ಲಿಂಗದ ಮೇಲೆ ಕೊಂಬುಗಳು ಮೂಡಿದವು
Team Udayavani, Nov 9, 2019, 5:05 AM IST
ಪುಣ್ಯಕ್ಷೇತ್ರ ಶೃಂಗೇರಿ ಬಳಿ ಇರುವ ಋಷ್ಯಶೃಂಗಪುರ “ಕಿಗ್ಗ’ ಎಂದೇ ಕರೆಯಲ್ಪಡುತ್ತದೆ. ಈ ಊರಿಗೆ ಋಷ್ಯಶೃಂಗಪುರ ಎಂಬ ಹೆಸರು ಬರಲು ಕಾರಣ, ರಾಮಾಯಣದಲ್ಲಿ ಬರುವ ಋಷ್ಯಶೃಂಗ ಋಷಿ. ಆತನಿಗೆ ಹಣೆಯ ಮೇಲೆ ಕೊಂಬುಗಳಿದ್ದವು. ಋಷ್ಯಶೃಂಗ, ರೋಮಪಾದ ಎಂಬ ರಾಜನ ಮಗಳನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದ. ಏಕಾಏಕಿ ಸಂಸಾರದಲ್ಲಿ ವಿರಕ್ತಿ ಮೂಡಿ ಎಲ್ಲರನ್ನೂ ಬಿಟ್ಟು ಕಾಡು ಸೇರಿ ಲಿಂಗಪೂಜೆಯಲ್ಲಿ ಮಗ್ನನಾಗಿ, ಪ್ರಾಣ ತ್ಯಾಗ ಮಾಡಿದ. ಆತನ ದೇಹದಿಂದ ಆತ್ಮ ಹೊರಬರುವ ಸಮಯದಲ್ಲಿ ಮಿಂಚೊಂದು ಹರಿಯಿತು. ಆ ಮಿಂಚು, ಎದುರಿದ್ದ ಲಿಂಗದ ಒಳಗೆ ಐಕ್ಯವಾಯಿತು. ಒಡನೆಯೇ ಲಿಂಗಕ್ಕೆ ಕೊಂಬುಗಳು ಮೂಡಿದವು. ಈ ಲಿಂಗ ಇಂದಿಗೂ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿದೆ. ಅದರಿಂದಾಗಿಯೇ ಊರಿಗೆ ಋಷ್ಯಶೃಂಗಪುರ ಎಂಬ ಹೆಸರು ಬಂದಿದೆ.
* ಮಹಾಬಲ ಭಟ್, ಶೃಂಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