ಕಣ್ಣಲ್ಲೇ ಕೋಪಾಗ್ನಿ ಜ್ವಾಲೆ!
Team Udayavani, Jul 20, 2019, 5:00 AM IST
ಜಂಗಲ್ ಲಾಡ್ಜ್ನ ಜೀಪ್ ಏರಿ, ಬಂಡೀಪುರ ಕಾಡಿನ ಒಳಗೆ ಕ್ಯಾಮೆರಾ ಹೆಗಲಿಗೇರಿಸಿ ಹೊರಟ ನಮಗೆ ಮೋಡ ಕವಿದ ವಾತಾವರಣ ನೋಡಿ, ಎಲ್ಲ ನಿರೀಕ್ಷೆಗಳೂ ಠುಸ್ಸೆನ್ನುತ್ತವೇನೋ ಎಂಬ ದಿಗಿಲಿತ್ತು. ಆದರೆ, ಜೀಪಿನ ಡ್ರೈವರ್, “ಸಾರ್… ಅಲ್ನೋಡಿ’ ಎಂದಾಗ, ನಮ್ಮ ಎದೆಬಡಿತ ಒಮ್ಮೆಲೆ ದ್ವಿಗುಣವಾಗಿ, ಎಲ್ಲರೂ “ಓಹ್’ ಎಂದು ಬಾಯೆ¤ರೆದವು! ಮಧ್ಯಾಹ್ನದ ಭರ್ಜರಿ ಊಟ ಸವಿದು, ಮರದ ಮೇಲೆ ಮಲಗಿದ್ದ ಚಿರತೆ ತನ್ನ ಕಣ್ಣಲ್ಲೇ ಕೋಪಾಗ್ನಿ ಜ್ವಾಲೆ ಉಗುಳುತ್ತಿತ್ತು. ಜೀಪಿನ ಹಾಗೂ ಜನರ ಶಬ್ದ ಕೇಳಿ, ಅದರ ಏಕಾಂತ ಭಂಗವಾಗಿದ್ದರಿಂದ, ಅದು ಆ ಕ್ಷಣ ವ್ಯಘ್ರಗೊಂಡಿತ್ತು. ನಮ್ಮತ್ತ ಗುರಾಯಿಸುತ್ತಲೇ, ನಿಧಾನಕ್ಕೆ ಎದ್ದು, ಮರದಿಂದ ಕೆಳಗೆ ಇಳಿದು, ಮರೆಗೆ ಸರಿಯಿತು.
– ಪ್ರದೀಪ್ ಗಾಣಕಲ್, ಹವ್ಯಾಸಿ ಛಾಯಾಚಿತ್ರಗ್ರಾಹಕ