ಸೀತೆ, ಸುಣ್ಣ ಬೀಳಿಸಿದ ತಾಣ
ಸೀತಾವನ
Team Udayavani, Oct 26, 2019, 4:04 AM IST
ಇದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಸಮೀಪದ ತಾಣ. ಇಲ್ಲಿರುವ ಜಲಪಾತ, ಪೌರಾಣಿಕ ಪ್ರಸಂಗವೊಂದಕ್ಕೆ ಸಾಕ್ಷಿ ಬರೆದಿದೆ. ರಾಮಾಯಣದ ಕಾಲದಲ್ಲಿ, ವನವಾಸದಲ್ಲಿದ್ದಾಗ ಸೀತೆ, ಸುಂದರ ತಪ್ಪಲಿನ ನಡುವೆ ಇರುವ ಈ ಜಲಪಾತದಲ್ಲಿ ಸ್ನಾನ ಮಾಡಿದ್ದಳಂತೆ. ಸ್ನಾನದ ನಂತರ ಇಲ್ಲಿನ ಕಲ್ಲುಬಂಡೆಯ ಮೇಲೆ ವಿರಮಿಸುವಾಗ, ಎಲೆ- ಅಡಕೆ ಹಾಕಿಕೊಂಡು, ಸುಣ್ಣವನ್ನು ಕೆಳಕ್ಕೆ ಬೀಳಿಸಿದ್ದಳು ಎನ್ನುವುದು ಪ್ರತೀತಿ. ಈಗಲೂ ಈ ಜಾಗದಲ್ಲಿ ಯಾವುದೇ ವಸ್ತುವನ್ನು ಬೀಳಿಸಿದರೂ, ಐದಾರು ದಿನಗಳ ಬಳಿಕ ಅವುಗಳ ಮೇಲೆ ಸುಣ್ಣ ಬೆಳೆಯುತ್ತದೆ ಎನ್ನುವ ಮಾತುಗಳುಂಟು. ಪ್ರವಾಸಿಗರು ಇದನ್ನು ಪರೀಕ್ಷಿಸುವ ದೃಶ್ಯಗಳು ಇಲ್ಲಿ ಸಾಮಾನ್ಯ.