ಶ್ರೀರಂಗ ಸುಂದರಾಂಗ


Team Udayavani, Jan 18, 2020, 6:04 AM IST

sriranga

ಕರ್ನಾಟಕವು ಹಲವು ಶೈಲಿಯ ದೇಗುಲಗಳ ಬೀಡು. ಆದರೆ, ತಮ್ಮದೇ ಮಿತಿಯಲ್ಲಿ ಸ್ಥಳೀಯ ಮಾಂಡಲೀಕರು ಮತ್ತು ಪಾಳೇಗಾರರು ನಿರ್ಮಿಸಿದ ದೇವಾಲಯಗಳ ಶೈಲಿಯೂ ಅಷ್ಟೇ ಗಮನ ಸೆಳೆಯುತ್ತದೆ. ಅವುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಮಾಳೇನಹಳ್ಳಿಯ ಶ್ರೀ ರಂಗನಾಥ ದೇಗುಲವೂ ಒಂದು.

ಕ್ರಿ.ಶ. 1580ರಲ್ಲಿ ಪಾಳೇಗಾರ ತಿಮ್ಮಣ್ಣ ನಾಯಕರ ಮಾರ್ಗದರ್ಶಕರಾಗಿದ್ದ ಶ್ರೀ ವೆಂಕಪ್ಪಯ್ಯನವರಿಂದ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಕನಾಸಿ, ತೆರೆದ ಮಂಟಪ (ನವರಂಗ) ಮತ್ತು ಪ್ರತ್ಯೇಕ ಪ್ರವೇಶ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರ ನಾಲ್ಕು ಅಡಿ ಎತ್ತರದ ಶ್ರೀ ರಂಗನಾಥನ ಮೂರ್ತಿಯು ಸುಂದರ ಪ್ರಭಾವಳಿಯಿಂದ ಕೂಡಿದೆ. ರಂಗನಾಥನ ಕೈಯಲ್ಲಿನ ಶಂಖ, ಚಕ್ರ ಮತ್ತು ಗಧೆಯ ಕೆತ್ತನೆ ಸೊಗಸಾಗಿದೆ.

ತೆರೆದ ಮಂಟಪದಲ್ಲಿ 6 ಕಂಬಗಳಿದ್ದು, ಉಬ್ಬು ಶಿಲ್ಪಗಳ ಕೆತ್ತನೆ ವಿಸ್ಮಯ ಹುಟ್ಟಿಸುತ್ತದೆ. ಆಂಜನೇಯ, ನವನೀತ ಕೃಷ್ಣ, ನರಸಿಂಹ, ವೇಣುಗೋಪಾಲನ ಉಬ್ಬು ಶಿಲ್ಪಗಳಿವೆ. ಈ ದೇಗುಲದ ವೈಶಿಷ್ಟ ಇರುವುದು ಪ್ರವೇಶ ಮಂಟಪದಲ್ಲಿ. ಇಲ್ಲಿಯೂ ಸುಂದರ ಉಬ್ಬು ಶಿಲ್ಪಗಳ ಕೆತ್ತನೆಯ 4 ಕಂಬಗಳಿದ್ದು, ಇದನ್ನೇ ರಾಜಗೋಪುರವಾಗಿ ಪರಿವರ್ತಿಸಲಾಗಿದೆ.

ಕಂಬಗಳಲ್ಲಿ ಮೊಸರಿನಿಂದ ಬೆಣ್ಣೆ ಕಡೆಯುವ, ಶಿವಲಿಂಗಕ್ಕೆ ನಂದಿ ಹಾಲು ಎರೆಯುವ ಶಿಲ್ಪಗಳ ಉಬ್ಬು ಕೆತ್ತನೆ ನೋಡಲೇಬೇಕಾದದ್ದು. ಎರಡನೇ ಹಂತದಲ್ಲಿ 12 ಕಂಬಗಳ ಮಂಟಪ ಇದ್ದರೆ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಚಿಕ್ಕ ಮಂಟಪವಿದೆ. ಇದರ ಮೇಲೆ ಕಳಸವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಕ್ಕೆ ಗರ್ಭಗುಡಿಯ ಮೇಲೆ ನಾಗರ ಶೈಲಿಯ ಚಿಕ್ಕ ಶಿಖರವಿದೆ.

ದೇವಾಲಯದ ಆವರಣದಲ್ಲಿ ಲಕ್ಷ್ಮೀ, ಆಂಜನೇಯ ಮತ್ತು ಶಿವ ಚಿದಂಬರರ ಚಿಕ್ಕ ಗುಡಿಗಳಿವೆ. ಶ್ರೀ ಶಂಕರಲಿಂಗರು ಇಲ್ಲಿಗೆ ಬಂದು ನೆಲೆಸಿದಾಗ ಈ ದೇಗುಲಗಳನ್ನು 1942ರಲ್ಲಿ ಊರಿನ ಸಹಕಾರದಿಂದ ಜೀರ್ಣೋದ್ಧಾರ ಮಾಡಿದರು. ಲಕ್ಷ್ಮೀದೇವಿಯ ವಿಗ್ರಹವನ್ನು ಈ ಸಮಯದಲ್ಲಿಯೇ ಭಿನ್ನವಾದ ವಿಗ್ರಹದ ಬದಲಾಗಿ ಸ್ಥಾಪಿಸಲಾಯಿತು. ಇಲ್ಲಿನ ಆವರಣದಲ್ಲಿ ಗುರುಗಳ ಯೋಗಮಂದಿರವಿದ್ದು, ಭಕ್ತರು ಇಲ್ಲಿಗೆ ಬರುತ್ತಾರೆ.

ಈಗ ದೇವಾಲಯವನ್ನು ಹಳೆಯ ಸ್ವರೂಪವನ್ನು ಹಾಗೆಯೇ ಉಳಿಸಿ ಸಾಕಷ್ಟು ನವೀಕರಿಸಲಾಗಿದ್ದು, ಆಧುನಿಕ ಸ್ಪರ್ಶ ಪಡೆದಿದೆ. ನಿತ್ಯ ಪೂಜೆಗಳು ನಡೆಯುತ್ತವೆ. ರಥ ಸಪ್ತಮಿಯಂದು ಬ್ರಹ್ಮ ರಥೋತ್ಸವ ನೆರವೇರುತ್ತದೆ. ಈ ಸಮಯದಲ್ಲಿ ಷಷ್ಠಿ ಯಂದು ಕಲ್ಯಾಣೋತ್ಸವ, ಸಪ್ತಮಿಯಲ್ಲಿ ಹೋಮ ನಡೆಯುತ್ತದೆ. ಇಲ್ಲಿ ಭೂತಪ್ಪ ನಿಗೆ ಎಡೆ ಇಡುವುದು ವಿಶೇಷ.

ದರುಶನಕೆ ದಾರಿ…: ಮಾಳೇನಹಳ್ಳಿಯು ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದೆ. ಚಿತ್ರದುರ್ಗ- ಹೊಳಲ್ಕೆರೆ ಮಾರ್ಗವಾಗಿ ಅಥವಾ ಶಿವಮೊಗ್ಗ- ಚನ್ನಗಿರಿ ಮಾರ್ಗವಾಗಿಯೂ ತಲುಪಬಹುದು.

* ಶ್ರೀನಿವಾಸಮೂರ್ತಿ ಎನ್‌.ಎಸ್‌.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.