ಹಸಿವಿನ ಬೆಂಕಿ, ಬಾಣಲೆಯ ಬದುಕು…
ಒಂದು ಫೋಟೋ ಕತೆ
Team Udayavani, Nov 23, 2019, 5:09 AM IST
“ಬೆಂಕಿಯಿಂದ ಬಾಣಲೆಗೆ’ ಎನ್ನುವ ಮಾತುಂಟು. ಇಲ್ಲಿ ಬಾಣಲೆ ಎದುರು ಕುಳಿತಿರುವ ಜೀವಗಳ ಒಳಗೂ ಯಾರಿಗೂ ಕಾಣದ ಬೆಂಕಿಯಿದೆ. ಅದು ಹಸಿವಿನ ಬೆಂಕಿ. ಒಂದೆಡೆ ಮಗು, ಹಸಿವಿನಿಂದ ಅಳುತ್ತಾ, ತಾಯಿಯ ಚಿತ್ತವನ್ನು ತನ್ನೆಡೆ ಸೆಳೆಯಲು ಯತ್ನಿಸುತ್ತಿದ್ದರೆ, ಮತ್ತೂಂದೆಡೆ ತಾಯಿ ಶಿಲೆಯಂತೆ ಕುಳಿತಿದ್ದಾಳೆ. ಈ ಹಸಿವು ಎಷ್ಟೊಂದು ಕ್ರೂರಿ ಎನ್ನುವುದು ಆಕೆಯ ಕಣೊಟಗಳೇ ಹೇಳುವಂತಿವೆ. ನಿಶ್ಚಿತ ನೆಲೆ ಇಲ್ಲದ ಅಲೆಮಾರಿ ಬದುಕಿಗೆ ಕೊನೆಯೆಂದು ಎಂಬ ಚಿಂತೆ ಅವಳನ್ನು ಮೂಕಿಯನ್ನಾಗಿಸಿದೆ. ಅಮ್ಮನ ಈ ಸ್ಥಿತಿಯನ್ನು ಕಾಣುತ್ತಾ, ಕೇಳುತ್ತಾ ತಾನೂ ಮೂರ್ತಿಯಂತೆ ನಿಂತಿರುವ ಇನ್ನೊಂದು ಪುಟಾಣಿಯ ಕಂಗಳಲ್ಲೂ ಅಪಾರ ಕತೆಗಳುಂಟು. ಕರುಣಾರಸದ ಈ ಚಿತ್ರ ಸೆರೆಯಾಗಿದ್ದು, ಕೊಪ್ಪಳದ ಜಾತ್ರೆಯಲ್ಲಿ.
* ಪ್ರಮೋದ ಸಾಗರ್, ಬೆಂಗಳೂರು