ಮಹದೇಶ್ವರ ಬೆಟ್ಟದ ಭಲೇ ಭೋಜನ

ದೇವರ ಪಾಕಶಾಲೆ

Team Udayavani, Aug 17, 2019, 5:00 AM IST

p-7

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ, ಮಲೆ ಮಹದೇಶ್ವರ ಬೆಟ್ಟವು ಮಧ್ಯಮ ವರ್ಗದ ಶ್ರದ್ಧಾ ಕೇಂದ್ರ. ಸುತ್ತಲಿನ 7 ಮಲೆಗಳ ನಡುವೆ ನೆಲೆನಿಂತ ಮಹದೇಶ್ವರನ ಈ ದೇಗುಲವು, 600 ವರ್ಷಗಳ ಇತಿಹಾಸ ಹೊಂದಿದೆ. ಏಳು ಮಲೆಯ ಮಾರ್ಗವಾಗಿ ನಡುಮಲೆಯನ್ನು ತಪಸ್ಸಿಗೆ ಆರಿಸಿಕೊಂಡ ಮಹದೇವನ, ಈ ಪುಣ್ಯಸ್ಥಾನದ ದಾಸೋಹಕ್ಕೆ ದೈವಿಕ ಮಹತ್ವವಿದೆ.

ನಿತ್ಯ ಎಷ್ಟು ಮಂದಿಗೆ ಊಟ?
ಪ್ರತಿನಿತ್ಯ ಇಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಸುಸಜ್ಜಿತವಾದ ದಾಸೋಹ ಭವನದಲ್ಲಿ ಒಮ್ಮೆಲೆ 700 ಮಂದಿ ಊಟಕ್ಕೆ ಕುಳಿತುಕೊಳ್ಳಬಹುದು. ಟೇಬಲ್‌ ಮೇಲೆ ಸ್ಟೀಲ್‌ ತಟ್ಟೆಯಲ್ಲಿ ಊಟದ ವ್ಯವಸ್ಥೆ. ಅಮಾವಾಸ್ಯೆ, ಯುಗಾದಿ, ಶಿವರಾತ್ರಿ, ದೀಪಾವಳಿ, ಜಾತ್ರೆಯ ವೇಳೆ ಲಕ್ಷಕ್ಕೂ ಅಧಿಕ ಭಕ್ತರು, ಭೋಜನ ಸವಿದು ಪಾವನರಾಗುತ್ತಾರೆ.

ಐದು ಹೊತ್ತು ದಾಸೋಹ
ಬೇರೆಲ್ಲ ಪುಣ್ಯಕ್ಷೇತ್ರಗಳಲ್ಲಿ 2 ಅಥವಾ 3 ಹೊತ್ತು ದಾಸೋಹ ಇದ್ದರೆ, ಇಲ್ಲಿ 5 ಹೊತ್ತು ದಾಸೋಹ.
ಬೆಳಗ್ಗೆ: 7ರಿಂದ 11 ಗಂಟೆ ವರೆಗೆ ಉಪಾಹಾರ
ಮಧ್ಯಾಹ್ನ: 12.30ರಿಂದ 3.30ರವರೆಗೆ ಭೋಜನ
ಸಂಜೆ: 4ರಿಂದ 6ರವರೆಗೆ ಉಪಾಹಾರ
ರಾತ್ರಿ: 7ರಿಂದ 10.30ರ ವರೆಗೆ ಭೋಜನ
ತಡರಾತ್ರಿ: 10.30ರಿಂದ ಉಪಾಹಾರ
ವಿಶೇಷ ದಿನ, ಜಾತ್ರೆ ಸಂದರ್ಭಗಳಲ್ಲಿ ನಿರಂತರವಾಗಿ ದಿನದ 24 ಗಂಟೆಯೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರ ಸಂಖ್ಯೆ ಹೆಚ್ಚಾದಾಗ, ಊಟದ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

ದಾಸೋಹ ಹಿಂದಿನ ಕೈಗಳು
10 ಮಂದಿ ಬಾಣಸಿಗರು ಸೇರಿದಂತೆ 70 ಜನ ಸಿಬ್ಬಂದಿ, ದಾಸೋಹ ಭವನದಲ್ಲಿ ಕೆಲಸ ಮಾಡುತ್ತಾರೆ. 23 ಮಂದಿ ಶುಚಿತ್ವದ ಹೊಣೆ ಹೊರುತ್ತಾರೆ. 22 ಮಂದಿ ಊಟ ಬಡಿಸುವುದಕ್ಕೆ ನೇಮಕವಾಗಿದ್ದಾರೆ.

