ಸಂತೆ ಬಾಚಹಳ್ಳಿಯ ಮಹಾಲಿಂಗೇಶ್ವರ ದೇವಾಲಯ 


Team Udayavani, Dec 9, 2017, 12:43 PM IST

1-bgg.jpg

ಕೆ.ಆರ್‌ ಪೇಟೆಯಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕಪಟ್ಟಣ ಸಂತೆಬಾಚಹಳ್ಳಿ.   ಇಲ್ಲಿ  ಹೊಯ್ಸಳರ ಕಾಲದ  ಸುಂದರವಾದ  ಮಹಾಲಿಂಗೇಶ್ವರ ದೇವಾಲಯವಿದೆ.   ಊರ ಹೊರ ಭಾಗದಲ್ಲಿ  ಸುಂದರವಾದ  ಪ್ರಕೃತಿ ಸೌಂದರ್ಯದ  ಮಧ್ಯೆ  ಹೊಯ್ಸಳರ  ಕಾಲದ  ಏಕಕೂಟ  ಮಹಾಲಿಂಗೇಶ್ವರ  ದೇವಾಲಯವು   ಶೋಭಾಯಮಾನವಾಗಿದೆ.   ಈ ದೇವಾಲಯವು ಗರ್ಭಗೃಹ, ಶುಕನಾಸಿ ಹಾಗೂ ಒಂಭತ್ತು  ಅಂಕಣದ  ನವರಂಗವನ್ನು  ಹೊಂದಿದೆ.

ಈ ದೇವಾಲಯದಲ್ಲಿ  ಮೂರ್ತಿಗಳನ್ನು  ಹೊಂದಿರುವ  ಮೂರು ಹಂತದ  ಶಿಖರಗಳಿವೆ.  ಇವು ದೇವಾಲಯದ  ಬಾಹ್ಯ ಸೌಂದರ್ಯವನ್ನು   ಹೆಚ್ಚಿಸಿವೆ. ಅವುಗಳಲ್ಲಿ ಪ್ರಮುಖವಾಗಿ  ಉಗ್ರನರಸಿಂಹ,  ವೇಣುಗೋಪಾಲ,  ತಾಂಡವೇಶ್ವರ,   ಉಮಾಮಹೇಶ್ವರ, ಭೈರವ, ಲಕ್ಷ್ಮೀ ನಾರಾಯಣನ  ವಿಗ್ರಹಗಳು  ಭಕ್ತಾದಿಗಳನ್ನು   ಆಕರ್ಷಿಸುತ್ತಿವೆ.

ತ್ರಿಮೂರ್ತಿಗಳು ಒಂದೇ ಕಡೆ ಇರುವುದು  ಮಹಾಲಿಂಗೇಶ್ವರ   ದೇವಾಲಯದ  ಮತ್ತೂಂದು ಪ್ರಮುಖ ಆಕರ್ಷಣೆ.    ದೇಗುಲದ ನವರಂಗದ  ಉತ್ತರದ ಸಣ್ಣಗುಡಿಯಲ್ಲಿ ಮಹಾವಿಷ್ಣುವಿನ ವಿಗ್ರಹವಿದ್ದರೆ, ದಕ್ಷಿಣದ ಗುಡಿಯಲ್ಲಿ  ಚತುರ್ಮುಖ  ಬ್ರಹ್ಮನ ಮೂರ್ತಿ ಇದೆ.   ಇವೆರಡರ  ಮಧ್ಯಭಾಗದಲ್ಲಿ ಪ್ರಧಾನ ಗರ್ಭಗೃಹವಿದ್ದು  ಇಲ್ಲಿ ಶ್ರೀ ಮಹಾಲಿಂಗೇಶ್ವರ ಲಿಂಗರೂಪದಲ್ಲಿ ನೆಲಸಿದ್ದಾನೆ. ಹೀಗಾಗಿ ಇದೊಂದು  ತ್ತೈಪುರುಷ ದೇವಾಲಯವೂ  ಆಗಿದೆ. ಇಲ್ಲಿರುವ  ನವರಂಗದ  ನಾಲ್ಕು ಕಂಬಗಳ ಮೇಲೆ ಸೂಕ್ಷ್ಮ ರೀತಿಯಲ್ಲಿ ಬಳ್ಳಿ, ಹೂಗಳು,ಮಣಿಸರಗಳು, ವಜ್ರಾಕೃತಿಗಳ ಚಿತ್ತಾರಗಳಿದ್ದು  ನೋಡುಗರನ್ನು ಸೆಳೆಯುತ್ತಿವೆ. ನವರಂಗದಲ್ಲಿ 9 ಭುವನೇಶ್ವರಿಗಳಿದ್ದು ವಿಶಿಷ್ಟವಾಗಿ ವಿನ್ಯಾಸಗೊಂಡಿವೆ.

ಇಷ್ಟೆಲ್ಲಾ  ವಿಶೇಷತೆಗಳಿಂದ  ಕೂಡಿದ ಮಹಾಲಿಂಗೇಶ್ವರ  ದೇವಾಲಯದಲ್ಲಿ  ಕಾರ್ತಿಕ ಸೋಮವಾರಗಳು  ಹಾಗೂ ಮಹಾಶಿವರಾತ್ರಿ  ದಿನಗಳಲ್ಲಿ  ವಿಶೇಷ  ಪೂಜೆಗಳು  ಜರುಗುತ್ತವೆ.  ಪ್ರತಿ ವರ್ಷ  ದೀಪಾವಳಿ  ಅಮವಾಸ್ಯೆಯಂದು ಲಕ್ಷ  ದೀಪೋತ್ಸವ ನಡೆಯುತ್ತದೆ. ಈ ದೇವಾಲಯಕ್ಕೆ ಹೊಂದಿಕೊಂಡಂತೆ  ಪಾರ್ವತಿ ದೇವಿಗೆ ಪ್ರತ್ಯೇಕ ಗರ್ಭಗುಡಿ ಇದೆ. 

ಸಂತೇಬಾಚಹಳ್ಳಿಯು  ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿದೆ.  ನಾಗಮಂಗಲ-ಕೆ.ಆರ್‌.ಪೇಟೆ ರಸ್ತೆಯಲ್ಲಿ  ನಾಗಮಂಗಲದಿಂದ ಸುಮಾರು 2 4 ಕಿ.ುà ಬಂದರೆ ಸಂತೇಬಾಚಹಳ್ಳಿ  ಹ್ಯಾಂಡ್‌ಪೊಸ್ಟ್‌  ಸಿಗುತ್ತದೆ.   ಅಲ್ಲಿ   ಬಲಕ್ಕೆ ತಿರುಗಿ 3 ಕಿ.ಮೀ  ಕ್ರಮಿಸಿ ಮಹಾಲಿಂಗೇಶ್ವರ  ದೇವಾಲಯ ತಲುಪಬಹುದು.

ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.