ಭಗವಚ್ಚಿಂತನೆಗೆ ನಾಲ್ಕು ಉಪಾಯಗಳು


Team Udayavani, Aug 31, 2019, 5:00 AM IST

MATADA-BELAKU

ಪ್ರತಿ ದಿವಸವೂ ಬೆಳಗ್ಗೆ ಧ್ಯಾನ, ಜಪ, ಸ್ತೋತ್ರ, ಪೂಜೆ ಈ ನಾಲ್ಕರ ಪೈಕಿ ಒಂದನ್ನಾದರೂ ಮಾಡಬೇಕು. ಧ್ಯಾನವೆಂದರೆ, ಏಕಾಗ್ರತೆಯಿಂದ ದೇವರನ್ನು ಗಮನಿಸುವುದು. ನಮ್ಮ ಶರೀರದ ಒಳಗೇ ಇರುವ ದೇವರನ್ನು ಗಮನಿಸುವುದು. ಜಪವು, ಮಂತ್ರದ ಮೂಲಕ ದೇವರನ್ನು ಗಮನಿಸುವ ಕೆಲಸವನ್ನು ಮಾಡುತ್ತದೆ.

ಮಂತ್ರ ಎಂದರೆ, ಭಗವಂತನನ್ನು ನೆನಪಿಸುವ ಶಬ್ದ. ಶಬ್ದದ ಸ್ವಭಾವವೇನೆಂದರೆ, ಅದರ ಅರ್ಥದ ಕಡೆ ನಮ್ಮ ಗಮನವನ್ನು ಸೆಳೆದೊಯ್ಯುತ್ತದೆ. ಹಾಗೆ ದೇವರ ಶಬ್ದವನ್ನು, ದೇವರ ನಾಮವನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದರ ಮೂಲಕ ಮನಸ್ಸನ್ನು ದೇವರತ್ತ ಕಳುಹಿಸಬೇಕು. ಸ್ತೋತ್ರ ಎಂದರೆ ಭಕ್ತಿಸಾಹಿತ್ಯದ ಮೂಲಕ ದೇವರ ಚಿಂತನೆ. ಆರಂಭದ ಸಾಧಕನಿಗೆ ಮನಸ್ಸು ತುಂಬಾ ಚಂಚಲವಾಗಿರುವುದರಿಂದ ಧ್ಯಾನವು ಸಾಧ್ಯವೇ ಇಲ್ಲ.

ಎಷ್ಟೋ ಸಲ, ಜಪವೂ ಆರಂಭದ ಸಾಧಕನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರಿಗೆ ದೀರ್ಘ‌ಕಾಲ ಕುಳಿತುಕೊಳ್ಳಲೂ ಸಾಧ್ಯವಾಗುವುದಿಲ್ಲ. ಸೊಂಟನೋವು, ಮಂಡಿನೋವು, ನಿದ್ರೆ ಮೊದಲಾದ ವಿಘ್ನಗಳು ಬರುತ್ತವೆ. ಆರಂಭದ ಸಾಧಕನಿಗೆ ಸುಲಭವಾದ ಸಾಧನವೆಂದರೆ ಸ್ತೋತ್ರ, ಭಜನೆ. ಭಕ್ತಿಯನ್ನು ಉದ್ದೀಪನಗೊಳಿಸುವ ರಾಗಸಂಯೋಜನೆ ಮಾಡಿ ಹಾಡಿದರೆ ಬಹಳ ಉತ್ತಮವಾಗಿ, ಮನಸ್ಸು ಬೇಗ ದೇವರಲ್ಲಿ ಏಕಾಗ್ರಗೊಳ್ಳುತ್ತದೆ.

ಅಂತೆಯೇ ದೇವರಲ್ಲಿ ಮನಸ್ಸನ್ನು ಇಡಲು ಪೂಜೆಯು ಎಲ್ಲಕ್ಕಿಂತಲೂ ಸುಲಭವಾದ ಸಾಧನ. ಏಕೆಂದರೆ, ಪೂಜೆಯಲ್ಲಿ ಅನೇಕ ಅನುಕೂಲಗಳಿವೆ. ಪೂಜೆಯ ವೇಳೆ ಒಂದು ಪ್ರತ್ಯೇಕವಾದ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಎದುರಿಗೆ ದೇವರ ಚಿತ್ರ ಅಥವಾ ಮೂರ್ತಿ ಇರುತ್ತದೆ. ಕಣ್ಣುಗಳು ಆ ಮೂರ್ತಿಯನ್ನು ಅಥವಾ ಚಿತ್ರವನ್ನು ನೋಡುತ್ತಿರುತ್ತವೆ. ಕೈಗಳು ಪೂಜೆ ಮಾಡುತ್ತಿರುತ್ತವೆ. ಅಂದರೆ, ಹೂವು ಮೊದಲಾದವುಗಳನ್ನು ಸಮರ್ಪಣೆ ಮಾಡುತ್ತಿರುತ್ತವೆ.

ಹೀಗೆ ಕುಳಿತಿರುವ ಸ್ಥಳ, ನೋಡುತ್ತಿರುವ ಮೂರ್ತಿ, ಕೈಗಳಿಂದ ಪೂಜೆ, ಬಾಯಿಂದ ಮಂತ್ರ ಅಥವಾ ಸ್ತೋತ್ರ ಪಠನ- ಇವೆಲ್ಲವೂ ಮನಸ್ಸಿಗೆ ಸುಲಭವಾಗಿ ದೇವರ ಕಡೆ ಹೋಗಲು ಅನುಕೂಲಮಾಡಿಕೊಡುತ್ತವೆ. ಪೂಜೆಯ ಮೂಲಕ ಬೇಗ ಮನಸ್ಸಿಗೆ ಏಕಾಗ್ರತೆ ಬರಲು ಸಾಧ್ಯವಾಗುತ್ತದೆ.

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ,
ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.