ಬೆಳ್ಳಿತೆರೆಯ ಬಣ್ಣದ ಹುಡುಗ


Team Udayavani, Nov 16, 2019, 4:10 AM IST

belli-tereya

ಬಸವರಾಜ್‌ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಸಂತ ಶಿಶುನಾಳ ಶರೀಫ‌ರ, ಶಿಶುನಾಳ ಗ್ರಾಮದವರು. ಓದಿದ್ದು ಕೇವಲ ಆರನೇ ತರಗತಿ. ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎನ್ನುವ ಹಂಬಲದೊಂದಿಗೆ ಸಿನಿಮಾ ಲೋಕಕ್ಕೆ ಧುಮುಕಿದ ಬಸವರಾಜ್‌ಗೆ, ಅಲ್ಲಿ ಕೈಹಿಡಿದಿದ್ದು ಮೇಕಪ್‌ನ ಬ್ರಶ್ಶ್ಗಳು!

ಸಿನಿಮಾವೋ, ಕಿರುತೆರೆಯೋ… ಅದು ಆರಂಭಗೊಳ್ಳುವಾಗ, ಇಲ್ಲವೇ ಮುಗಿಯುವಾಗ ಟೈಟಲ್‌ ಕಾರ್ಡಿನಲ್ಲಿ “ಪ್ರಸಾಧನ’ ಎನ್ನುವ ಪದವೊಂದು ಹಾದುಹೋಗುತ್ತದೆ. ಕ್ಷಣಮಾತ್ರದಲ್ಲಿ ಮರೆಯಾಗುವ ಆ ಪದ ಮತ್ತು ಅದರ ಕೆಳಗಿನ ಹೆಸರಿನ ಮೇಲೆ ಗಮನ ಹರಿಸುವವರು ಕಡಿಮೆ. ಅದೇ ಪರದೆಯ ಮೇಲೆ ನಾಯಕ ಬಂದಾಗ, ನಾಯಕಿ ನಕ್ಕಾಗ, “ಆಹಾ! ಎಷ್ಟು ಮುದ್ದು ಮುದ್ದಾಗಿದ್ದಾರೆ’ ಎಂದು ಅವರ ಸೌಂದರ್ಯವನ್ನು ಹೊಗಳಿ, ಹರ್ಷಿಸುತ್ತೇವೆ.

ತೆರೆಮೇಲಿನ ಈ ಮುಖಗಳನ್ನು ಚೆಂದ ಮಾಡುವ ಸಾಹಸವೇ “ಪ್ರಸಾಧನ’ ಹುಡುಗರದ್ದು. ಅಂದರೆ, ಮೇಕಪ್‌ ಆರ್ಟಿಸ್ಟ್‌ಗಳದ್ದು. ಯಾವುದೇ ಪಾತ್ರಗಳನ್ನು, ನೋಡುಗನ ಕಣ್ಣಲ್ಲಿ ಚಿರಾಯು ಮಾಡುವ ಕೆಲಸವನ್ನು ಈ ಕಲಾವಿದರು ಮಾಡುತ್ತಾರೆ. ಪ್ರಸಾಧನ ಕಲೆಯನ್ನು ಕರಗತ ಮಾಡಿಕೊಂಡು, ಬೆಂಗಳೂರಿನಲ್ಲಿ ಮೇಕಪ್‌ಮ್ಯಾನ್‌ ಆಗಿ ಬದುಕು ಕಂಡುಕೊಂಡವರು, ಬಸವರಾಜ್‌ ಹುಬ್ಬಳ್ಳಿ.

ಬಸವರಾಜ್‌ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಸಂತ ಶಿಶುನಾಳ ಶರೀಫ‌ರ, ಶಿಶುನಾಳ ಗ್ರಾಮದವರು. ಓದಿದ್ದು ಕೇವಲ ಆರನೇ ತರಗತಿ. ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎನ್ನುವ ಹಂಬಲದೊಂದಿಗೆ ಸಿನಿಮಾ ಲೋಕಕ್ಕೆ ಧುಮುಕಿದ ಬಸವರಾಜ್‌ಗೆ, ಅಲ್ಲಿ ಕೈಹಿಡಿದಿದ್ದು ಮೇಕಪ್‌ನ ಬ್ರಶ್ಶ್ಗಳು!

