ಅಣಜಿಗೆ ವಲಸೆ ಬಂದ ಮಾರಮ್ಮ


Team Udayavani, Oct 20, 2018, 2:19 PM IST

1-asdsad.jpg

ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಶಕ್ತಿ ದೇವತೆ ಮಾರಮ್ಮ ಅತ್ಯಂತ ಪ್ರಭಾವಿ ಅದಿ ದೇವತೆ ಎನ್ನುವ ನಂಬಿಕೆ ಇದೆ. ಧರ್ಮ ಮತ್ತು ಜಾತಿ ಭೇದವಿಲ್ಲದೇ ಎಲ್ಲರೂ ಈ ದೇವಿಗೆ ನಡೆದುಕೊಳ್ಳುವುದೇ ಇದಕ್ಕೆ ಕಾರಣ. ಗಡಿ ಮೀರಿ ಭಕ್ತರ ಮನೆ ಮನೆಗಳಲ್ಲಿ ನೆಲೆಸಿರುವ ಈ ದೇವಿಯ ಪುಷ್ಪ ಪ್ರಸಾದ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುವ ಅಸಂಖ್ಯಾತ ಭಕ್ತರಿದ್ದಾರೆ.  ಹೂವಿನ ಪ್ರಸಾದ ರೂಪದಲ್ಲಿ ದೇವಿ ನೀಡುವ ಅನುಗ್ರಹ ಮತ್ತು ಹೇಳಿಕೆಯೇ ಭಕ್ತರಿಗೆ ಅಂತಿಮ.

  ಅಂದಹಾಗೆ, ಈ ದೇವಿ ಮೂಲತಃ ಇಲ್ಲಿಯವಳಲ್ಲ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ನಾಣ್ಯಕೆರೆ, ಈಕೆಯ ಮೂಲವಂತೆ. ಕಾಲನಂತರ ಈಕೆ ಭಕ್ತರಿಂದ ಉಪೇಕ್ಷಿಸಲ್ಪಟ್ಟು, ನೊಂದು ನಾಣ್ಯಕೆರೆ ತೊರೆದು ಬಂದಿದ್ದು ಅಣಜಿ ಸಮೀಪದ ಗಿರಿಯಾಪುರದ ಆರಾಧ್ಯದೈವ ಆಂಜನೇಯನ ಬಳಿ. ಆಂಜನೇಯನಲ್ಲಿ ತನಗೂ ಗ್ರಾಮದಲ್ಲಿ ನೆಲೆಸಲು ಜಾಗ ಕೇಳಿದಳೆಂದೂ, ಆಂಜನೇಯನು “ಇದು ಸಣ್ಣ ಊರು. ಹಾಗಾಗಿ ನೀನು ಸಮೀಪದಲ್ಲಿ ಏಳು ಸಾವಿರ ಮನೆ ಇರುವ ಅಣಜಿ ಗ್ರಾಮದಲ್ಲಿ, ನನ್ನ ತಂಗಿ ಕೆರೆ ಹೊನ್ನಮ್ಮಳಿದ್ದಾಳೆ. ಅವಳನ್ನು ಹೋಗಿ ಕೇಳು. ಅಣಜಿಯಲ್ಲಿ ಜಾಗವಿದೆಯಾ ಎಂದು’ ಅಂತ ಹೇಳಿ ಕಳುಹಿಸಿದನಂತೆ. 