ಭಕ್ಷ್ಯ ವಿಚಾರ
– ಉಪಾಹಾರದ ವೇಳೆ, ಪಲಾವ್‌, ಟೊಮೇಟೊ ಬಾತ್‌, ಪುಳಿಯೊಗರೆ, ಹುಳಿಅನ್ನ ಅಥವಾ ಉಪ್ಪಿಟ್ಟುಗಳಲ್ಲಿ ಯಾವುದಾದರೂ ಒಂದನ್ನು ವಿತರಿಸಲಾಗುತ್ತದೆ.
– ಭೋಜನಕ್ಕೆ ಅನ್ನ- ಸಾಂಬಾರು, ಪಾಯಸ, ತರಕಾರಿ ಕೂಟು, ತಿಳಿ ಸಾರು ಮತ್ತು ಮಜ್ಜಿಗೆಯನ್ನು ವಿತರಿಸಲಾಗುತ್ತದೆ.

ಭೋಜನಶಾಲೆ ಹೇಗಿದೆ?
13 ಸ್ಟೀಮ್‌ ಬಾಯ್ಲರ್‌ಗಳುಳ್ಳ ಸುಸಜ್ಜಿತ ಅಡುಗೆ ಕೋಣೆ ಇದು. ಈ ಪೈಕಿ ಅನ್ನ ತಯಾರಿಕೆಗೆ 6, ಸಾಂಬಾರು ಮತ್ತು ತಿಳಿಸಾರು ತಯಾರಿಕೆಗೆ 3, ಪಾಯಸ ತಯಾರಿಕೆಗೆ 2 ಮತ್ತು ತರಕಾರಿ ಕೂಟು ತಯಾರಿಸಲು 2 ಸ್ಟೀಮ್‌ಗಳನ್ನು ಬಳಸಲಾಗುತ್ತಿದೆ. ಗ್ಯಾಸ್‌ ಒಲೆಯಲ್ಲಿ ಅಡುಗೆ. ಪ್ರತಿನಿತ್ಯ 20 ಕ್ವಿಂಟಲ್‌ಗ‌ೂ ಅಧಿಕ ಅಕ್ಕಿ, 100 – 150 ಕೆ.ಜಿ ತೊಗರಿ ಬೇಳೆ, 200ಕ್ಕೂ ಹೆಚ್ಚು ತೆಂಗಿನಕಾಯಿ ಮತ್ತು 500 -700 ಕೆ.ಜಿ. ತರಕಾರಿ ಅವಶ್ಯ.

ಅನ್ನದಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆ ಪುಣ್ಯ ನಮಗೂ ದಕ್ಕುತ್ತಿದೆ. ಇಲ್ಲಿನ ದಾಸೋಹಕ್ಕೆ ಅಕ್ಕಿ, ಬೇಳೆ, ತರಕಾರಿಗಳೆಲ್ಲವನ್ನೂ ದಾನಿಗಳೇ ನೀಡುತ್ತಿದ್ದಾರೆ.
– ಸ್ವಾಮಿ, ದಾಸೋಹ ಭವನದ ಮೇಲ್ವಿಚಾರಕ

ಸಂಖ್ಯಾ ಸೋಜಿಗ
5- ಹೊತ್ತು ದಾಸೋಹ ವಿಶೇಷ
10- ಬಾಣಸಿಗರಿಂದ ಅಡುಗೆ
13- ಸ್ಟೀಮ್‌ ಬಾಯ್ಲರ್‌ಗಳ ಬಳಕೆ
15- ಸಿಲೆಂಡರ್‌ಗಳು ನಿತ್ಯ ಅವಶ್ಯ
70- ಸಿಬ್ಬಂದಿ ಪಾಕಶಾಲೆಯ ಶಕ್ತಿ
700- ಕೆ.ಜಿ. ತರಕಾರಿ ನಿತ್ಯ ಅವಶ್ಯ
20,000- ಭಕ್ತರಿಗೆ ನಿತ್ಯ ದಾಸೋಹ
1,00,00,000- ಭಕ್ತರಿಗೆ ಕಳೆದವರ್ಷ ಅನ್ನಸಂತರ್ಪಣೆ

– ವಿನೋದ್‌ ಎನ್‌ ಗೌಡ , ಹನೂರು

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.