ಏರುದನಿಯಲ್ಲಿ ವಿರೋಧಿಸುತ್ತಿದ್ರು…


Team Udayavani, Sep 9, 2017, 1:59 PM IST

123.jpg

ಇಂದಿನ ಅಧಿಕಾರಸ್ಥರಲ್ಲಿ ಮನೆಮಾಡಿರುವ ಅಸಹನೆ, ಅವರನ್ನು ವಿರೋಧಿಸುತ್ತಿರುವವರಿಗೆ ಇರುವ ಅನಾಯಕತ್ವ, ಇದರ ಪರಿಣಾಮವಾಗಿ ಅಡಕತ್ತರಿಗೆ ಸಿಕ್ಕಿದಂತಿರುವ ಜನಸಾಮಾನ್ಯರ ಬದುಕು ತೇಜಸ್ವಿಯವರನ್ನು ಖಂಡಿತವಾಗಿ ಲೇಖನಿ ಕೆಳಗಿಟ್ಟು, ಕ್ಯಾಮರಾ ಬದಿಗಿಟ್ಟು, ಗಾಳವನ್ನು ಬಿಸಾಕಿ, ಬೀದಿಗೆ ತಂದು ನಿಲ್ಲಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. 

ತೇಜಸ್ವಿ ಮೂಲತಃ ಒಬ್ಬ ಚಿಂತಕ, ಹೋರಾಟಗಾರ ಮತ್ತು ಲೇಖಕ.  ಹೋರಾಟಗಳು ದಿಕ್ಕು ತಪ್ಪಿದಾಗ, ಸ್ವಹಿತಾಸಕ್ತಿಯೇ ಮುಂಚೂಣಿಗೆ ಬಂದಾಗ, ಕಾಡಿಗೆ ತೆರಳಿ, ನಿರ್ಜನ ಪ್ರದೇಶದಲ್ಲಿ ಪ್ರಕೃತಿಯೊಂದಿಗೆ ಸಂವಾದ ನಡೆಸಿ, ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಕಾಳಜಿ ಮೂಲಕ ನಾಡಿನ ಜನತೆಗೆ ಸಂದೇಶ ತಲುಪಿಸುವ ಕಾಯಕಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು.

ಇಂದಿನ ಸಾರ್ವಜನಿಕ ಬದುಕಿನಲ್ಲಿ ನಿರ್ಲಜ್ಜವಾಗಿ ನಡೆಯುತ್ತಿರುವ ಜಾತಿಗಳ ಮೇಲಾಟ, ಅಕ್ರಮವಾಗಿ ಗಳಿಸಿದ ಸಂಪತ್ತಿನ ಅಸಹ್ಯಕರ ಪ್ರದರ್ಶನ, ಪಾತಕಿಗಳು ಜನನಾಯಕರಾಗುತ್ತಿರುವ ವಿಪರ್ಯಾಸ, ಉದ್ಯಮಪತಿಗಳು, ಬಂಡವಾಳಷಾಹಿಗಳು ಮಾದ್ಯಮಗಳನ್ನು ಮತ್ತು ರಾಜಕೀಯವನ್ನು ನಿಯಂತ್ರಿಸುತ್ತಿರುವ ಪರಿ, ರಾಜಪ್ರಭುತ್ವವನ್ನು ನಾಚಿಸುವ ರೀತಿಯಲ್ಲೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ, ತೇಜಸ್ವಿಯವರನ್ನು ಮತ್ತೆ ಲೋಹಿಯಾ ಅವರ, ಜಯಪ್ರಕಾಶ್‌ ನಾರಾಯಣ್‌ ಅವರ ದಿನಗಳಿಗೆ ಕೊಂಡೊಯ್ದಿದ್ದರೆ ಆಶ್ಚರ್ಯವಿಲ್ಲ.  ಹೋರಾಟ ಬಿಟ್ಟು, ಲೇಖನಿಗೆ ಶರಣಾಗಿದ್ದ ತೇಜಸ್ವಿ ಮತ್ತೆ ಹೋರಾಟಕ್ಕೆ ಇಳಿದಿದ್ದರೆ ಆಶ್ಚರ್ಯವೇನೂ ಆಗುತ್ತಿರಲಿಲ್ಲ.

