ಕಿಟಕಿ ಪಕ್ಕದ ಸೀಟಿನ ನಿಶ್ಚಲ ಪಯಣಿಗ
Team Udayavani, Nov 16, 2019, 4:09 AM IST
ಮಳೆ ಭೋರ್ಗರೆದು, ಸುತ್ತಲೂ ಪ್ರವಾಹ ಸೃಷ್ಟಿಸಿತ್ತು. ನೀರಿನಲ್ಲಿ ಮುಳುಗಿ, ನಡುಗಡ್ಡೆಗಳಾದ ಅಂಥ ಹಳ್ಳಿಗಳ ಚಿತ್ರ ತೆಗೆಯಲು, ಕ್ಯಾಮೆರಾ ಹಿಡಿದು ಹೋಗಿದ್ದೆ. ಅಲ್ಲೊಂದು ಮನೆ. ಅದು ಬಹುತೇಕ ಬಿದ್ದುಹೋಗಿತ್ತು. ಅದರ ಒಂದು ಬದಿಯ ಗೋಡೆ ಮಾತ್ರವೇ ಇತ್ತು. ಅದರ ಕಿಟಕಿಗೆ ಆಡಿನ ಮರಿಯೊಂದನ್ನು ಕಟ್ಟಿ, ಅದಕ್ಕೆ ಹುಲ್ಲನ್ನು ಹಾಕಿದ್ದರು. ಆಡಿನ ಮರಿಯ ಪಾಲಿಗೆ, ಹುಲ್ಲು, ಹಗ್ಗ ಮಾತ್ರವೇ ಜಗತ್ತಾಗಿತ್ತು. ಈ ಮನ ಕಲಕುವ ದೃಶ್ಯ ಕಂಡುಬಂದಿದ್ದು, ಕೂಡಲ ಸಂಗಮ ಸಮೀಪವಿರುವ ತುರಡಗಿ ಗ್ರಾಮದಲ್ಲಿ.
* ಶ್ರೀಶೈಲಗೌಡ ಹೊಸಮನಿ, ಹುನಗುಂದ