ಬಬ್ರುವಾಹನ ನಾಗಮಣಿ ತಂದ ಊರು
ಪುರದ ಪುಣ್ಯಂ- ನಾಗಮಂಗಲ
Team Udayavani, Jul 20, 2019, 5:00 AM IST
ಲೋಹಿತ ವಂಶದವನೊಬ್ಬನಿಗೆ ದೇವರಿರುವ ಹುತ್ತದ ಕನಸು ಬೀಳುತ್ತೆ. ಅದನ್ನು ಆತ ಹುಡುಕುತ್ತಾ ಇಲ್ಲಿಗೆ ಬಂದಾಗ, ನರಸಿಂಹ ಸ್ವಾಮಿಯು ಪ್ರತ್ಯಕ್ಷನಾಗುತ್ತಾನೆ. ನರಸಿಂಹನ ಸುತ್ತ, ಬೃಹತ್ ನಾಗರಹಾವು ಸುತ್ತಿಕೊಂಡಿದ್ದರಿಂದ, ಈ ತಾಣಕ್ಕೆ ನಾಗಮಂಡಲವೆಂದು ಕರೆಯುತ್ತಾನೆ ಎಂಬುದು ಪುರಾಣ ಪ್ರತೀತಿ. ಮುಂದೆ ಇದೇ ಪ್ರದೇಶ ನಾಗಮಂಗಲ ಆಗಿದ್ದಿರಬಹುದು. ಮಹಾಭಾರತದಲ್ಲಿ ಅರ್ಜುನನ ಮಗ ಬಬ್ರುವಾಹನ, ಇಲ್ಲಿಂದಲೇ ನಾಗಮಣಿಯನ್ನು ತಂದು, ಯುದ್ಧದಲ್ಲಿ ಶಿರಚ್ಛೇದಗೊಂಡ ತನ್ನ ತಂದೆಗೆ ಪುನರ್ಜನ್ಮ ನೀಡುತ್ತಾನೆಂಬ ಕತೆಯೂ ಇದೆ. ನಾಗಮಂಗಲ, ಮಂಡ್ಯದಿಂದ 40 ಕಿ.ಮೀ. ದೂರದಲ್ಲಿದೆ.
– ವೈಷ್ಣವಿ ಗೌಡ, ಮಂಡ್ಯ