ಟೆನಿಸ್‌ ಅಂಕಣದಲ್ಲಿ ಮತ್ತೆ ಸೆರೆನಾ,ಜೊಕೊ


Team Udayavani, Dec 9, 2017, 12:31 PM IST

1-nhh.jpg

ಸದ್ಯ ಟೆನಿಸ್‌ ಪ್ರೇಮಿಗಳಲ್ಲಿ ಇಂಥದೊಂದು ಯೋಚನೆ ಹುಟ್ಟಿಕೊಂಡಿದೆ. ಯಾಕೆಂದರೆ ವರ್ಷಗಳ ಕಾಲ ಅಂಕಣದಿಂದ ಹೊರಗುಳಿದಿದ್ದ ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, 12 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ನೊವಾಕ್‌ ಜೊಕೊವಿಚ್‌ ಪುನಃ ಕೋರ್ಟ್‌ ಗೆ ಮರಳಲು ಸಜ್ಜಾಗಿದ್ದಾರೆ. 

ಆಸ್ಟ್ರೇಲಿಯಾ ಓಪನ್‌ಗೆ ಸೆರೆನಾ?
23 ಗ್ರ್ಯಾನ್‌ಸ್ಲಾಮ್‌ಗಳ ಒಡತಿಯಾದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮದುವೆ, ಮಗು ಅಂತ  ಒಂದು ವರ್ಷಗಳ ಕಾಲ ಟೆನಿಸ್‌ ಕೋರ್ಟ್‌ನಿಂದ ದೂರ ಇದ್ದರು. 2017ರ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಸೆರನಾ ಆಡಿರುವ ಕೊನೆಯ ಅಂತಾರಾಷ್ಟ್ರೀಯ ಟೂರ್ನಿ. ಇದೀಗ ಮತ್ತೆ ಟೆನಿಸ್‌ ಅಭ್ಯಾಸ ಆರಂಭಿಸಿರುವ ಅವರು, 2018ರ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಇದು ಸಹಜವಾಗಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹವನ್ನೂ ಪ್ರತಿಸ್ಪರ್ಧಿಗಳಿಗೆ ನಡುಕವನ್ನೂ ಹುಟ್ಟಿಸಿದೆ.

ಮಾಜಿ ವಿಶ್ವ ನಂ.1 ಶ್ರೇಯಾಂಕಿತ ಆಟಗಾರ್ತಿಯಾದ ಸೆರೆನಾ, ಈವರೆಗೆ 23 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ 7 ಆಸ್ಟ್ರೇಲಿಯಾ ಓಪನ್‌, 3 ಫ್ರೆಂಚ್‌ ಓಪನ್‌, 7 ವಿಂಬಲ್ಡನ್‌, 6 ಯುಎಸ್‌ ಓಪನ್‌ ಸೇರಿವೆ. ಎದುರಾಳಿ ಆಟಗಾರ್ತಿಯರು ನಡುಗುವಂಥ ಬಲಾಡ್ಯ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಸೆರೆನಾಗಿದೆ.

ಜೊಕೊ ಕೂಡ ಮರಳುವ ಸಾಧ್ಯತೆ
ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ಆ್ಯಂಡಿ ಮರ್ರೆ, ಸ್ಟಾನ್‌ ವಾವ್ರಿಂಕಾ…. ಇಂತಹ ಬಲಾಡ್ಯ ಆಟಗಾರರಿಗೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಇರುವ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌. ಭುಜದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಕಳೆದ  ವಿಂಬಲ್ಡನ್‌ ಆಡಿರುವುದೇ ಕೊನೆ. ಆಮೇಲೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ವೈದ್ಯರ ಸಲಹೆಯಂತೆ ದೀರ್ಘಾವಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಂಡಿರುವ ಅವರು, ಪುನಃ ಟೆನಿಸ್‌ ಕೋರ್ಟ್‌ಗೆ ಮರಳುವ ಸಾಧ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಓಪನ್‌ ವೇದಿಕೆಯಾದರೂ ಆಗಬಹುದು.