  ಕೆರೆ ಹೊನ್ನಮ್ಮಳನ್ನು ಭೇಟಿ ಆದ ಮಾರಮ್ಮಳಿಗೆ ಹೊನ್ನಮ್ಮ ದೇವಿಯು “ನನ್ನ ಜಾತ್ರೆಯಲ್ಲಿ ನಿನ್ನ ಜಾತ್ರೆ, ನನ್ನ ಹಬ್ಬದಲ್ಲಿ ನಿನ್ನ ಹಬ್ಬ ನಡೆಯುವುದಾದರೆ ಇಲ್ಲಿ ನೆಲೆಸು. ನಿನಗೆ ಇದು ಒಪ್ಪಿಗೆಯೇ?’ ಅಂತ ಕೇಳಿದಳಂತೆ. ಮಾರಮ್ಮ ಅದಕ್ಕೆ ಸಮ್ಮತಿಸಿ ಅಣಜಿಯಲ್ಲೇ ನೆಲೆಸಿದಳು ಎನ್ನುವುದು ಜನಪದ ನಂಬಿಕೆ. ಅದರಂತೆ ಇಂದಿಗೂ ಕೆರೆಹೊನ್ನಮ್ಮ ಮತ್ತು ಮಾರಮ್ಮ ದೇವಿಯವರು ಅಕ್ಕ- ತಂಗಿಯರೆಂದು ಜನ ನಂಬಿದ್ದಾರೆ. ಇಬ್ಬರ ಉತ್ಸವ, ಜಾತ್ರೆಗಳು ಜತೆ ಜತೆಯಲ್ಲೇ ಜರುಗುತ್ತವೆ. ಅಷ್ಟೇ ಅಲ್ಲ, ಮಾರಮ್ಮ ದೇವಿಯ ಪ್ರಾಣಿ ಬಲಿ, ನೈವೇದ್ಯ ಪರಂಪರೆ ನಾಣ್ಯಕೆರೆಯಲ್ಲೇ ಕೊನೆಗೊಂಡಿತು.

ಮಳೆ ಸುರಿಸುವ ದೇವತೆ!
 ಮಳೆ- ಬೆಳೆ ಆಗದಿದ್ದಾಗ, ಊರಿಗೆ ಕೇಡು ಆಗುತ್ತಿದೆ ಎನ್ನುವಾಗ ಭಕ್ತರು ದೇವಿಯ ಸಲಹೆ ಪಡೆಯುತ್ತಾರೆ. ಈ ವೇಳೆ ಹಾಗೂ ಭಕ್ತರು ತಮ್ಮ ಶ್ರೇಯಸ್ಸಿಗಾಗಿ ದೇವಿಯನ್ನು ಹೊರಡಿಸುವ ಪರಿಪಾಠ ಇಲ್ಲಿದೆ. ನಂತರ ಊರಿಗೆ ಮಳೆಯಾದ ನಿದರ್ಶನಗಳೂ ಇವೆ. ದೀಪಾವಳಿ, ಕಾರ್ತೀಕ ಮತ್ತು ದಸರಾದಂಥ ಹಬ್ಬ ಹರಿದಿನಗಳಲ್ಲಿ ಗ್ರಾಮದ ದುರುಗಮ್ಮ, ಮಾರಮ್ಮ, ಬೀರಪ್ಪ, ಆಂಜನೇಯ ಈ ನಾಲ್ಕು ದೇವರುಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಲಾಗುತ್ತದೆ. ದೇವಿಗೆ ಹೂವಿನ, ಬೆಳ್ಳಿಯ ವಿಶೇಷ ಅಲಂಕಾರ ನಡೆಯುತ್ತೆ. ಶುಕ್ರವಾರ ಮತ್ತು ಮಂಗಳವಾರ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ದೇವಿಗೆ ಹಣ, ಸೀರೆ, ಬೆಳ್ಳಿ- ಹೀಗೆ ವಸ್ತ್ರಾಭರಣಗಳನ್ನು ಕಾಣಿಕೆಯಾಗಿ ಒಪ್ಪಿಸುವ ಸಂಪ್ರದಾಯವಿದೆ.

ತಲುಪುವುದು ಹೇಗೆ?
ದಾವಣಗೆರೆ ಜಿಲ್ಲಾ ಕೇಂದ್ರದಿಂದ ಅಣಜಿಗೆ ಕೇವಲ 20 ಕಿ.ಮೀ. ದೂರ. ಪ್ರತಿ 15 ನಿಮಿಷಕ್ಕೆ ಖಾಸಗಿ, ಸರ್ಕಾರಿ ಬಸ್ಸುಗಳಿವೆ. ಈ ಮಾರ್ಗದಲ್ಲಿ ಆಟೋಗಳೂ ನಿರಂತರವಾಗಿ ಓಡಾಡುವುದರಿಂದ ಸುಲಭದಲ್ಲಿ ಮಾರಮ್ಮ ದೇಗುಲವನ್ನು ತಲುಪಬಹುದು.

ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.