ಸಾಮೂಹಿಕ ಸನ್ನಿಗೆ ಒಳಗಾಗಿರುವ ಜನ, ಪ್ರಾಥಮಿಕ ಶಿಕ್ಷಣಕ್ಕೂ ಆಂಗ್ಲ ಭಾಷೆಯನ್ನು ಅವಲಂಬಿಸುತ್ತಾ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರವನ್ನು ಅನಿವಾರ್ಯವೆಂದು ಸಹಿಸುತ್ತಾ, ಸಹಜವೆಂಬಂತೆ ಬದುಕುತ್ತಿರುವುದನ್ನು ಕಂಡು ತೇಜಸ್ವಿ ಇದೇ ಗಾಂಧಿ, ಅಂಬೇಡ್ಕರ್‌, ಲೋಹಿಯಾ, ಜೆ.ಪಿ ಸಕ್ರಿಯವಾಗಿದ್ದ ಭಾರತವೇ? ಎಂದು ಆಶ್ಚರ್ಯಚಕಿತರಾಗುತ್ತಿದ್ದುದು ಖಂಡಿತ. 

ಕಪ್ಪು$ಹಣವನ್ನು ನಿಗ್ರಹಿಸುವ, ಭಯೋತ್ಪಾದನೆ ತೊಡೆದುಹಾಕುವ ಹೆಸರಿನಲ್ಲಿ ನಡೆದ ನೋಟುಗಳ ಅಮಾನ್ಯಿàಕರಣದಿಂದಾಗಿ ತತ್ತರಿಸಿದ ಸಾಮಾನ್ಯ ರೈತರು, ಸಣ್ಣ ವ್ಯಾಪಾರಿಗಳು, ಸಣ್ಣಪುಟ್ಟ ಉದ್ದಿಮೆದಾರರು ಮತ್ತು ಜನಸಾಮಾನ್ಯರು ತೇಜಸ್ವಿಯವರಿಗೆ ತಬರನ ಕಥೆಗಿಂತ ಪರಿಣಾಮಕಾರಿಯಾಗಿ ಕಂಡು, ಮತ್ತೂಂದು ಕೃತಿ ರಚನೆಗೆ ಪ್ರೇರಕವಾಗುತ್ತಿದ್ದುದು ನಿಸ್ಸಂಶಯ. 

“ಒಂದು ದೇಶ ಒಂದು ತೆರಿಗೆ’, ‘ಒಂದು ದೇಶ ಒಂದು ಕಾನೂನು’, ‘ಒಂದು ದೇಶ ಒಂದು ಭಾಷೆ’ ಈರೀತಿಯ ಆಲೋಚನೆಗಳು, ಭಾರತದ ಬಹುತ್ವವನ್ನು, ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ, ಒಂದೇ ಚಿಂತನೆ ಮತ್ತು ಒಂದೇ ಸಂಸ್ಕೃತಿಯನ್ನು ಹೇರುವ ಹುನ್ನಾರವೆಂಬುದನ್ನು ಏರುಧ್ವನಿಯಲ್ಲಿ ತೇಜಸ್ವಿ ಹೇಳುತ್ತಿದ್ದುದು ನಿಶ್ಚಿತ. 

ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಇಂದು ಜನರಿಗೆ ಉಣಬಡಿಸುತ್ತಿರುವ ವಿಚಾರಗಳು, ‘ಜಾಗತೀಕರಣ’ ಮತ್ತು ‘ಅನಿರ್ಬಂಧಿತ ಬಂಡವಾಳ ಹೂಡಿಕೆ’ ಯಾವ ದುಷ್ಪ$ರಿಣಾಮವನ್ನು ಬೀರಬಲ್ಲುದು ಎಂಬುದನ್ನು ಮುಂಚೆಯೇ ಗ್ರಹಿಸಿದ್ದ ತೇಜಸ್ವಿಯುವರು ‘ಖಾಸಗೀಕರಣ’, ‘ಉದಾರೀಕರಣ’ ಮತ್ತು ‘ಜಾಗತೀಕರಣ’ವನ್ನು ಖಂಡತುಂಡವಾಗಿ ವಿರೋಧಿಸಿದ್ದರು.  ಅವರ ನಿಲುವು ಸರಿಯೆಂದು ಇಂದು ಒಪ್ಪಲೇಬೇಕಾಗಿದೆ.  

ಡಾ. ಬಿ. ಎಲ್‌. ಶಂಕರ್‌

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.