2017ರಲ್ಲಿ ಹಳೇ ಹುಲಿಗಳದ್ದೇ ಕಾದಾಟ
2017ರ ಅವಧಿಯಲ್ಲಿ ಟೆನಿಸ್‌ ಅಂಗಳದಲ್ಲಿ ಅಬ್ಬರಿಸಿದ್ದು, ಹಳೇ ಹುಲಿಗಳು. ಆಸ್ಟ್ರೇಲಿಯಾ ಓಪನ್‌ನಲ್ಲಿ ನಡೆದ ಫೈನಲ್‌ನಲ್ಲಿ ಭರ್ಜರಿ ಹೋರಾಟ ನಡೆಸಿದ್ದು, ರೋಜರ್‌ ಫೆಡರರ್‌ ಮತ್ತು ರಾಫೆಲ್‌ ನಡಾಲ್‌. ಇಬ್ಬರೂ ಖ್ಯಾತ ಆಟಗಾರರು. ಆದರೆ ಮರ್ರೆ, ಜೊಕೊ, ವಾವ್ರಿಂಕಾ ಕೈಚಳಕ ಆರಂಭವಾದ ಮೇಲೆ ಇವರ ಪ್ರಭಾವ ಕುಗ್ಗಿತ್ತು. ಆದರೆ 2017 ಹಳೇ ಹುಲಿಗಳಿಗೆ ಮರುಜೀವ ನೀಡಿದೆ. ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ನಡಾಲ್‌ಗೆ ಸೋಲುಣಿಸಿದ ಫೆಡರರ್‌ 5 ವರ್ಷಗಳ ನಂತರ ಪುನಃ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಪಡೆದರು. ಆನಂತರ ಫ್ರೆಂಚ್‌ ಓಪನ್‌ನಲ್ಲಿ ವಾವ್ರಿಂಕಾಗೆ ಸೋಲುಣಿಸಿದ ನಡಾಲ್‌ ಟ್ರೋಫಿ ಎತ್ತಿದರು. ಹಾಗೇ ವಿಂಬಲ್ಡನ್‌, ಯುಎಸ್‌ ಓಪನ್‌ನಲ್ಲಿಯೂ ಫೆಡರರ್‌ ಜಯ ಸಾಧಿಸಿದರು. ವರ್ಷದಲ್ಲಿ ನಡೆಯುವ 4 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ನಾಲ್ಕೂ ಪ್ರಶಸ್ತಿಯನ್ನು ಫೆಡರರ್‌, ನಡಾಲ್‌ ಪಡೆದಿರುವುದು ವಿಶೇಷ.

ರೋಚಕತೆ ಯಾಕೆ?
ಟೆನಿಸ್‌ನಲ್ಲಿ ತೀವ್ರ ಹಣಾಹಣಿ ಇದ್ದರೆ ಮಾತ್ರ ರೋಚಕತೆ ಹುಟ್ಟಿಕೊಳ್ಳುತ್ತೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಾರೆ. ಫೆಡರರ್‌, ನಡಾಲ್‌, ಮರ್ರೆ… ಇಂತಹ ದಿಗ್ಗಜರಿಗೆ ಸವಾಲು ನೀಡಬೇಕು ಅಂದರೆ ಜೊಕೊ ಕೋರ್ಟ್‌ಗೆ ಬರಲೇಬೇಕು. ಹಾಗೆಯೇ ಮಹಿಳೆ ಆಟಗಾರ್ತಿಯರಲ್ಲಿ ಸಿಮೊನಾ ಹಾಲೆಪ್‌, ಯುಂಗ್‌ ಜಾನ್‌ಚಾಂಗ್‌, ಗಾರ್ಬಿಯನ್‌ ಮುಗುರುಜ, ಕ್ಯಾರೊಲಿನ್‌ ಒಜ್ನಿಯಾಕಿ… ಇವರ ಗೆಲುವಿನ ಓಟಕ್ಕೆ ತಡೆ ನೀಡಬೇಕಾದರೆ ಅಲ್ಲಿ ಸೆರೆನಾ ವಿಲಿಯಮ್ಸ್‌ ಇರಲೇಬೇಕು.

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.