ದಾಸೋಹದ ಮಹಾಮನೆ

ಶರಣ ಬಸವೇಶ್ವರ ಸಂಸ್ಥಾನದ ಜವಾರಿ ರುಚಿ

Team Udayavani, Feb 29, 2020, 6:07 AM IST

dasohada

ಮಳೆ ಎಡೆಬಿಡದೆ ಸುರಿಯುತ್ತಿತ್ತು. ಹಾಗೆ ಸುರಿಯುತ್ತಾ ಸುಮಾರು ದಿನಗಳೇ ಆಗಿದ್ದವು. ಅಡುಗೆಮನೆಯಲ್ಲಿ ಒಲೆ ಉರಿಸಲೂ ಕಟ್ಟಿಗೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಮನೆಯ ಚಾವಣಿಯನ್ನು ಬೀಳಿಸಿ, ಕಟ್ಟಿಗೆಗಳನ್ನು ಒಲೆ ಉರಿಸಲು ಬಳಿಸಿ, ಹಸಿವು ನೀಗಿಸಿದ ಪುಣ್ಯಕ್ಷೇತ್ರ ಕಲಬುರಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ. 1746ರಿಂದ ಅಂದರೆ, ಶರಣಬಸವೇಶ್ವರರ ಜೀವಿತ ಕಾಲದಿಂದ ಇಂದಿನವರೆಗೆ ದಾಸೋಹ ನಡೆದುಬಂದಿದೆ.

ದೇಶವು ಪರಕೀಯರ ದಾಸ್ಯದಲ್ಲಿದ್ದಾಗಲೂ, ದಾಸೋಹ ಕಾಯಕ ಮಾಡಿಕೊಂಡು ಬಂದ ಶರಣಬಸವೇಶ್ವರರ ದಾಸೋಹ ಮಹಾಮನೆ ಇದು. ಸಾಲ ಮಾಡಿಯೂ ದಾಸೋಹ ಬಡಿಸಿದ ಕ್ಷೇತ್ರ ಇದು. ತಾವೇ ಕೃಷಿ ಕಾಯಕ ಮಾಡಿ, ದಾಸೋಹಕ್ಕೆ ದವಸಧಾನ್ಯಗಳನ್ನು ಸಂಗ್ರಹಿಸಿದ ಶರಣ ಬಸವೇಶ್ವರರ ಸಂಸ್ಥಾನದ ದಾಸೋಹದ ಕತೆಗಳು ಮುಗಿಯುವಂಥದ್ದೇ ಅಲ್ಲ.

ಭಕ್ತರು ಮಾತ್ರವಲ್ಲ. ಈ ದಾಸೋಹದಲ್ಲಿ ಊಟ ಮಾಡಿ, ವಿದ್ಯಾಭ್ಯಾಸ ಕಲಿತು, ಪದವಿ ಪಡೆದವರು ಇಂದು ದೇಶದ ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಲ್ಲಿನ ತ್ರಿವಿಧ ದಾಸೋಹ ಹಲವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ನಿವೃತ್ತ ಎಸ್‌.ಪಿ. ಎಸ್‌. ಬಸವರಾಜ ಅವರು ಇಲ್ಲಿಯೇ ದಾಸೋಹ ಸ್ವೀಕರಿಸಿ, ಬದುಕಿನಲ್ಲಿ ಸಾಧನೆಗೈದವರು.

ನಿತ್ಯ ದಾಸೋಹ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿದಿನ ದಾಸೋಹ ನೀಡುವ ಧಾರ್ಮಿಕ ಕೇಂದ್ರಗಳೇ ಕಡಿಮೆ. ಈ ನಿಟ್ಟಿನಲ್ಲಿ ನಿತ್ಯ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಕನಿಷ್ಠ 1200 ಸದ್ಭಕ್ತರು ಊಟಕ್ಕೆ ಸಾಕ್ಷಿಯಾಗುತ್ತಾರೆ. ಹೊಟ್ಟೆ ತುಂಬುವಷ್ಟು ಸಂತೃಪ್ತ ಭೋಜನ ನೀಡುವುದು ಇಲ್ಲಿನ ವಿಶೇಷ.

ಭಕ್ಷ್ಯ ಸಮಾಚಾರ: ಇಲ್ಲಿ ಅನ್ನ- ಸಾಂಬಾರ್‌ ಜತೆಗೆ ಕೆಲವೊಮ್ಮೆ ಜೋಳದ ರೊಟ್ಟಿಯನ್ನೂ ಬಡಿಸಲಾಗುತ್ತದೆ. ಇದರೊಂದಿಗೆ ಭಕ್ತರು ನೀಡಿದ ನೈವೇದ್ಯವೂ ಊಟದ ರುಚಿಯನ್ನು ಹೆಚ್ಚಿಸುತ್ತದೆ.

ಅಡುಗೆಮನೆ ಒಳಗೆ…: ಎರಡು ಬೃಹತ್‌ ಸ್ಟೀಮ್‌ಗಳನ್ನು ಬಳಸಿ ಅನ್ನ- ಸಾಂಬಾರು ತಯಾರಿಸುತ್ತಾರೆ. ಹಾಗೆಯೇ ಸಾಂಪ್ರದಾಯಿಕವಾಗಿ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆಯೂ ಇಲ್ಲಿದೆ. ಸಾವಿರಾರು ಮಂದಿಗೆ ಊಟ ತಯಾರಿಸುವಾಗ ಪಾಕಶಾಲೆಯ ಶುಚಿತ್ವ ಕಾಪಾಡುವುದೇ ದೊಡ್ಡ ಸಮಸ್ಯೆ. ಆದರೆ, ಇಲ್ಲಿನ ಅಡುಗೆಮನೆ ಸ್ವತ್ಛ, ಸುಂದರ.

ದಾಸೋಹದ ಹಿಂದಿನ ಶಕ್ತಿ: ಸುಸಜ್ಜಿತ ಅಡುಗೆಮನೆ ಜತೆಗೆ ನಿಪುಣ ಬಾಣಸಿಗರು ಇಲ್ಲಿನ ದಾಸೋಹದ ಹಿಂದಿನ ಶಕ್ತಿ ಅಂತಲೇ ಹೇಳಬಹುದು. 10 ಮಂದಿ ಬಾಣಸಿಗರು, ಜವಾರಿ ಶೈಲಿಯ ಅಡುಗೆಯನ್ನು ತಯಾರಿಸುತ್ತಾರೆ. ಇವರಿಗೆ ಸಹಾಯಕರಾಗಿ ನಾಲ್ಕೈದು ಸಿಬ್ಬಂದಿಗಳಿದ್ದಾರೆ.

ಊಟದ ಸಮಯ: ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ

ಸಂಖ್ಯಾಸೋಜಿಗ
5- ಸಹಾಯಕ ಸಿಬ್ಬಂದಿ
10- ಬಾಣಸಿಗರಿಂದ ಅಡುಗೆ ತಯಾರಿ
1200- ಭಕ್ತರಿಗೆ ನಿತ್ಯ ದಾಸೋಹ
30- ನಿಮಿಷಗಳಲ್ಲಿ ಅಡುಗೆ ತಯಾರಿ
50- ಕಿಲೋ ತರಕಾರಿ ಬಳಕೆ
4,50,000- ವಾರ್ಷಿಕ ಇಷ್ಟು ಮಂದಿಗೆ ದಾಸೋಹ (ಅಂದಾಜು)

* ಡಾ. ಸುರೇಶ ನಂದಗಾಂವ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.