುರುಗಳಲ್ಲಿ ಮೂರು ಮೂಢತೆ ಮತ್ತು 8 ಮದಗಳಿಂದ ರಹಿತನಾಗಿ ಹಾಗೂ 8 ಅಂಗಗಳಿಂದ ಯುಕ್ತವಾಗಿ ಶ್ರದ್ಧೆ ಇಡುವುದು); 2:- ನೈಜ ತತ್ತ್ವದ ವಿಶ್ವಾಸ, ಶ್ರದ್ಧೆ; 3. ಸ್ವಪರದಲ್ಲಿ ಶ್ರದ್ಧೆ, 4. ಆತ್ಮದಲ್ಲಿ ಶ್ರದ್ಧೆ.

* ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಮಠ, ಮೂಡಬಿದ್ರಿ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.