ಹಳ್ಳಿಯಿಂದ ಸಿನಿಮಾಕ್ಕೆ…: ಬಸವರಾಜ್‌ರ ಮೇಕಪ್‌ ವಿದ್ಯೆಯ ಹಿಂದೆ, ಗ್ರಾಮೀಣ ಸಂಸ್ಕೃತಿಯ ಪ್ರೇರಣೆಯಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವ, ಜಾತ್ರೆಗಳೇ ಇವರಿಗೆ ಸ್ಫೂರ್ತಿ ಆಗಿದ್ದವಂತೆ. ಈ ವೇಳೆ ಆಡುತ್ತಿದ್ದ ನಾಟಕ, ಅಲ್ಲಿ ಮಾಡುತ್ತಿದ್ದ ಮೇಕಪ್‌ ಕಲೆ ಇವರನ್ನು, ಸಿನಿಮಾ ಹಾಗೂ ಕಿರುತೆರೆ ಜಗತ್ತಿಗೆ ತಂದು ನಿಲ್ಲಿಸಿತು. ಹಳ್ಳಿಯಲ್ಲಿದ್ದಾಗ ಇವರು ತಮ್ಮ ಪಾತ್ರಗಳಿಗೆ ತಾವೇ ಮೇಕಪ್‌ ಮಾಡಿಕೊಂಡು, ಸ್ಥಳೀಯ ಪ್ರೇಕ್ಷಕರ ಮನಗೆದ್ದಿದ್ದರು.

ಮಿಂಚುವ ಕಲಾವಿದರ ಹಿಂದೆ…: ಬಸವರಾಜ ಹುಬ್ಬಳ್ಳಿ ಅವರು ಸುಮಾರು 13 ಮೆಗಾ ಧಾರಾವಾಹಿಗಳಿಗೆ ಮೇಕಪ್‌ ಮ್ಯಾನ್‌ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲಿ “ಸತ್ಯಂ ಶಿವಂ ಸುಂದರಂ’, “ಜೋ ಜೋ ಲಾಲಿ’ ಹಾಗೂ “ಸುಂದರಿ’ ಧಾರಾವಾಹಿಗಳು ಪ್ರಮುಖ. “ಸಮಯದ ಹಿಂದೆ ಸವಾರಿ’, “ಅನುಷ್ಕಾ’ ಹಾಗೂ “100% ಲಕ್‌’ ಸಿನಿಮಾಗಳಿಗೆ ಮೇಕಪ್‌ ಮ್ಯಾನ್‌ ಆಗಿ ಕೆಲಸ ಮಾಡಿದ್ದಾರೆ. ಖ್ಯಾತ ಹಾಸ್ಯನಟ ಸಾಧು ಕೋಕಿಲ, ಹಿರಿಯ ನಟರಾದ ಶಿವರಾಮ್‌, ಉಮೇಶ್‌ ಸೇರಿದಂತೆ ಹಲವು ನಟರ ಮೊಗಕ್ಕೆ, ಮೇಕಪ್‌ನ ಕುಂಚವನ್ನು ಸ್ಪರ್ಶಿಸಿದ್ದಾರೆ.

ಹಳ್ಳಿಯಲ್ಲಿದ್ದಾಗ ನಾಟಕ ಆಡಲು ಹುರಿದುಂಬಿಸುತ್ತಿದ್ದ ಮಾಸ್ತರ್‌ ಮಲ್ಲಿಕಾರ್ಜುನ ಇಟ್ಟಂಗಿಮಠ ಗುರುಗಳ ಪ್ರೋತ್ಸಾಹವೇ, ಪ್ರಸಾಧನ ರಂಗದಲ್ಲಿ ಬೆಳೆಯುವಂತೆ ಮಾಡಿತು.
-ಬಸವರಾಜ್‌ ಹುಬ್ಬಳ್ಳಿ, ಮೇಕಪ್‌ ಆರ್ಟಿಸ್ಟ್‌

* ಪರಶುರಾಮ ಶಿವಶರಣ

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.